<p><strong>ಹುಬ್ಬಳ್ಳಿ:</strong> ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಗಂಟೆಗೆ 6.40ಕ್ಕೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇಲ್ಲಿನ ಹೊರವಲಯದ ಗಬ್ಬೂರು ಬೈಪಾಸ್ ಬಳಿ ಇರುವ ಕೆಎಲ್ಇ ಸಂಸ್ಥೆಯ ಉದ್ದೇಶಿತ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಮೈದಾನದಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಯುತ್ತಿದೆ.</p>.<p>ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದ್ದು, ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಧಾನಿಯವರ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ಮೂರು ದಿನಗಳ ಹಿಂದೆಯೇ ನಗರದಲ್ಲಿ ಬೀಡು ಬಿಟ್ಟಿದ್ದು, ಭದ್ರತಾ ಉಸ್ತುವಾರಿಯ ಮೇಲ್ವಿಚಾರಣೆ ವಹಿಸಿದೆ.</p>.<p>ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿರುವುದರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಪ್ರಧಾನಿಯವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.</p>.<p>ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ (ಐಐಐಟಿ)ಗೆ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ.</p>.<p>ಧಾರವಾಡದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಿದ 2350 ಮನೆಗಳ ಇ-ಗೃಹ ಪ್ರವೇಶವನ್ನು ಮೋದಿ ನೆರವೇರಿಸಿದ್ದಾರೆ.</p>.<p><strong>ಮೋದಿ ಭಾಷಣದ ಹೈಲೈಟ್ಸ್</strong><br /><strong>*</strong> ಇಲ್ಲಿ ನರೆದಿರುವ ಜನರನ್ನು ನೋಡಿದರೆ ಕರ್ನಾಟಕದಲ್ಲಿನ ರಾಜಕೀಯ ವಾತಾವರಣದಲ್ಲಿ ಬದಲಾವಣೆಯನ್ನು ನಾನು ಕಾಣುತ್ತಿದ್ದೇನೆ ಎಂದು ಮೋದಿ ಭಾಷಣ ಆರಂಭಿಸಿದ್ದಾರೆ.</p>.<p><strong>*</strong>ಕರ್ನಾಟಕದ ಅಭಿವೃದ್ಧಿ ಮತ್ತು ಬಡವರ ಅಭಿವೃದ್ಧಿಗಾಗಿ ದುಡಿದ ಶ್ರೀ ಅನಂತ್ ಕುಮಾರ್ ಅವರನ್ನು ನಾನಿಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ.</p>.<p><strong>*</strong>ಜನರ ಹಿತಕ್ಕಾಗಿ ದುಡಿದ ಸಿದ್ದಗಂಗಾಮಠ ಶಿವಕುಮಾರ ಸ್ವಾಮೀಜಿಯವರ ನಿಧನಕ್ಕೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ.</p>.<p><strong>*</strong>₹5,000 ಕೋಟಿ ವೆಚ್ಚದ ಯೋಜನೆಯನ್ನು ಕೆಲವೇ ಕ್ಷಣಗಳ ಹಿಂದೆ ಉದ್ಘಾಟಿಸಲಾಗಿದೆ.ಮುಂದಿನ ಜನಾಂಗಕ್ಕಾಗಿ ನಾವು ದೇಶದ ಮೂಲ ಸೌಕರ್ಯಗಳನ್ನು ಉತ್ತಮ ಪಡಿಸುತ್ತಿದ್ದೇವೆ.</p>.<p><strong>*</strong>ಕಳೆದ ನಾಲ್ಕು ವರ್ಷಗಳಿಂದ ನಾವು ನಿರಂತರವಾಗಿಬಡವರ ಮತ್ತು ಮಧ್ಯಮ ವರ್ಗದವರ ಅಭಿವೃದ್ಧಿಗಾಗಿ ದುಡಿದಿದ್ದೇವೆ. ಇನ್ನು ಮುಂದೆಯೂ ನಾವು ಅದನ್ನು ಮುಂದುವರಿಸುತ್ತೇವೆ.</p>.<p><strong>*</strong>ನಮ್ಮ ಸರ್ಕಾರ 55 ತಿಂಗಳಲ್ಲಿ 77 ಲಕ್ಷ ಮನೆ ಮಂಜೂರು ಮಾಡಿದೆ.ನಗರ ಪ್ರದೇಶಗಳಲ್ಲಿ 13 ಲಕ್ಷ ಮನೆ ಮಂಜೂರು ಮಾಡಿದ್ದು, ಇದರಲ್ಲಿ 8 ಲಕ್ಷ ಮನೆ ಪೂರ್ಣಗೊಂಡಿದೆ.ಮಂಜೂರಾದ 77 ಲಕ್ಷ ಮನೆಗಳ ಪೈಕಿ 15 ಲಕ್ಷ ಮನೆಗಳ ಕೆಲಸ ಪೂರ್ಣಗೊಂಡಿದೆ.<br />ಇದೇ ಮೊದಲ ಬಾರಿ ಸರ್ಕಾರವೊಂದು ಮಧ್ಯಮ ವರ್ಗದವರಿಗೆ ಮನೆ ಸೌಲಭ್ಯದ ಬಗ್ಗೆ ಯೋಚಿಸಿದ್ದು. ಹಾಗಾಗಿ ಮನೆ ಸಾಲದ ಬಡ್ಡಿದರದಲ್ಲಿ ವಿನಾಯಿತಿ ನೀಡಲು ಹೊಸ ಕೆಟಗರಿ ಮಾಡಲಾಗಿದೆ.</p>.<p><strong>*</strong>ಇತ್ತೀಚಿನ ಬಜೆಟ್ನಲ್ಲಿ ₹5 ಲಕ್ಷದವರೆಗೆ ವೇತನ ಇರುವವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.</p>.<p><strong>*</strong>ಕೆಲವೊಬ್ಬರು ತಮ್ಮ ಸಂಪಾದನೆ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ ಎಂದು ಭಾವಿಸಿದ್ದರು,.ಆದರೆ ಅವರು ಲೂಟಿ ಮಾಡಿದ್ದನ್ನು ಈಗ ಪ್ರಶ್ನಿಸಲಾಗುತ್ತಿದೆ.ಲೂಟಿ ಮಾಡಿದವರು ವಿದೇಶದಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ.</p>.<p><strong>*</strong>ವಿಪಕ್ಷದಲ್ಲಿರುವವರಿಗೆ ಬಡವರ,ಯುವಜನಾಂಗ ಮತ್ತು ಬಡವರ ಕಾಳಜಿ ಇಲ್ಲ.ಅವರೆಲ್ಲರೂ ಸ್ವಾರ್ಥಿಗಳಾಗಿದ್ದು, ತಮ್ಮ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಾರೆ.</p>.<p><strong>*</strong>ನೂತನ ಭಾರತ ಮಜ್ಬೂತಿ (ಸುದೃಢ) ಬಯಸುತ್ತಿದೆ.ಮಜ್ಬೂರಿ ( ನಿಸ್ಸಹಾಯಕತೆ) ಅಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಗಂಟೆಗೆ 6.40ಕ್ಕೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇಲ್ಲಿನ ಹೊರವಲಯದ ಗಬ್ಬೂರು ಬೈಪಾಸ್ ಬಳಿ ಇರುವ ಕೆಎಲ್ಇ ಸಂಸ್ಥೆಯ ಉದ್ದೇಶಿತ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಮೈದಾನದಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಯುತ್ತಿದೆ.</p>.<p>ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದ್ದು, ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಧಾನಿಯವರ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ಮೂರು ದಿನಗಳ ಹಿಂದೆಯೇ ನಗರದಲ್ಲಿ ಬೀಡು ಬಿಟ್ಟಿದ್ದು, ಭದ್ರತಾ ಉಸ್ತುವಾರಿಯ ಮೇಲ್ವಿಚಾರಣೆ ವಹಿಸಿದೆ.</p>.<p>ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿರುವುದರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಪ್ರಧಾನಿಯವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.</p>.<p>ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ (ಐಐಐಟಿ)ಗೆ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ.</p>.<p>ಧಾರವಾಡದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಿದ 2350 ಮನೆಗಳ ಇ-ಗೃಹ ಪ್ರವೇಶವನ್ನು ಮೋದಿ ನೆರವೇರಿಸಿದ್ದಾರೆ.</p>.<p><strong>ಮೋದಿ ಭಾಷಣದ ಹೈಲೈಟ್ಸ್</strong><br /><strong>*</strong> ಇಲ್ಲಿ ನರೆದಿರುವ ಜನರನ್ನು ನೋಡಿದರೆ ಕರ್ನಾಟಕದಲ್ಲಿನ ರಾಜಕೀಯ ವಾತಾವರಣದಲ್ಲಿ ಬದಲಾವಣೆಯನ್ನು ನಾನು ಕಾಣುತ್ತಿದ್ದೇನೆ ಎಂದು ಮೋದಿ ಭಾಷಣ ಆರಂಭಿಸಿದ್ದಾರೆ.</p>.<p><strong>*</strong>ಕರ್ನಾಟಕದ ಅಭಿವೃದ್ಧಿ ಮತ್ತು ಬಡವರ ಅಭಿವೃದ್ಧಿಗಾಗಿ ದುಡಿದ ಶ್ರೀ ಅನಂತ್ ಕುಮಾರ್ ಅವರನ್ನು ನಾನಿಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ.</p>.<p><strong>*</strong>ಜನರ ಹಿತಕ್ಕಾಗಿ ದುಡಿದ ಸಿದ್ದಗಂಗಾಮಠ ಶಿವಕುಮಾರ ಸ್ವಾಮೀಜಿಯವರ ನಿಧನಕ್ಕೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ.</p>.<p><strong>*</strong>₹5,000 ಕೋಟಿ ವೆಚ್ಚದ ಯೋಜನೆಯನ್ನು ಕೆಲವೇ ಕ್ಷಣಗಳ ಹಿಂದೆ ಉದ್ಘಾಟಿಸಲಾಗಿದೆ.ಮುಂದಿನ ಜನಾಂಗಕ್ಕಾಗಿ ನಾವು ದೇಶದ ಮೂಲ ಸೌಕರ್ಯಗಳನ್ನು ಉತ್ತಮ ಪಡಿಸುತ್ತಿದ್ದೇವೆ.</p>.<p><strong>*</strong>ಕಳೆದ ನಾಲ್ಕು ವರ್ಷಗಳಿಂದ ನಾವು ನಿರಂತರವಾಗಿಬಡವರ ಮತ್ತು ಮಧ್ಯಮ ವರ್ಗದವರ ಅಭಿವೃದ್ಧಿಗಾಗಿ ದುಡಿದಿದ್ದೇವೆ. ಇನ್ನು ಮುಂದೆಯೂ ನಾವು ಅದನ್ನು ಮುಂದುವರಿಸುತ್ತೇವೆ.</p>.<p><strong>*</strong>ನಮ್ಮ ಸರ್ಕಾರ 55 ತಿಂಗಳಲ್ಲಿ 77 ಲಕ್ಷ ಮನೆ ಮಂಜೂರು ಮಾಡಿದೆ.ನಗರ ಪ್ರದೇಶಗಳಲ್ಲಿ 13 ಲಕ್ಷ ಮನೆ ಮಂಜೂರು ಮಾಡಿದ್ದು, ಇದರಲ್ಲಿ 8 ಲಕ್ಷ ಮನೆ ಪೂರ್ಣಗೊಂಡಿದೆ.ಮಂಜೂರಾದ 77 ಲಕ್ಷ ಮನೆಗಳ ಪೈಕಿ 15 ಲಕ್ಷ ಮನೆಗಳ ಕೆಲಸ ಪೂರ್ಣಗೊಂಡಿದೆ.<br />ಇದೇ ಮೊದಲ ಬಾರಿ ಸರ್ಕಾರವೊಂದು ಮಧ್ಯಮ ವರ್ಗದವರಿಗೆ ಮನೆ ಸೌಲಭ್ಯದ ಬಗ್ಗೆ ಯೋಚಿಸಿದ್ದು. ಹಾಗಾಗಿ ಮನೆ ಸಾಲದ ಬಡ್ಡಿದರದಲ್ಲಿ ವಿನಾಯಿತಿ ನೀಡಲು ಹೊಸ ಕೆಟಗರಿ ಮಾಡಲಾಗಿದೆ.</p>.<p><strong>*</strong>ಇತ್ತೀಚಿನ ಬಜೆಟ್ನಲ್ಲಿ ₹5 ಲಕ್ಷದವರೆಗೆ ವೇತನ ಇರುವವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.</p>.<p><strong>*</strong>ಕೆಲವೊಬ್ಬರು ತಮ್ಮ ಸಂಪಾದನೆ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ ಎಂದು ಭಾವಿಸಿದ್ದರು,.ಆದರೆ ಅವರು ಲೂಟಿ ಮಾಡಿದ್ದನ್ನು ಈಗ ಪ್ರಶ್ನಿಸಲಾಗುತ್ತಿದೆ.ಲೂಟಿ ಮಾಡಿದವರು ವಿದೇಶದಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ.</p>.<p><strong>*</strong>ವಿಪಕ್ಷದಲ್ಲಿರುವವರಿಗೆ ಬಡವರ,ಯುವಜನಾಂಗ ಮತ್ತು ಬಡವರ ಕಾಳಜಿ ಇಲ್ಲ.ಅವರೆಲ್ಲರೂ ಸ್ವಾರ್ಥಿಗಳಾಗಿದ್ದು, ತಮ್ಮ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಾರೆ.</p>.<p><strong>*</strong>ನೂತನ ಭಾರತ ಮಜ್ಬೂತಿ (ಸುದೃಢ) ಬಯಸುತ್ತಿದೆ.ಮಜ್ಬೂರಿ ( ನಿಸ್ಸಹಾಯಕತೆ) ಅಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>