ನವದೆಹಲಿ: ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಅಮ್ ಆದ್ಮಿ ಪಕ್ಷದ ಶಾಸಕನ ವಿರುದ್ಧ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಎಫ್ ಐಆರ್ ದಾಖಲಿಸಿದೆ.
ಶಾಸಕ ಅಮಾನತ್ತುಲ್ಲಾಖಾನ್ ವಿರುದ್ಧ ದೆಹಲಿ ಎಸಿಬಿ ಪ್ರಕರಣ ದಾಖಲಿಸಿದ್ದು, ಶಾಸಕ ದೆಹಲಿ ಸರ್ಕಾರದಿಂದ ವಕ್ಭ್ ಮಂಡಳಿಗೆ ಬಿಡುಗಡೆಯಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ನಿಯಮ ಉಲ್ಲಂಘಿಸಿ ಹಲವರನ್ನು ವಕ್ಫ್ ಮಂಡಳಿಗೆ ನಿಯೋಜಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಮ್ ಆದ್ಮಿ ಪಕ್ಷದ ವತಿಯಿಂದ ದೆಹಲಿಯಒಕ್ಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಮಾನತ್ತುಲ್ಲಾಖಾನ್ ಜಯಗಳಿಸಿ ದೆಹಲಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
Delhi: Anti Corruption Bureau (ACB) has registered an FIR against AAP MLA Amanatullah Khan for irregular recruitment and misuse of fund (grants given to Delhi Waqf Board). (file pic) pic.twitter.com/biyWA1RIJa