<p><strong>ನವದೆಹಲಿ: </strong>ದಕ್ಷಿಣ ಕರಾವಳಿ ಭಾಗದಿಂದ ಮುಂಗಾರು ಮಾರುತ ಜೂನ್ 1ರಂದು ಭಾರತ ಪ್ರವೇಶಿಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯಾಗಿರುವ ದೇಶಕ್ಕೆ ನಾಲ್ಕು ತಿಂಗಳ ಮಳೆಗಾಲದ ಅವಧಿಗೆ ಪ್ರಾಮುಖ್ಯತೆ ಇದೆ.<br /><br />ಬೇಸಿಗೆಯ ಬಿಸಿಲಿನಿಂದ ಮಳೆಗಾಲಕ್ಕೆ ಹೊರಳುವ ಪೂರಕ ವಾತಾವರಣ 2020ರ ಜೂನ್ 1ರಿಂದ ಸೃಷ್ಟಿಯಾಗಲಿದ್ದು, ಕೇರಳ ಕರಾವಳಿಯಿಂದ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.<br /><br />ಕೇರಳದಲ್ಲಿ ಜೂನ್ 5ರಿಂದ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.</p>.<p>ಭಾರತದ ಅರ್ಧದಷ್ಟು ಕೃಷಿ ಭೂಮಿ ಬೆಳೆಗಾಗಿ ಜೂನ್–ಸೆಪ್ಟೆಂಬರ್ ಮಳೆಯನ್ನೇ ನೆಚ್ಚಿಕೊಂಡಿದೆ. ಈ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಇಲ್ಲ. ಮಳೆಯಾದರೆ ಭತ್ತ, ಜೋಳ, ಕಬ್ಬು, ಹತ್ತಿ ಹಾಗೂ ಸೋಯಾಬಿನ್ ಬೆಳೆಯಲು ಸಾಧ್ಯವಾಗುತ್ತದೆ.<br /><br />ಕಳೆದ ತಿಂಗಳು ಹವಾಮಾನ ಇಲಾಖೆ, ದೇಶದಲ್ಲಿ ಮುಂಗಾರು ಮಳೆ ಸಾಧಾರಣವಾಗಿರಲಿದೆ ಎಂದು ಹೇಳಿತ್ತು. ಇದರಿಂದ ಹೆಚ್ಚು ಬೆಳೆಯ ನಿರೀಕ್ಷೆ ಉಂಟಾಗಿದೆ. ಕೋವಿಡ್–19 ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಆರ್ಥಿಕತೆಗೆ ಉತ್ತಮ ಬೆಳೆ ಚೇತರಿಕೆ ನೀಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದಕ್ಷಿಣ ಕರಾವಳಿ ಭಾಗದಿಂದ ಮುಂಗಾರು ಮಾರುತ ಜೂನ್ 1ರಂದು ಭಾರತ ಪ್ರವೇಶಿಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯಾಗಿರುವ ದೇಶಕ್ಕೆ ನಾಲ್ಕು ತಿಂಗಳ ಮಳೆಗಾಲದ ಅವಧಿಗೆ ಪ್ರಾಮುಖ್ಯತೆ ಇದೆ.<br /><br />ಬೇಸಿಗೆಯ ಬಿಸಿಲಿನಿಂದ ಮಳೆಗಾಲಕ್ಕೆ ಹೊರಳುವ ಪೂರಕ ವಾತಾವರಣ 2020ರ ಜೂನ್ 1ರಿಂದ ಸೃಷ್ಟಿಯಾಗಲಿದ್ದು, ಕೇರಳ ಕರಾವಳಿಯಿಂದ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.<br /><br />ಕೇರಳದಲ್ಲಿ ಜೂನ್ 5ರಿಂದ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.</p>.<p>ಭಾರತದ ಅರ್ಧದಷ್ಟು ಕೃಷಿ ಭೂಮಿ ಬೆಳೆಗಾಗಿ ಜೂನ್–ಸೆಪ್ಟೆಂಬರ್ ಮಳೆಯನ್ನೇ ನೆಚ್ಚಿಕೊಂಡಿದೆ. ಈ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಇಲ್ಲ. ಮಳೆಯಾದರೆ ಭತ್ತ, ಜೋಳ, ಕಬ್ಬು, ಹತ್ತಿ ಹಾಗೂ ಸೋಯಾಬಿನ್ ಬೆಳೆಯಲು ಸಾಧ್ಯವಾಗುತ್ತದೆ.<br /><br />ಕಳೆದ ತಿಂಗಳು ಹವಾಮಾನ ಇಲಾಖೆ, ದೇಶದಲ್ಲಿ ಮುಂಗಾರು ಮಳೆ ಸಾಧಾರಣವಾಗಿರಲಿದೆ ಎಂದು ಹೇಳಿತ್ತು. ಇದರಿಂದ ಹೆಚ್ಚು ಬೆಳೆಯ ನಿರೀಕ್ಷೆ ಉಂಟಾಗಿದೆ. ಕೋವಿಡ್–19 ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಆರ್ಥಿಕತೆಗೆ ಉತ್ತಮ ಬೆಳೆ ಚೇತರಿಕೆ ನೀಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>