ಮುಂಬೈ: ನಿಸರ್ಗ ಚಂಡಮಾರುತ ಮಹಾರಾಷ್ಟ್ರದ ಕಡಲ ತೀರದತ್ತ ಧಾವಿಸಿದೆ. ಇಲ್ಲಿ ಬಿರುಸಿನ ಗಾಳಿ ಬೀಸುತ್ತಿದ್ದು ರತ್ನಗಿರಿ ಪ್ರದೇಶದಲ್ಲಿ ಮಳೆಯಾಗಿದೆ. ರತ್ನಗಿರಿಯಲ್ಲಿ ಬುಧವಾರ ಬೆಳಗ್ಗೆ 9.30ರ ಹೊತ್ತಿಗೆ ಪ್ರತಿ ಗಂಟೆಗೆ59 ಕಿಮೀ ವೇಗದಲ್ಲಿ ಗಾಳಿಬೀಸಿದೆ. ಇದು ಮತ್ತಷ್ಟು ತೀವ್ರತೆ ಪಡೆದು ಉತ್ತರ ಕೊಂಕಣ ತೀರಕ್ಕೆ ಸಾಗಿದೆ.