ರಮಾಡ ಹೋಟೆಲ್ ಬಳಿ ಧರಣಿ ಕುಳಿತಿದ್ದ ದಿಗ್ವಿಜಯ ಸಿಂಗ್ ಅವರನ್ನುಪೊಲೀಸರು ಬಂಧಿಸಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದೀಗ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಿಂಗ್ ಹೇಳಿದ್ದಾರೆ.
ಬಿಜೆಪಿ ಶಾಸಕ ಅರವಿಂದ ಭದೋರಿಯಾ ಮತ್ತು ಸಂಸದರೊಬ್ಬರನ್ನು ಹಿಡಿದಿರಿಸಲಾಗಿದೆ.ನಾನು ನನ್ನ ಶಾಸಕರನ್ನು, ರಾಜ್ಯಸಭೆಯ ಮತದಾರರೂ ಆದ, ನನ್ನ ಪಕ್ಷದ ಜನರನ್ನು ಯಾಕೆಭೇಟಿ ಮಾಡಲು ಬಿಡುವುದಿಲ್ಲ. ನಮ್ಮ ಮಧ್ಯೆ ಬಿಜೆಪಿ ಏನು ಮಾಡುತ್ತಿದೆ ಎಂದು ದಿಗ್ವಿಜಯ ಸಿಂಗ್ ಪ್ರಶ್ನಿಸಿದ್ದಾರೆ.