ಭಾರತದ ಅರ್ಧದಷ್ಟು ಕೃಷಿ ಭೂಮಿ ಬೆಳೆಗಾಗಿ ಜೂನ್–ಸೆಪ್ಟೆಂಬರ್ ಮಳೆಯನ್ನೇ ನೆಚ್ಚಿಕೊಂಡಿದೆ. ಈ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಇಲ್ಲ. ಮಳೆಯಾದರೆ ಭತ್ತ, ಜೋಳ, ಕಬ್ಬು, ಹತ್ತಿ ಹಾಗೂ ಸೋಯಾಬಿನ್ ಬೆಳೆಯಲು ಸಾಧ್ಯವಾಗುತ್ತದೆ.
ಕಳೆದ ತಿಂಗಳು ಹವಾಮಾನ ಇಲಾಖೆ, ದೇಶದಲ್ಲಿ ಮುಂಗಾರು ಮಳೆ ಸಾಧಾರಣವಾಗಿರಲಿದೆ ಎಂದು ಹೇಳಿತ್ತು. ಇದರಿಂದ ಹೆಚ್ಚು ಬೆಳೆಯ ನಿರೀಕ್ಷೆ ಉಂಟಾಗಿದೆ. ಕೋವಿಡ್–19 ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಆರ್ಥಿಕತೆಗೆ ಉತ್ತಮ ಬೆಳೆ ಚೇತರಿಕೆ ನೀಡಬಹುದಾಗಿದೆ.