ಮುಂಗಾರು ಮಳೆ ತಂದ ಪ್ರವಾಹಕ್ಕೆ 1,400 ಮಂದಿ ಸಾವು

ನವದೆಹಲಿ: ಕೇರಳ ಮತ್ತು ಕರ್ನಾಟಕ ಸೇರಿ ದೇಶದ 10 ರಾಜ್ಯಗಳಲ್ಲಿ ಈ ವರ್ಷದ ಮುಂಗಾರು ಮಳೆಗಾಲದಲ್ಲಿ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತದಂತಹ ಅವಘಡಗಳಿಂದಾಗಿ 1,400 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಕೇರಳದಲ್ಲಿ ಶತಮಾನದಲ್ಲೇ ಕಂಡುಕೇಳರಿಯದ ಭೀಕರ ಪ್ರವಾಹದಲ್ಲಿ 488 ಜನರು ಬಲಿಯಾಗಿದ್ದಾರೆ. ರಾಜ್ಯದ 14 ಜಿಲ್ಲೆಗಳೂ ಪ್ರವಾಹಕ್ಕೆ ತುತ್ತಾಗಿದ್ದು, 54.11 ಲಕ್ಷ ಜನರು ತೊಂದರೆಗೆ ಒಳಗಾಗಿದ್ದಾರೆ. ಅಲ್ಲದೆ, ಕರ್ನಾಟಕದ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತವು ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ 57,024 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ ಎಂದು ಸಚಿವಾಲಯದ ರಾಷ್ಟ್ರೀಯ ತುರ್ತು ಸ್ಪಂದನಾ ಕೇಂದ್ರ (ಎನ್ಇಆರ್ಸಿ) ಹೇಳಿದೆ.
ಎಲ್ಲಿ ಎಷ್ಟು ಸಾವು; ಹಾನಿ
ರಾಜ್ಯ | ಸಾವು |
ಕೇರಳ | 488 |
ಉತ್ತರಪ್ರದೇಶ | 254 |
ಪಶ್ಚಿಮ ಬಂಗಾಳ | 210 |
ಕರ್ನಾಟಕ | 170 |
ಮಹಾರಾಷ್ಟ್ರ | 139 |
ಗುಜರಾತ್ | 52 |
ಅಸ್ಸಾಂ | 50 |
ಉತ್ತರಾಖಂಡ | 37 |
ನಾಗಾಲ್ಯಾಂಡ್ | 11 |
ಒಡಿಶಾ | 29 |
ರಾಜ್ಯವಾರು ಕಾಣೆಯಾದವರು
ಕೇರಳ– 15
ಉತ್ತರಪ್ರದೇಶ– 14
ಪಶ್ಚಿಮಬಂಗಾಳ– 5
ಉತ್ತರಾಖಂಡ– 6
ಕರ್ನಾಟಕ– 3
ರಾಜ್ಯವಾರು ನೆರೆ ಸಂತ್ರಸ್ತರು
ಉತ್ತರಪ್ರದೇಶ 3.42 ಲಕ್ಷ ಜನರು
ಕರ್ನಾಟಕ– 3.5 ಲಕ್ಷ ಜನರು
ಅಸ್ಸಾಂ– 11.47 ಲಕ್ಷ ಜನರು
ಪಶ್ಚಿಮ ಬಂಗಾಳ– 2.28 ಲಕ್ಷ
ಬೆಳೆ ನಷ್ಟ
ಉತ್ತರ ಪ್ರದೇಶ– 50,873 ಹೆಕ್ಟೇರ್ ಬೆಳೆ
ಕರ್ನಾಟಕ– 3,521 ಹೆಕ್ಟೇರ್ ಬೆಳೆ ಹಾನಿ
ಅಸ್ಸಾಂ– 27,964 ಹೆಕ್ಟೇರ್ ಬೆಳೆ
ಪಶ್ಚಿಮ ಬಂಗಾಳ– 48,552 ಹೆಕ್ಟೇರ್ ಬೆಳೆ
ಪ್ರವಾಹಕ್ಕೆ ತುತ್ತಾದ ಜಿಲ್ಲೆಗಳು
ಒಡಿಶಾ– 30
ಮಹಾರಾಷ್ಟ್ರ– 26
ಅಸ್ಸಾಂ– 25
ಉತ್ತರಪ್ರದೇಶ– 23
ಪಶ್ಚಿಮ ಬಂಗಾಳ –23
ಕೇರಳ– 14
ಉತ್ತರಾಖಂಡ– 13
ಕರ್ನಾಟಕ– 11
ನಾಗಾಲ್ಯಾಂಡ್– 11
ಗುಜರಾತ್– 10
ಅಂಕಿ ಅಂಶ
10 - ಪ್ರವಾಹ ಪೀಡಿತ ರಾಜ್ಯಗಳು
386 - ಪ್ರವಾಹದಿಂದ ಗಾಯಗೊಂಡವರು
43 - ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾದವರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.