ಮಾನಸ ಸರೋವರಕ್ಕೆ ತೆರಳಲು ನೆರವಾಗುವ ಹಾಗೂ ಸಮುದ್ರ ಮಟ್ಟದಿಂದ 17,000 ಅಡಿ ಎತ್ತರದ ಪ್ರದೇಶದಲ್ಲಿರುವ ರಸ್ತೆಯನ್ನು ಭಾರತ ಶುಕ್ರವಾರ ಉದ್ಘಾಟಿಸಿತ್ತು. ಇದಕ್ಕೆ ನೇಪಾಳ ತಕರಾರು ವ್ಯಕ್ತಪಡಿಸಿತ್ತು. ‘ಇದು ಭಾರತದ ಗಡಿಯೊಳಗಿನ ಕಾಮಗಾರಿ. ವಿವಾದಗಳನ್ನು ಶಾಂತಿಯುತವಾಗಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ’ ಎಂದು ಭಾರತವೂ ಪ್ರತ್ಯುತ್ತರ ನೀಡಿತ್ತು.