ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು,‘ಸಿಎಎ ಜಾರಿಯೊಂದಿಗೆ ದೇಶದಲ್ಲಿ ಜಿನ್ನಾ ಅವರ ಕಲ್ಪನೆ ಸಾಕಾರಗೊಳ್ಳುತ್ತಿದೆ. ಜಿನ್ನಾ ಸಂಪೂರ್ಣ ಜಯಗಳಿಸಿದ್ದಾರೆ ಎಂದು ನಾನು ಹೇಳಲಾರೆ.ಆದರೆ, ಅವರ ಕಲ್ಪನೆಗೆ ಗೆಲುವಾಗುತ್ತಿದೆ. ದೇಶದಲ್ಲಿ ಇನ್ನೂ ಆಯ್ಕೆಗಳಿವೆ. ಅವುಗಳೆಂದರೆ, ಜಿನ್ನಾರ ರಾಷ್ಟ್ರೀಯ ಪರಿಕಲ್ಪನೆ ಮತ್ತು ಗಾಂಧೀಜಿ ಅವರ ರಾಷ್ಟ್ರೀಯ ಪರಿಕಲ್ಪನೆ’ ಎಂದು ಹೇಳಿದ್ದಾರೆ.