ತಬ್ಲೀಗಿ ಜಮಾತ್ನಲ್ಲಿ ಭಾಗವಹಿಸಿ ಕೊರೊನಾ ತಗುಲಿದ್ದ, ಸುಲ್ತನ್ಪುರಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ತಮಿಳುನಾಡಿನ ವ್ಯಕ್ತಿಯೊಬ್ಬರು ಈಗಾಗಲೇ ಪ್ಲಾಸ್ಮಾ ದಾನ ಮಾಡಿದ್ದಾರೆ. ‘ಬೇರೆಯವರ ಜೀವ ರಕ್ಷಿಸುವ ಸಲುವಾಗಿ ಮಾನವೀಯತೆಯ ದೃಷ್ಟಿಯಿಂದ ಪ್ಲಾಸ್ಮಾ ದಾನ ಮಾಡಿದ್ದೇನೆ. ನನ್ನಂತೆಯೇ ಕೊರೊನಾದಿಂದ ಗುಣಮುಖರಾದ ಅನೇಕರು ದಾನ ಮಾಡಲು ಮುಂದೆ ಬರುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.