ಇಡೀ ರಾಜ್ಯಕ್ಕೆ ಲಾಕ್ ಡೌನ್ ಅನ್ವಯಿಸಲಿದ್ದು, ಲಾಕ್ ಡೌನ್ ಸಡಿಲಿಕೆ, ತೆರವುಗೊಳಿಸುವ ಕುರಿತು ಅತಿ ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಲಾಕ್ ಡೌನ್ ಅವಧಿ ಇಂದು ಸಂಜೆ ಅಂತ್ಯಗೊಳ್ಳುತ್ತಿದ್ದ ಕಾರಣ ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ. ದೇಶದಲ್ಲಿ ವರದಿಯಾಗಿರುವ ಕೋವಿಡ್ 19 ಪ್ರಕರಣಗಳಲ್ಲಿ ಮೂರನೆ ಒಂದು ಭಾಗದಷ್ಟುಮಹಾರಾಷ್ಟ್ರದಲ್ಲೇ ಕಾಣಿಸಿಕೊಂಡಿದೆ.