<p><strong>ಲಖನೌ:</strong> ಶಾಲೆಯ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುವ ಆಹಾರದ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದ್ದು, ಈಗ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದೆ.</p>.<p>ಈ ಆಹಾರ ಸೇವಿಸಿದ ಶಿಕ್ಷಕಿ ಮತ್ತು 9 ಮಂದಿ ವಿದ್ಯಾರ್ಥಿಗಳು ಸದ್ಯ ಅಸ್ವಸ್ಥರಾಗಿದ್ದಾರೆ.</p>.<p>ಉತ್ತರ ಪ್ರದೇಶದ ಮುಜಪ್ಫರನಗರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು,ಜನ ಕಲ್ಯಾಣ ಸಮಿತಿ ಎಂಬ ಸರ್ಕಾರೇತರ ಸಂಸ್ಥೆಯು ಈ ಆಹಾರವನ್ನು ಪೂರೈಸಿತ್ತು. 6–8ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರೈಸಿದ ಆಹಾರದಲ್ಲಿ ಇಲಿ ಸಿಕ್ಕಿದೆ.</p>.<p>‘ಸಾಂಬಾರ್ನಲ್ಲಿ ಇಲಿ ಪತ್ತೆಯಾಯಿತು. ಸಾಂಬಾರ್ನ ತಳದಲ್ಲಿ ಇಲಿ ಅವಶೇಷವಿತ್ತು,’ ಎಂದು ಆರನೇ ತರಗತಿಯ ವಿದ್ಯಾರ್ಥಿ ಶಿವಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.</p>.<p>ಘಟನೆ ಕುರಿತು ಸರ್ಕಾರ ಈ ವರೆಗೆ ಏನನ್ನೂ ಮಾತನಾಡಿಲ್ಲವಾದರೂ, ಘಟನೆ ಸಂಬಂಧ ತನಿಖೆಗೆ ಆದೇಶಿಸಿದೆ. ಆಹಾರ ಪೂರೈಸಿದ ಸಂಸ್ಥೆಯ ಕುರಿತು ಜಿಲ್ಲಾಧಿಕಾರಿಗಳು ವರದಿ ಪಡೆದುಕೊಂಡಿದ್ದಾರೆ.</p>.<p><strong>ವಿದ್ಯಾರ್ಥಿಗಳ ಆಹಾರದಲ್ಲಿ ಸರ್ಕಾರದ ಅಸಡ್ಡೆ</strong></p>.<p>ಉತ್ತರ ಪ್ರದೇಶ ಇತ್ತೀಚೆಗೆ ವಿದ್ಯಾರ್ಥಿಗಳ ಆಹಾರದಲ್ಲಿನ ಅವಾಂತರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಕೆಲ ತಿಂಗಳ ಹಿಂದೆ ಮಿರ್ಜಾಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವಾಗಿ ಚಪಾತಿ ಮತ್ತು ಅದರ ಜತೆಗೆ ಉಪ್ಪು ನೀಡುತ್ತಿರುವ ಸಂಗತಿ ಬಯಲಾಗಿತ್ತು. </p>.<p>ಸೋನಾಭದ್ರ ಜಿಲ್ಲೆಯಲ್ಲಿ ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರು ಸುರಿಯುತ್ತಿರುವ ಪ್ರಕರಣವೂ ಬಹಿರಂಗಗೊಂಡಿತ್ತು.</p>.<p>ಈ ಎರಡೂ ಪ್ರಕರಣಗಳ ವಿಡಿಯೊಗಳು ದೇಶಾದ್ಯಂತ ವೈರಲ್ ಆಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಶಾಲೆಯ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುವ ಆಹಾರದ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದ್ದು, ಈಗ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದೆ.</p>.<p>ಈ ಆಹಾರ ಸೇವಿಸಿದ ಶಿಕ್ಷಕಿ ಮತ್ತು 9 ಮಂದಿ ವಿದ್ಯಾರ್ಥಿಗಳು ಸದ್ಯ ಅಸ್ವಸ್ಥರಾಗಿದ್ದಾರೆ.</p>.<p>ಉತ್ತರ ಪ್ರದೇಶದ ಮುಜಪ್ಫರನಗರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು,ಜನ ಕಲ್ಯಾಣ ಸಮಿತಿ ಎಂಬ ಸರ್ಕಾರೇತರ ಸಂಸ್ಥೆಯು ಈ ಆಹಾರವನ್ನು ಪೂರೈಸಿತ್ತು. 6–8ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರೈಸಿದ ಆಹಾರದಲ್ಲಿ ಇಲಿ ಸಿಕ್ಕಿದೆ.</p>.<p>‘ಸಾಂಬಾರ್ನಲ್ಲಿ ಇಲಿ ಪತ್ತೆಯಾಯಿತು. ಸಾಂಬಾರ್ನ ತಳದಲ್ಲಿ ಇಲಿ ಅವಶೇಷವಿತ್ತು,’ ಎಂದು ಆರನೇ ತರಗತಿಯ ವಿದ್ಯಾರ್ಥಿ ಶಿವಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.</p>.<p>ಘಟನೆ ಕುರಿತು ಸರ್ಕಾರ ಈ ವರೆಗೆ ಏನನ್ನೂ ಮಾತನಾಡಿಲ್ಲವಾದರೂ, ಘಟನೆ ಸಂಬಂಧ ತನಿಖೆಗೆ ಆದೇಶಿಸಿದೆ. ಆಹಾರ ಪೂರೈಸಿದ ಸಂಸ್ಥೆಯ ಕುರಿತು ಜಿಲ್ಲಾಧಿಕಾರಿಗಳು ವರದಿ ಪಡೆದುಕೊಂಡಿದ್ದಾರೆ.</p>.<p><strong>ವಿದ್ಯಾರ್ಥಿಗಳ ಆಹಾರದಲ್ಲಿ ಸರ್ಕಾರದ ಅಸಡ್ಡೆ</strong></p>.<p>ಉತ್ತರ ಪ್ರದೇಶ ಇತ್ತೀಚೆಗೆ ವಿದ್ಯಾರ್ಥಿಗಳ ಆಹಾರದಲ್ಲಿನ ಅವಾಂತರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಕೆಲ ತಿಂಗಳ ಹಿಂದೆ ಮಿರ್ಜಾಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವಾಗಿ ಚಪಾತಿ ಮತ್ತು ಅದರ ಜತೆಗೆ ಉಪ್ಪು ನೀಡುತ್ತಿರುವ ಸಂಗತಿ ಬಯಲಾಗಿತ್ತು. </p>.<p>ಸೋನಾಭದ್ರ ಜಿಲ್ಲೆಯಲ್ಲಿ ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರು ಸುರಿಯುತ್ತಿರುವ ಪ್ರಕರಣವೂ ಬಹಿರಂಗಗೊಂಡಿತ್ತು.</p>.<p>ಈ ಎರಡೂ ಪ್ರಕರಣಗಳ ವಿಡಿಯೊಗಳು ದೇಶಾದ್ಯಂತ ವೈರಲ್ ಆಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>