<p id="thickbox_headline"><strong>ನವದೆಹಲಿ:</strong> ‘ನನ್ನ ಪರವಾಗಿ ವಾದ ಮಂಡಿಸಿದ ಈ ಹಿಂದಿನ ವಕೀಲರು ದಾರಿತಪ್ಪಿಸಿದ್ದಾರೆ. ಹೀಗಾಗಿ ನನಗೆ ನ್ಯಾಯಾಂಗ ಹೋರಾಟಕ್ಕಿರುವ ಎಲ್ಲ ಅವಕಾಶಗಳನ್ನು ಮರಳಿ ಕಲ್ಪಿಸಬೇಕು,’ ಎಂದು ಮನವಿ ಮಾಡಿ ನಿರ್ಭಯಾ ಅತ್ಯಾಚಾರ ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ.</p>.<p>‘ಅರ್ಜಿದಾರ ಈ ಹಿಂದೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಮತ್ತು ಕಾನೂನು ಪರಿಹಾರಾತ್ಮಕ ಅರ್ಜಿಗಳು ವಜಾಗೊಂಡಿವೆ. ಇನ್ನು ಯಾವ ಕಾನೂನಾತ್ಮಕ ಮಾರ್ಗಗಳು ಉಳಿದಿವೆ’ ಎಂದು ಪ್ರಶ್ನೆ ಮಾಡಿದನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ. ಆರ್ ಶಾ ಅವರಿದ್ದ ಪೀಠ ‘ಈ ಅರ್ಜಿಯ ವಿಚಾರಣೆಯಲ್ಲಿ ಹುರುಳಿಲ್ಲ,’ ತಿಳಿಸಿತು.</p>.<p>ಪ್ರಕರಣದಲ್ಲಿ ನ್ಯಾಯಾಲಯಗಳು ಈ ಹಿಂದೆ ನೀಡಿರುವ ಎಲ್ಲ ಆದೇಶಗಳನ್ನು ರದ್ದು ಮಾಡುವಂತೆ ಕೋರಿದ್ದ ಮುಕೇಶ್ ಸಿಂಗ್, ರಾಷ್ಟ್ರಪತಿಗಳಿಂದ ತನ್ನ ದಯಾ ಅರ್ಜಿ ನಿರಾಕರಣೆಯಾಗಲು ಮತ್ತು ಕಾನೂನು ಪರಿಹಾರಾತ್ಮಕ ಅರ್ಜಿ ತಿರಸ್ಕಾರಗೊಳ್ಳಲು ವಕೀಲರಾದ ವೃಂದಾ ಗ್ರೋವರ್ ಅವರೇ ಕಾರಣ ಎಂದು ಆರೋಪಿಸಿದ್ದಾನೆ.</p>.<p>ಅಲ್ಲದೆ, ತನ್ನ ವಿಚಾರದಲ್ಲಿ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ವೃಂದಾ ಗ್ರೋವರ್ ಅವರಿಂದ ಕ್ರಿಮಿನಲ್ ಸಂಚು ನಡೆದಿದೆ. ಅವರಿಂದ ಅನ್ಯಾಯವಾಗಿದೆ. ಈ ವಿಚಾರದಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ನ್ಯಾಯವಾದಿ ಎಂ. ಎಲ್ ಶರ್ಮಾ ಅವರ ಮೂಲಕ ಮುಕೇಶ್ ಸಿಂಗ್ ಅರ್ಜಿ ಸಲ್ಲಿಸಿದ್ದಾನೆ.</p>.<p>ಆದರೆ, ಮುಕೇಶ್ನ ಯಾವ ವಾದವನ್ನೂ ಆಲಿಸದ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಳ್ಳಿಹಾಕಿದೆ.</p>.<p>ಇದೇ 20ರಂದು 5.30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಮಾರ್ಚ್ 5ರಂದು ನ್ಯಾಯಾಲಯ ಆದೇಶ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ನವದೆಹಲಿ:</strong> ‘ನನ್ನ ಪರವಾಗಿ ವಾದ ಮಂಡಿಸಿದ ಈ ಹಿಂದಿನ ವಕೀಲರು ದಾರಿತಪ್ಪಿಸಿದ್ದಾರೆ. ಹೀಗಾಗಿ ನನಗೆ ನ್ಯಾಯಾಂಗ ಹೋರಾಟಕ್ಕಿರುವ ಎಲ್ಲ ಅವಕಾಶಗಳನ್ನು ಮರಳಿ ಕಲ್ಪಿಸಬೇಕು,’ ಎಂದು ಮನವಿ ಮಾಡಿ ನಿರ್ಭಯಾ ಅತ್ಯಾಚಾರ ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ.</p>.<p>‘ಅರ್ಜಿದಾರ ಈ ಹಿಂದೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಮತ್ತು ಕಾನೂನು ಪರಿಹಾರಾತ್ಮಕ ಅರ್ಜಿಗಳು ವಜಾಗೊಂಡಿವೆ. ಇನ್ನು ಯಾವ ಕಾನೂನಾತ್ಮಕ ಮಾರ್ಗಗಳು ಉಳಿದಿವೆ’ ಎಂದು ಪ್ರಶ್ನೆ ಮಾಡಿದನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ. ಆರ್ ಶಾ ಅವರಿದ್ದ ಪೀಠ ‘ಈ ಅರ್ಜಿಯ ವಿಚಾರಣೆಯಲ್ಲಿ ಹುರುಳಿಲ್ಲ,’ ತಿಳಿಸಿತು.</p>.<p>ಪ್ರಕರಣದಲ್ಲಿ ನ್ಯಾಯಾಲಯಗಳು ಈ ಹಿಂದೆ ನೀಡಿರುವ ಎಲ್ಲ ಆದೇಶಗಳನ್ನು ರದ್ದು ಮಾಡುವಂತೆ ಕೋರಿದ್ದ ಮುಕೇಶ್ ಸಿಂಗ್, ರಾಷ್ಟ್ರಪತಿಗಳಿಂದ ತನ್ನ ದಯಾ ಅರ್ಜಿ ನಿರಾಕರಣೆಯಾಗಲು ಮತ್ತು ಕಾನೂನು ಪರಿಹಾರಾತ್ಮಕ ಅರ್ಜಿ ತಿರಸ್ಕಾರಗೊಳ್ಳಲು ವಕೀಲರಾದ ವೃಂದಾ ಗ್ರೋವರ್ ಅವರೇ ಕಾರಣ ಎಂದು ಆರೋಪಿಸಿದ್ದಾನೆ.</p>.<p>ಅಲ್ಲದೆ, ತನ್ನ ವಿಚಾರದಲ್ಲಿ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ವೃಂದಾ ಗ್ರೋವರ್ ಅವರಿಂದ ಕ್ರಿಮಿನಲ್ ಸಂಚು ನಡೆದಿದೆ. ಅವರಿಂದ ಅನ್ಯಾಯವಾಗಿದೆ. ಈ ವಿಚಾರದಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ನ್ಯಾಯವಾದಿ ಎಂ. ಎಲ್ ಶರ್ಮಾ ಅವರ ಮೂಲಕ ಮುಕೇಶ್ ಸಿಂಗ್ ಅರ್ಜಿ ಸಲ್ಲಿಸಿದ್ದಾನೆ.</p>.<p>ಆದರೆ, ಮುಕೇಶ್ನ ಯಾವ ವಾದವನ್ನೂ ಆಲಿಸದ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಳ್ಳಿಹಾಕಿದೆ.</p>.<p>ಇದೇ 20ರಂದು 5.30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಮಾರ್ಚ್ 5ರಂದು ನ್ಯಾಯಾಲಯ ಆದೇಶ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>