ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಬಿಕ್ಕಟ್ಟು | ಶ್ರಮಿಕ ವರ್ಗಕ್ಕೆ ಪೆಟ್ಟು, ಬಡವಾಗಿದೆ ಬಡವರ ಬದುಕು

ಜನಶಕ್ತಿ ಸಂಘಟನೆಯ ಸಮೀಕ್ಷಾ ವರದಿ
Last Updated 1 ಮೇ 2020, 20:29 IST
ಅಕ್ಷರ ಗಾತ್ರ
ADVERTISEMENT
""
""

ಕೊರೊನಾ ಪಸರಿಸುವಿಕೆ ತಡೆಗಾಗಿ ಹೇರಲಾಗಿರುವ ಲಾಕ್‌ಡೌನ್ ರಾಜ್ಯದ ಬಡವರು, ಕೂಲಿ ಕಾರ್ಮಿರು, ರೈತರು ಸೇರಿದಂತೆ ಎಲ್ಲ ಶ್ರಮಿಕ ವರ್ಗವನ್ನು ಇನ್ನಿಲ್ಲದ ಕಷ್ಟಕ್ಕೆ ತಳ್ಳಿದೆ. ದಿನನಿತ್ಯದ ಆಹಾರ, ಔಷಧ, ಸರ್ಕಾರಿ ಸವಲತ್ತುಗಳು ಸಿಗದೆ ಈ ವರ್ಗ ಪರಿತಪಿಸುತ್ತಿದೆ.

ಕರ್ನಾಟಕ ಜನಶಕ್ತಿ ಸಂಘಟನೆಯ ಸಾಮಾಜಿಕ ಅಧ್ಯಯನ ಸಮಿತಿಯು ರಾಜ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜನರು ತಮ್ಮ ನಿತ್ಯದ ಪಡಿಪಾಟಲನ್ನು ಬಿಚ್ಚಿಟ್ಟಿದ್ದಾರೆ. ಈ ಸಮುದಾಯಗಳಿಗೆ ಆಹಾರ–ಆರೋಗ್ಯ–ಆದಾಯದ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಮಿತಿ ನೆನಪಿಸಿದೆ.

***

ಹೀಗಿತ್ತು ಸಮೀಕ್ಷೆ

*ಬೆಂಗಳೂರು ಸೇರಿ 15 ಜಿಲ್ಲೆಗಳಲ್ಲಿ ಸಮೀಕ್ಷೆ

*ಏ.22ರಿಂದ 28ರ ಅವಧಿಯಲ್ಲಿ ಅಧ್ಯಯನ

*ಜೀವನೋಪಾಯ, ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿತ್ತು

*ರೈತರು, ರೈತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ದೇವದಾಸಿಯರು, ಗುತ್ತಿಗೆ ಕಾರ್ಮಿಕರು, ನಿವೃತ್ತ ಸರ್ಕಾರಿ ನೌಕರರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಹಲವು ಸಮುದಾಯಗಳು ಸಮೀಕ್ಷೆಯಲ್ಲಿ ಭಾಗಿ

ಸರ್ಕಾರಕ್ಕೆ ಅಧ್ಯಯನ ತಂಡದ ಶಿಫಾರಸು

*ಎಲ್ಲರಿಗೂ ಮುಂದಿನ 3 ತಿಂಗಳು ಸಮಗ್ರ ಆಹಾರ ಪದಾರ್ಥ ಒಳಗೊಂಡ ಉಚಿತ ದಿನಸಿ ಕಿಟ್ ವಿತರಿಸಬೇಕು

*ತಿಂಗಳಿಗೆ ₹7000ರಂತೆ3 ತಿಂಗಳ ಸಂಬಳವನ್ನು ಮುಂಚಿತವಾಗಿ ಆಪತ್ಕಾಲದ ಹಣವಾಗಿ ನೀಡಬೇಕು

*ನರೇಗಾ ಕೂಲಿಯನ್ನು ₹375ಕ್ಕೆ ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಕಟುಂಬದ ಒಬ್ಬ ಸದಸ್ಯರಿಗೆ ಕೆಲಸ ಎಂಬ ನಿಯಮ ತೆಗೆದುಹಾಕು, ಒಡಿಶಾ ಮಾದರಿಯಂತೆ ನಗರ ಪ್ರದೇಶಕ್ಕೂ ವಿಸ್ತರಿಸಬೇಕು

*ಲಾಕ್‌ಡೌನ್ ಕಾಲದ ಸಂಬಳವನ್ನು ಎಲ್ಲ ಕಾರ್ಮಿಕರಿಗೆ ಖಾತ್ರಿಪಡಿಸಬೇಕು

*ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡಬೇಕು; ರೈತರಿಗೆ ಹಣಕಾಸು ನೆರವು ಒದಗಿಸಬೇಕು. ಶೂನ್ಯ ಬಡ್ಡಿದರದ ಸಾಲದ ವ್ಯಸವ್ಥೆ ಮಾಡಬೇಕು

*ರೈತರು ಬೆಳೆದ ಎಲ್ಲ ಬೆಳೆಗಳನ್ನು ಖರೀದಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ತಲುಪಿಸಬೇಕು. ಬೆಳೆಗೆ ಮಾರುಕಟ್ಟೆ ಹಾಗೂ ವೈಜ್ಞಾನಿಕ ದರ ನಿಗದಿಪಡಿಡಬೇಕು

*ಕೊರೊನಾ ಕಾರಣದಿಂದ ನಷ್ಟದಲ್ಲಿರುವ ಸಣ್ಣ, ಮಧ್ಯಮ ಹಾಗೂ ಗುಡಿ ಕೈಗಾರಿಕೆಗಳಿಗೆ ಸಹಾಯಧನ ಘೋಷಿಸಬೇಕು

*ಶ್ರಮಿಕರ ಮಕ್ಕಳು ಓದುತ್ತಿರುವ ಸರ್ಕಾರಿ ಹಾಗೂ ಖಾಸಗಿ ಶಾಲಾ–ಕಾಲೇಜುಗಳ ಶುಲ್ಕದಿಂದ ವಿನಾಯಿತಿ ನೀಡಬೇಕು

*ಲಾಕ್‌ಡೌನ್ ಮುಗಿದ ಬಳಿಕ ಬಡವರ ಹಿತದೃಷ್ಟಿಯಿಂದ ಮದ್ಯ ಮಾರಾಟದ ಮೇಲಿನ ನಿಷೇಧ ಮುಂದುವರಿಸಬೇಕು

*ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು

*ಬದುಕಿಗಾಗಿ ವೇಶ್ಯಾವೃತ್ತಿ ಮಾಡುವವರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಎಚ್‌ಐವಿ ಮಾತ್ರ ಪೂರೈಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT