ದೂರದ ಸ್ಥಳವನ್ನು ಕರಾರುವಕ್ಕಾಗಿ ತಲುಪುವುದು, ಚಂದ್ರನ ಕಕ್ಷೆಗೆ ನಿಗದಿತ ಸಮಯದಲ್ಲಿ ಸೇರುವುದು, ದೂಳಿನಿಂದಾಗಬಹುದಾದ ಹಾನಿ ತಡೆಗಟ್ಟುವುದು, ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ನೌಕೆ ಇಳಿಸುವುದು– ಇವು ಚಂದ್ರಯಾನದ ಅಪಾಯಕಾರಿ ಸವಾಲುಗಳು. ಇವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದರೆ, ಭಾರತವು ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ದೇಶ ಎನಿಸಿಕೊಳ್ಳಲಿದೆ.