<figcaption>""</figcaption>.<figcaption>""</figcaption>.<p>ಕೊರೊನಾ ಪಸರಿಸುವಿಕೆ ತಡೆಗಾಗಿ ಹೇರಲಾಗಿರುವ ಲಾಕ್ಡೌನ್ ರಾಜ್ಯದ ಬಡವರು, ಕೂಲಿ ಕಾರ್ಮಿರು, ರೈತರು ಸೇರಿದಂತೆ ಎಲ್ಲ ಶ್ರಮಿಕ ವರ್ಗವನ್ನು ಇನ್ನಿಲ್ಲದ ಕಷ್ಟಕ್ಕೆ ತಳ್ಳಿದೆ. ದಿನನಿತ್ಯದ ಆಹಾರ, ಔಷಧ, ಸರ್ಕಾರಿ ಸವಲತ್ತುಗಳು ಸಿಗದೆ ಈ ವರ್ಗ ಪರಿತಪಿಸುತ್ತಿದೆ.</p>.<p>ಕರ್ನಾಟಕ ಜನಶಕ್ತಿ ಸಂಘಟನೆಯ ಸಾಮಾಜಿಕ ಅಧ್ಯಯನ ಸಮಿತಿಯು ರಾಜ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜನರು ತಮ್ಮ ನಿತ್ಯದ ಪಡಿಪಾಟಲನ್ನು ಬಿಚ್ಚಿಟ್ಟಿದ್ದಾರೆ. ಈ ಸಮುದಾಯಗಳಿಗೆ ಆಹಾರ–ಆರೋಗ್ಯ–ಆದಾಯದ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಮಿತಿ ನೆನಪಿಸಿದೆ.</p>.<p>***</p>.<p><strong>ಹೀಗಿತ್ತು ಸಮೀಕ್ಷೆ</strong></p>.<p>*ಬೆಂಗಳೂರು ಸೇರಿ 15 ಜಿಲ್ಲೆಗಳಲ್ಲಿ ಸಮೀಕ್ಷೆ</p>.<p>*ಏ.22ರಿಂದ 28ರ ಅವಧಿಯಲ್ಲಿ ಅಧ್ಯಯನ</p>.<p>*ಜೀವನೋಪಾಯ, ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿತ್ತು</p>.<p>*ರೈತರು, ರೈತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ದೇವದಾಸಿಯರು, ಗುತ್ತಿಗೆ ಕಾರ್ಮಿಕರು, ನಿವೃತ್ತ ಸರ್ಕಾರಿ ನೌಕರರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಹಲವು ಸಮುದಾಯಗಳು ಸಮೀಕ್ಷೆಯಲ್ಲಿ ಭಾಗಿ</p>.<p><strong>ಸರ್ಕಾರಕ್ಕೆ ಅಧ್ಯಯನ ತಂಡದ ಶಿಫಾರಸು</strong></p>.<p>*ಎಲ್ಲರಿಗೂ ಮುಂದಿನ 3 ತಿಂಗಳು ಸಮಗ್ರ ಆಹಾರ ಪದಾರ್ಥ ಒಳಗೊಂಡ ಉಚಿತ ದಿನಸಿ ಕಿಟ್ ವಿತರಿಸಬೇಕು</p>.<p>*ತಿಂಗಳಿಗೆ ₹7000ರಂತೆ3 ತಿಂಗಳ ಸಂಬಳವನ್ನು ಮುಂಚಿತವಾಗಿ ಆಪತ್ಕಾಲದ ಹಣವಾಗಿ ನೀಡಬೇಕು</p>.<p>*ನರೇಗಾ ಕೂಲಿಯನ್ನು ₹375ಕ್ಕೆ ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಕಟುಂಬದ ಒಬ್ಬ ಸದಸ್ಯರಿಗೆ ಕೆಲಸ ಎಂಬ ನಿಯಮ ತೆಗೆದುಹಾಕು, ಒಡಿಶಾ ಮಾದರಿಯಂತೆ ನಗರ ಪ್ರದೇಶಕ್ಕೂ ವಿಸ್ತರಿಸಬೇಕು</p>.<p>*ಲಾಕ್ಡೌನ್ ಕಾಲದ ಸಂಬಳವನ್ನು ಎಲ್ಲ ಕಾರ್ಮಿಕರಿಗೆ ಖಾತ್ರಿಪಡಿಸಬೇಕು</p>.<p>*ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡಬೇಕು; ರೈತರಿಗೆ ಹಣಕಾಸು ನೆರವು ಒದಗಿಸಬೇಕು. ಶೂನ್ಯ ಬಡ್ಡಿದರದ ಸಾಲದ ವ್ಯಸವ್ಥೆ ಮಾಡಬೇಕು</p>.<p>*ರೈತರು ಬೆಳೆದ ಎಲ್ಲ ಬೆಳೆಗಳನ್ನು ಖರೀದಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ತಲುಪಿಸಬೇಕು. ಬೆಳೆಗೆ ಮಾರುಕಟ್ಟೆ ಹಾಗೂ ವೈಜ್ಞಾನಿಕ ದರ ನಿಗದಿಪಡಿಡಬೇಕು</p>.<p>*ಕೊರೊನಾ ಕಾರಣದಿಂದ ನಷ್ಟದಲ್ಲಿರುವ ಸಣ್ಣ, ಮಧ್ಯಮ ಹಾಗೂ ಗುಡಿ ಕೈಗಾರಿಕೆಗಳಿಗೆ ಸಹಾಯಧನ ಘೋಷಿಸಬೇಕು</p>.<p>*ಶ್ರಮಿಕರ ಮಕ್ಕಳು ಓದುತ್ತಿರುವ ಸರ್ಕಾರಿ ಹಾಗೂ ಖಾಸಗಿ ಶಾಲಾ–ಕಾಲೇಜುಗಳ ಶುಲ್ಕದಿಂದ ವಿನಾಯಿತಿ ನೀಡಬೇಕು</p>.<p>*ಲಾಕ್ಡೌನ್ ಮುಗಿದ ಬಳಿಕ ಬಡವರ ಹಿತದೃಷ್ಟಿಯಿಂದ ಮದ್ಯ ಮಾರಾಟದ ಮೇಲಿನ ನಿಷೇಧ ಮುಂದುವರಿಸಬೇಕು</p>.<p>*ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು</p>.<p>*ಬದುಕಿಗಾಗಿ ವೇಶ್ಯಾವೃತ್ತಿ ಮಾಡುವವರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಎಚ್ಐವಿ ಮಾತ್ರ ಪೂರೈಸಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<figcaption>""</figcaption>.<p>ಕೊರೊನಾ ಪಸರಿಸುವಿಕೆ ತಡೆಗಾಗಿ ಹೇರಲಾಗಿರುವ ಲಾಕ್ಡೌನ್ ರಾಜ್ಯದ ಬಡವರು, ಕೂಲಿ ಕಾರ್ಮಿರು, ರೈತರು ಸೇರಿದಂತೆ ಎಲ್ಲ ಶ್ರಮಿಕ ವರ್ಗವನ್ನು ಇನ್ನಿಲ್ಲದ ಕಷ್ಟಕ್ಕೆ ತಳ್ಳಿದೆ. ದಿನನಿತ್ಯದ ಆಹಾರ, ಔಷಧ, ಸರ್ಕಾರಿ ಸವಲತ್ತುಗಳು ಸಿಗದೆ ಈ ವರ್ಗ ಪರಿತಪಿಸುತ್ತಿದೆ.</p>.<p>ಕರ್ನಾಟಕ ಜನಶಕ್ತಿ ಸಂಘಟನೆಯ ಸಾಮಾಜಿಕ ಅಧ್ಯಯನ ಸಮಿತಿಯು ರಾಜ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜನರು ತಮ್ಮ ನಿತ್ಯದ ಪಡಿಪಾಟಲನ್ನು ಬಿಚ್ಚಿಟ್ಟಿದ್ದಾರೆ. ಈ ಸಮುದಾಯಗಳಿಗೆ ಆಹಾರ–ಆರೋಗ್ಯ–ಆದಾಯದ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಮಿತಿ ನೆನಪಿಸಿದೆ.</p>.<p>***</p>.<p><strong>ಹೀಗಿತ್ತು ಸಮೀಕ್ಷೆ</strong></p>.<p>*ಬೆಂಗಳೂರು ಸೇರಿ 15 ಜಿಲ್ಲೆಗಳಲ್ಲಿ ಸಮೀಕ್ಷೆ</p>.<p>*ಏ.22ರಿಂದ 28ರ ಅವಧಿಯಲ್ಲಿ ಅಧ್ಯಯನ</p>.<p>*ಜೀವನೋಪಾಯ, ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿತ್ತು</p>.<p>*ರೈತರು, ರೈತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ದೇವದಾಸಿಯರು, ಗುತ್ತಿಗೆ ಕಾರ್ಮಿಕರು, ನಿವೃತ್ತ ಸರ್ಕಾರಿ ನೌಕರರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಹಲವು ಸಮುದಾಯಗಳು ಸಮೀಕ್ಷೆಯಲ್ಲಿ ಭಾಗಿ</p>.<p><strong>ಸರ್ಕಾರಕ್ಕೆ ಅಧ್ಯಯನ ತಂಡದ ಶಿಫಾರಸು</strong></p>.<p>*ಎಲ್ಲರಿಗೂ ಮುಂದಿನ 3 ತಿಂಗಳು ಸಮಗ್ರ ಆಹಾರ ಪದಾರ್ಥ ಒಳಗೊಂಡ ಉಚಿತ ದಿನಸಿ ಕಿಟ್ ವಿತರಿಸಬೇಕು</p>.<p>*ತಿಂಗಳಿಗೆ ₹7000ರಂತೆ3 ತಿಂಗಳ ಸಂಬಳವನ್ನು ಮುಂಚಿತವಾಗಿ ಆಪತ್ಕಾಲದ ಹಣವಾಗಿ ನೀಡಬೇಕು</p>.<p>*ನರೇಗಾ ಕೂಲಿಯನ್ನು ₹375ಕ್ಕೆ ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಕಟುಂಬದ ಒಬ್ಬ ಸದಸ್ಯರಿಗೆ ಕೆಲಸ ಎಂಬ ನಿಯಮ ತೆಗೆದುಹಾಕು, ಒಡಿಶಾ ಮಾದರಿಯಂತೆ ನಗರ ಪ್ರದೇಶಕ್ಕೂ ವಿಸ್ತರಿಸಬೇಕು</p>.<p>*ಲಾಕ್ಡೌನ್ ಕಾಲದ ಸಂಬಳವನ್ನು ಎಲ್ಲ ಕಾರ್ಮಿಕರಿಗೆ ಖಾತ್ರಿಪಡಿಸಬೇಕು</p>.<p>*ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡಬೇಕು; ರೈತರಿಗೆ ಹಣಕಾಸು ನೆರವು ಒದಗಿಸಬೇಕು. ಶೂನ್ಯ ಬಡ್ಡಿದರದ ಸಾಲದ ವ್ಯಸವ್ಥೆ ಮಾಡಬೇಕು</p>.<p>*ರೈತರು ಬೆಳೆದ ಎಲ್ಲ ಬೆಳೆಗಳನ್ನು ಖರೀದಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ತಲುಪಿಸಬೇಕು. ಬೆಳೆಗೆ ಮಾರುಕಟ್ಟೆ ಹಾಗೂ ವೈಜ್ಞಾನಿಕ ದರ ನಿಗದಿಪಡಿಡಬೇಕು</p>.<p>*ಕೊರೊನಾ ಕಾರಣದಿಂದ ನಷ್ಟದಲ್ಲಿರುವ ಸಣ್ಣ, ಮಧ್ಯಮ ಹಾಗೂ ಗುಡಿ ಕೈಗಾರಿಕೆಗಳಿಗೆ ಸಹಾಯಧನ ಘೋಷಿಸಬೇಕು</p>.<p>*ಶ್ರಮಿಕರ ಮಕ್ಕಳು ಓದುತ್ತಿರುವ ಸರ್ಕಾರಿ ಹಾಗೂ ಖಾಸಗಿ ಶಾಲಾ–ಕಾಲೇಜುಗಳ ಶುಲ್ಕದಿಂದ ವಿನಾಯಿತಿ ನೀಡಬೇಕು</p>.<p>*ಲಾಕ್ಡೌನ್ ಮುಗಿದ ಬಳಿಕ ಬಡವರ ಹಿತದೃಷ್ಟಿಯಿಂದ ಮದ್ಯ ಮಾರಾಟದ ಮೇಲಿನ ನಿಷೇಧ ಮುಂದುವರಿಸಬೇಕು</p>.<p>*ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು</p>.<p>*ಬದುಕಿಗಾಗಿ ವೇಶ್ಯಾವೃತ್ತಿ ಮಾಡುವವರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಎಚ್ಐವಿ ಮಾತ್ರ ಪೂರೈಸಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>