ಭೋಪಾಲದಲ್ಲಿ ಚುನಾವಣೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮೇಲೆ ಕಿಡಿಕಾರಿದ ಅವರು, ಡಿಗ್ಗಿ ರಾಜಾ ಜಕೀರ್ ನಾಯಕ್ನ್ನು ಹೆಗಲ ಮೇಲೆ ಕುಳ್ಳಿರಿಸಿ ನೃತ್ಯ ಮಾಡಿದ್ದಾರೆ.ಭಯೋತ್ಪಾದನೆ ಬಗ್ಗೆ ಪೊಲೀಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಲು ಕಾಂಗ್ರೆಸ್ ಸರ್ಕಾರ ನಾಯಕ್ನ್ನು ಕರೆಸಿತ್ತು.ಸ್ಫೋಟ ನಂತರ ಶ್ರೀಲಂಕಾ ಆತನ ಟಿವಿ ವಾಹಿನಿಯನ್ನೇ ನಿಲ್ಲಿಸಿದೆ ಆದರೆ ಈ ಹಿಂದಿನ ಸರ್ಕಾರ ನಾಯಕ್ನ್ನು ಶಾಂತಿದೂತ ಎಂದು ಬಿಂಬಿಸಲು ಯತ್ನಿಸಿತ್ತು.