ಗ್ರಾನೈಟ್ನ ವಾಸ್ತುಶಿಲ್ಪ ವೈಭವ ಹೊಂದಿರುವ ಈ ದೇವಸ್ಥಾನವನ್ನು 18ನೇ ಶತಮಾನದಲ್ಲಿ ಕೇರಳವನ್ನು ಆಳಿದ್ದ ತಿರುವಾಂಕೂರು ರಾಜಮನೆತನದವರು ಮರುನಿರ್ಮಾಣ ಮಾಡಿದ್ದರು. ಅನಂತಪದ್ಮನಾಭ ಸ್ವಾಮಿಯು (ವಿಷ್ಣು) ತಿರುವಾಂಕೂರು ರಾಜಮನೆತನದ ಕುಲದೇವರಾಗಿದ್ದರು. ಸ್ವಾತಂತ್ರ್ಯಾ ನಂತರವೂ ಈ ಮನೆತನದ ಟ್ರಸ್ಟ್, ಈ ದೇವಸ್ಥಾನದ ಆಡಳಿತ ನಡೆಸುತ್ತಿತ್ತು. 2011ರಲ್ಲಿ ಕೇರಳ ಹೈಕೋರ್ಟ್ ಈ ದೇವಸ್ಥಾನವನ್ನು ಸ್ವಾಧೀನಕ್ಕೆ ತೆಗೆದುಕೊಂಡು, ಆಡಳಿತಕ್ಕೆ ಟ್ರಸ್ಟ್ ಒಂದನ್ನು ರಚಿಸುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ತಿರುವಾಂಕೂರು ರಾಜಮನೆತನದವರೂ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಸೂಚನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.