<p><strong>ಚಂಡಿಗಡ: </strong>ಮತದಾನ ಜಾಗೃತಿ ಕುರಿತ ಫ್ಲೆಕ್ಸ್ನಲ್ಲಿ ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಚಿತ್ರವನ್ನು ಮುದ್ರಿಸುವ ಮೂಲಕ ಪಂಜಾಬ್ನ ಚುನಾವಣಾ ಆಯೋಗ ತೀವ್ರ ಮುಜುಗರಕ್ಕೆ ಒಳಗಾಗಿದೆ.</p>.<p>ಹೋಶಿಯಾರ್ಪುರದ ಜಿಲ್ಲಾಡಳಿತ ಸಂಕೀರ್ಣದಲ್ಲಿ ಅಳವಡಿಸಿದ್ದ ಮತದಾನ ಜಾಗೃತಿ ಫ್ಲೆಕ್ಸ್ಗಳಲ್ಲಿ ಗಣ್ಯರ ಚಿತ್ರಗಳ ಜೊತೆ ಅಪರಾಧಿಯ ಚಿತ್ರವೂ ಮುದ್ರಣಗೊಂಡಿದೆ.</p>.<p>ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿದ ಬಳಿಕ ಆಗಿರುವ ಅಚಾತುರ್ಯವು ಬೆಳಕಿಗೆ ಬಂದಿದೆ. ಈ ಫ್ಲೆಕ್ಸ್ಗಳನ್ನು ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಥಳೀಯ ಚುನಾವಣಾ ಕಚೇರಿಯು ಅಳವಡಿಸಿತ್ತು. ವಿಚಿತ್ರವೆಂದರೆ, ಈವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ.</p>.<p>‘ಮತಜಾಗೃತಿ ಅಭಿಯಾನದಲ್ಲಿ ಅಪರಾಧಿಯೊಬ್ಬನ ಚಿತ್ರ ತಿಂಗಳುಗಟ್ಟಲೆ ಪ್ರದರ್ಶನವಾಗಿದ್ದು ದುರದೃಷ್ಟಕರ. ಹೀನ ಕೃತ್ಯ ಎಸಗಿದ ಅಪರಾಧಿಯನ್ನುಸರ್ಕಾರದ ಖರ್ಚಿನಲ್ಲಿ ಪ್ರಮುಖ ಸ್ಥಾನದಲ್ಲಿ ಚಿತ್ರಿಸಲಾಗಿದೆ. ಈ ಮೂಲಕ ಜನರಿಗೆ ನೀಡಿದ್ದ ಸಂದೇಶವೇನು? ಯಾರೂ ಇದನ್ನು ಗಮನಿಸಿಲ್ಲವೇಕೆ’ ಎಂದು ಇದನ್ನು ಮೊದಲು ಗುರುತಿಸಿದ್ದ ಸೋರವ್ ಸಿಂಗ್ ಎಂಬುವರು ಪ್ರಶ್ನಿಸಿದ್ದಾರೆ.</p>.<p class="Subhead"><strong>ತನಿಖೆಗೆ ಆದೇಶ:</strong>ಈ ಬಗ್ಗೆ ತನಿಖೆ ನಡೆಸುವಂತೆ ಹೋಶಿಯಾರ್ಪುರ ಜಿಲ್ಲಾಧಿಕಾರಿ ಇಶಾ ಕಾಲಿಯಾ ಆದೇಶಿಸಿದ್ದಾರೆ. ಎಲ್ಲ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ. ಅಂತರ್ಜಾಲದಿಂದ ಡೌನ್ಲೋಡ್ ಮಾಡಿ ಬಳಸಿಕೊಳ್ಳುವಾಗ ಅದನ್ನು ಗಮನಿಸದೇ, ಸಂಬಂಧಿಸಿದ ಪ್ರಾಧಿಕಾರಗಳು ವಹಿಸಿದ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಅಚ್ಚರಿ ವ್ಯಕ್ತವಾಗಿದೆ.</p>.<p>2012ರ ಡಿಸೆಂಬರ್ನಲ್ಲಿ ದೆಹಲಿಯಲ್ಲಿ ಚಲಿಸುವ ಬಸ್ನಲ್ಲಿ ಆರು ದುಷ್ಕರ್ಮಿಗಳು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ನಿರ್ಭಯಾ ಆ ಬಳಿಕ ಮೃತಪಟ್ಟಿದ್ದರು. ಈ ಘಟನೆ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡಿಗಡ: </strong>ಮತದಾನ ಜಾಗೃತಿ ಕುರಿತ ಫ್ಲೆಕ್ಸ್ನಲ್ಲಿ ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಚಿತ್ರವನ್ನು ಮುದ್ರಿಸುವ ಮೂಲಕ ಪಂಜಾಬ್ನ ಚುನಾವಣಾ ಆಯೋಗ ತೀವ್ರ ಮುಜುಗರಕ್ಕೆ ಒಳಗಾಗಿದೆ.</p>.<p>ಹೋಶಿಯಾರ್ಪುರದ ಜಿಲ್ಲಾಡಳಿತ ಸಂಕೀರ್ಣದಲ್ಲಿ ಅಳವಡಿಸಿದ್ದ ಮತದಾನ ಜಾಗೃತಿ ಫ್ಲೆಕ್ಸ್ಗಳಲ್ಲಿ ಗಣ್ಯರ ಚಿತ್ರಗಳ ಜೊತೆ ಅಪರಾಧಿಯ ಚಿತ್ರವೂ ಮುದ್ರಣಗೊಂಡಿದೆ.</p>.<p>ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿದ ಬಳಿಕ ಆಗಿರುವ ಅಚಾತುರ್ಯವು ಬೆಳಕಿಗೆ ಬಂದಿದೆ. ಈ ಫ್ಲೆಕ್ಸ್ಗಳನ್ನು ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಥಳೀಯ ಚುನಾವಣಾ ಕಚೇರಿಯು ಅಳವಡಿಸಿತ್ತು. ವಿಚಿತ್ರವೆಂದರೆ, ಈವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ.</p>.<p>‘ಮತಜಾಗೃತಿ ಅಭಿಯಾನದಲ್ಲಿ ಅಪರಾಧಿಯೊಬ್ಬನ ಚಿತ್ರ ತಿಂಗಳುಗಟ್ಟಲೆ ಪ್ರದರ್ಶನವಾಗಿದ್ದು ದುರದೃಷ್ಟಕರ. ಹೀನ ಕೃತ್ಯ ಎಸಗಿದ ಅಪರಾಧಿಯನ್ನುಸರ್ಕಾರದ ಖರ್ಚಿನಲ್ಲಿ ಪ್ರಮುಖ ಸ್ಥಾನದಲ್ಲಿ ಚಿತ್ರಿಸಲಾಗಿದೆ. ಈ ಮೂಲಕ ಜನರಿಗೆ ನೀಡಿದ್ದ ಸಂದೇಶವೇನು? ಯಾರೂ ಇದನ್ನು ಗಮನಿಸಿಲ್ಲವೇಕೆ’ ಎಂದು ಇದನ್ನು ಮೊದಲು ಗುರುತಿಸಿದ್ದ ಸೋರವ್ ಸಿಂಗ್ ಎಂಬುವರು ಪ್ರಶ್ನಿಸಿದ್ದಾರೆ.</p>.<p class="Subhead"><strong>ತನಿಖೆಗೆ ಆದೇಶ:</strong>ಈ ಬಗ್ಗೆ ತನಿಖೆ ನಡೆಸುವಂತೆ ಹೋಶಿಯಾರ್ಪುರ ಜಿಲ್ಲಾಧಿಕಾರಿ ಇಶಾ ಕಾಲಿಯಾ ಆದೇಶಿಸಿದ್ದಾರೆ. ಎಲ್ಲ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ. ಅಂತರ್ಜಾಲದಿಂದ ಡೌನ್ಲೋಡ್ ಮಾಡಿ ಬಳಸಿಕೊಳ್ಳುವಾಗ ಅದನ್ನು ಗಮನಿಸದೇ, ಸಂಬಂಧಿಸಿದ ಪ್ರಾಧಿಕಾರಗಳು ವಹಿಸಿದ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಅಚ್ಚರಿ ವ್ಯಕ್ತವಾಗಿದೆ.</p>.<p>2012ರ ಡಿಸೆಂಬರ್ನಲ್ಲಿ ದೆಹಲಿಯಲ್ಲಿ ಚಲಿಸುವ ಬಸ್ನಲ್ಲಿ ಆರು ದುಷ್ಕರ್ಮಿಗಳು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ನಿರ್ಭಯಾ ಆ ಬಳಿಕ ಮೃತಪಟ್ಟಿದ್ದರು. ಈ ಘಟನೆ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>