‘ರಾಜ್ಯದಲ್ಲಿ ನಾಲ್ವರು ರೋಗಿಗಳಲ್ಲಿ ಮೂವರು ಸೋಂಕಿನಿಂದ ಮುಕ್ತರಾಗಿದ್ದಾರೆ. ಆರಂಭದಲ್ಲಿ ಇವರಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ, ಮಲೇರಿಯಾಗೆ ನೀಡುವ ಔಷಧ ನೀಡಲಾಯಿತು. ಕೊರೊನಾ ವೈರಸ್ನ ರಚನೆ ಬಹುತೇಕ ಎಚ್ಐವಿ ರೀತಿಯೇ ಇರುವುದರಿಂದಾಗಿ, ಎಚ್ಐವಿ ತಡೆಗೆ ನೀಡುವ ಔಷಧವನ್ನು ಸಹ ಕೊಡಲಾಯಿತು’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವೈದ್ಯಕೀಯ ಮತ್ತು ಆರೋಗ್ಯ) ರೋಹಿತ್ ಕುಮಾರ್ ಸಿಂಗ್ ವಿವರಿಸಿದ್ದಾರೆ.