<p><strong>ಮುಂಬೈ: </strong>ಇಲ್ಲಿನ ದಾದರ್ನ ಹಿಂದೂ ಕಾಲೊನಿಯಲ್ಲಿರುವ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆ ‘ರಾಜಗೃಹ’ದಉದ್ಯಾನದತ್ತ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಲ್ಲುಗಳನ್ನು ತೂರಿ, ವಿಧ್ವಂಸಕ ಕೃತ್ಯ ಎಸಗಿದ್ದಾರೆ.</p>.<p>ಕಿಟಕಿ ಗಾಜುಗಳು ಒಡೆದಿದ್ದು, ಸಿಸಿ ಟಿವಿ ಕ್ಯಾಮೆರಾಗಳು, ಹೂಕುಂಡಗಳಿಗೆ ಹಾನಿಯಾಗಿದೆ ಎಂದು ಮಾತುಂಗ ಪೊಲೀಸರು ತಿಳಿಸಿದ್ದು, ಘಟನೆಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.</p>.<p>ಮೂರು ಅಂತಸ್ತಿನ ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ‘ಅಂಬೇಡ್ಕರ್ ಮ್ಯೂಸಿಯಂ’ ಎಂದೇ ಕರೆಯಲಾಗುವ ಇಲ್ಲಿ, ಬಾಬಾಸಾಹೇಬ್ ಅವರ ಪುಸ್ತಕಗಳು, ಅಪರೂಪದ ಚಿತ್ರಗಳು, ಹೂವಿನ ಕುಂಡಗಳು, ಹಲವಾರು ಕಲಾಕೃತಿಗಳನ್ನು ಸಂಗ್ರಹಿಸಿ ಇಡಲಾಗಿದೆ.</p>.<p>ಈ ಮನೆಯಲ್ಲಿ ಬಾಬಾಸಾಹೇಬ್ ಅವರ ಸೊಸೆ, ಮೊಮ್ಮಕ್ಕಳಾದ ವಂಚಿತ್ ಬಹುಜನ ಆಘಾಡಿಯ ಮುಖಂಡ ಪ್ರಕಾಶ್ ಅಂಬೇಡ್ಕರ್, ಆನಂದರಾವ್ ಹಾಗೂ ಭೀಮ್ರಾವ್ ವಾಸಿಸುತ್ತಿದ್ದಾರೆ.</p>.<p>‘ಇಬ್ಬರು ಮನೆಯ ಉದ್ಯಾನದತ್ತ ಕಲ್ಲುಗಳನ್ನು ತೂರಿ, ಸಿಸಿ ಟಿವಿ ಕ್ಯಾಮೆರಾಕ್ಕೆ ಹಾನಿ ಮಾಡಿದ್ದಾರೆ. ಪೊಲೀಸರು ಈ ವಿಷಯದಲ್ಲಿ ಉತ್ತಮವಾಗಿ ತಮ್ಮ ಕಾರ್ಯ ಮಾಡುತ್ತಿದ್ದು, ಎಲ್ಲರೂ ಶಾಂತತೆಯನ್ನು ಕಾಪಾಡಬೇಕು. ಮನೆ ಮುಂದೆ ಜಮಾಯಿಸಬಾರದು’ ಎಂದುಪ್ರಕಾಶ್ ಅಂಬೇಡ್ಕರ್ ಅವರು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.</p>.<p>ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.</p>.<p>ಆಲ್ಇಂಡಿಯಾ ಪ್ರೊಫೇಷನಲ್ ಕಾಂಗ್ರೆಸ್ ಸೇರಿದಂತೆ ಹಲವಾರು ಘಟನೆಯನ್ನು ಖಂಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿವೆ.</p>.<p><strong>ಕಠಿಣ ಕ್ರಮ:</strong> ಈ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.</p>.<p>‘ರಾಜಗೃಹ’ ಪ್ರವೇಶಿಸಿ ವಿಧ್ವಂಸಕ ಕೃತ್ಯ ನಡೆಸಿರುವುದು ಆಘಾತಕಾರಿ.ಅಂಬೇಡ್ಕರ್ ವಾದವನ್ನು ಒಪ್ಪುವವರಷ್ಟೇ ಅಲ್ಲದೆ ಇತರರೂ ಈ ಸ್ಥಳದ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ.</p>.<p>‘ನನ್ನ ಪ್ರಕಾರ ಈ ಪ್ರದೇಶ ರಾಜ್ಯದ ಜನರಿಗೆಲ್ಲರಿಗೂ ಪುಣ್ಯಕ್ಷೇತ್ರವಿದ್ದಂತೆ. ಇಲ್ಲಿ ಇಂತಹ ಘಟನೆ ನಡೆಯುವುದನ್ನು ಸಹಿಸುವುದಿಲ್ಲ‘ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಇಲ್ಲಿನ ದಾದರ್ನ ಹಿಂದೂ ಕಾಲೊನಿಯಲ್ಲಿರುವ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆ ‘ರಾಜಗೃಹ’ದಉದ್ಯಾನದತ್ತ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಲ್ಲುಗಳನ್ನು ತೂರಿ, ವಿಧ್ವಂಸಕ ಕೃತ್ಯ ಎಸಗಿದ್ದಾರೆ.</p>.<p>ಕಿಟಕಿ ಗಾಜುಗಳು ಒಡೆದಿದ್ದು, ಸಿಸಿ ಟಿವಿ ಕ್ಯಾಮೆರಾಗಳು, ಹೂಕುಂಡಗಳಿಗೆ ಹಾನಿಯಾಗಿದೆ ಎಂದು ಮಾತುಂಗ ಪೊಲೀಸರು ತಿಳಿಸಿದ್ದು, ಘಟನೆಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.</p>.<p>ಮೂರು ಅಂತಸ್ತಿನ ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ‘ಅಂಬೇಡ್ಕರ್ ಮ್ಯೂಸಿಯಂ’ ಎಂದೇ ಕರೆಯಲಾಗುವ ಇಲ್ಲಿ, ಬಾಬಾಸಾಹೇಬ್ ಅವರ ಪುಸ್ತಕಗಳು, ಅಪರೂಪದ ಚಿತ್ರಗಳು, ಹೂವಿನ ಕುಂಡಗಳು, ಹಲವಾರು ಕಲಾಕೃತಿಗಳನ್ನು ಸಂಗ್ರಹಿಸಿ ಇಡಲಾಗಿದೆ.</p>.<p>ಈ ಮನೆಯಲ್ಲಿ ಬಾಬಾಸಾಹೇಬ್ ಅವರ ಸೊಸೆ, ಮೊಮ್ಮಕ್ಕಳಾದ ವಂಚಿತ್ ಬಹುಜನ ಆಘಾಡಿಯ ಮುಖಂಡ ಪ್ರಕಾಶ್ ಅಂಬೇಡ್ಕರ್, ಆನಂದರಾವ್ ಹಾಗೂ ಭೀಮ್ರಾವ್ ವಾಸಿಸುತ್ತಿದ್ದಾರೆ.</p>.<p>‘ಇಬ್ಬರು ಮನೆಯ ಉದ್ಯಾನದತ್ತ ಕಲ್ಲುಗಳನ್ನು ತೂರಿ, ಸಿಸಿ ಟಿವಿ ಕ್ಯಾಮೆರಾಕ್ಕೆ ಹಾನಿ ಮಾಡಿದ್ದಾರೆ. ಪೊಲೀಸರು ಈ ವಿಷಯದಲ್ಲಿ ಉತ್ತಮವಾಗಿ ತಮ್ಮ ಕಾರ್ಯ ಮಾಡುತ್ತಿದ್ದು, ಎಲ್ಲರೂ ಶಾಂತತೆಯನ್ನು ಕಾಪಾಡಬೇಕು. ಮನೆ ಮುಂದೆ ಜಮಾಯಿಸಬಾರದು’ ಎಂದುಪ್ರಕಾಶ್ ಅಂಬೇಡ್ಕರ್ ಅವರು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.</p>.<p>ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.</p>.<p>ಆಲ್ಇಂಡಿಯಾ ಪ್ರೊಫೇಷನಲ್ ಕಾಂಗ್ರೆಸ್ ಸೇರಿದಂತೆ ಹಲವಾರು ಘಟನೆಯನ್ನು ಖಂಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿವೆ.</p>.<p><strong>ಕಠಿಣ ಕ್ರಮ:</strong> ಈ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.</p>.<p>‘ರಾಜಗೃಹ’ ಪ್ರವೇಶಿಸಿ ವಿಧ್ವಂಸಕ ಕೃತ್ಯ ನಡೆಸಿರುವುದು ಆಘಾತಕಾರಿ.ಅಂಬೇಡ್ಕರ್ ವಾದವನ್ನು ಒಪ್ಪುವವರಷ್ಟೇ ಅಲ್ಲದೆ ಇತರರೂ ಈ ಸ್ಥಳದ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ.</p>.<p>‘ನನ್ನ ಪ್ರಕಾರ ಈ ಪ್ರದೇಶ ರಾಜ್ಯದ ಜನರಿಗೆಲ್ಲರಿಗೂ ಪುಣ್ಯಕ್ಷೇತ್ರವಿದ್ದಂತೆ. ಇಲ್ಲಿ ಇಂತಹ ಘಟನೆ ನಡೆಯುವುದನ್ನು ಸಹಿಸುವುದಿಲ್ಲ‘ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>