‘ಶವವನ್ನು ತೆಗೆದುಕೊಂಡು ಹೋಗಲು ಆಂಬುಲೆನ್ಸ್ನಲ್ಲಿ ಬಂದ ಬಿಬಿಎಂಪಿ ಸಿಬ್ಬಂದಿ, ಶವವನ್ನು ಸುತ್ತಲು ಪಾಲಿಥಿನ್ ಕವರ್ ನೀವೇ ತರಬೇಕು, ನೀವೇ ಶವವನ್ನು ಆಂಬುಲೆನ್ಸ್ ಒಳಗೆ ಹಾಕಬೇಕು ಎಂದು ಹೇಳಿದರು. ಎಲ್ಲವನ್ನೂ ನಾವೇ ಮಾಡಬೇಕು ಎಂದರೆ ಬಿಬಿಎಂಪಿಗೆ ಮಾಹಿತಿ ಏಕೆ ನೀಡಬೇಕು. ಶವಸಂಸ್ಕಾರದ ವೇಳೆ ಸೋಂಕು ಹರಡಬಾರದು, ನಿರ್ದಿಷ್ಟ ಮಾರ್ಗಸೂಚಿಗಳ ಪ್ರಕಾರವೇ ಕೊರೊನಾ ಸೋಂಕಿತರ ಶವವನ್ನು ಸಾಗಿಸಬೇಕು ಎಂಬ ಕಾರಣಕ್ಕೆ ಬಿಬಿಎಂಪಿಗೆ ನಾವು ಮಾಹಿತಿ ನೀಡುತ್ತೇವಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.