<p><strong>ಮುಂಬೈ:</strong> ಪುಲ್ವಾಮಾ ಘಟನೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್ಎಸ್ಎಸ್) ಹೊಸ ರಾಜಕೀಯ ಅಸ್ತ್ರ ದೊರೆತಂತಾಗಿದೆ. ತನ್ನ ಎಂದಿನ ಅಯೋಧ್ಯೆ ರಾಮ ಮಂದಿರ ವಿವಾದವನ್ನು ಪಕ್ಕಕ್ಕಿಟ್ಟು, ಕಾಶ್ಮೀರ ಸಮಸ್ಯೆಯನ್ನು ಕೈಗೆತ್ತಿಕೊಂಡಿದೆ ಎಂದು ಶಿವಸೇನಾ ಶನಿವಾರ ಆರೋಪ ಮಾಡಿದೆ.</p>.<p>ಉಗ್ರರ ದಾಳಿ ನಂತರ ಆರ್ಎಸ್ಎಸ್ ತನ್ನ ಸಾಂಪ್ರದಾಯಿಕ ನಿಲುವನ್ನು ತಾತ್ಕಾಲಿಕವಾಗಿ ಬದಲಿಸಿಕೊಂಡಿದ್ದು, ಪುಲ್ವಾಮಾ ಘಟನೆ ಮತ್ತು ಭಯೋತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದೆ.</p>.<p>ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬದಲಾಗಿ, ಪುಲ್ವಾಮಾ ಉಗ್ರರ ದಾಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂಬುದು ಸಂಘದ ಬಯಕೆಯಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಶಿವಸೇನಾ ಮುಖವಾಣಿ ‘ಸಾಮ್ನಾ’ ಪ್ರಸ್ತಾಪಿಸಿದೆ.</p>.<p>‘ಸ್ಥಿರ ಸರ್ಕಾರ ಹಾಗೂ ಪ್ರಬಲ ಪ್ರಧಾನಿ ಆಯ್ಕೆಯಾಗದ ಹೊರತು ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕಾಶ್ಮೀರದಂತಹ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಾಧ್ಯವಿಲ್ಲ ಎಂಬುದು ಸಂಘದ ನಿಲುವಾಗಿದೆ’ ಎಂದು ಸಾಮ್ನಾ ಉಲ್ಲೇಖಿಸಿದೆ.</p>.<p>2014ರ ಲೋಕಸಭಾ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿದ್ದ ‘ಸ್ಥಿರ ಸರ್ಕಾರ, ಪ್ರಬಲ ಪ್ರಧಾನಮಂತ್ರಿ’ ಎಂಬ ಘೋಷಣೆಯನ್ನು ಈ ಬಾರಿಯೂ ಮತ್ತೆ ಏಕೆ ಚಲಾವಣೆಗೆ ತರಲಾಗುತ್ತಿದೆ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.</p>.<p>‘ದೇಶದಲ್ಲಿ ಐದು ವರ್ಷಗಳಿಂದ ಸ್ಥಿರ ಸರ್ಕಾರವಿದೆ. ಹೀಗಿದ್ದೂ ಪಾಕಿಸ್ತಾನಕ್ಕೆ ಯಾವ ರೀತಿಯ ಹಾನಿ ಮಾಡಲೂ ಆಗಿಲ್ಲ. ಉರಿ, ಪಠಾಣ್ಕೋಟ್ ಹಾಗೂ ಈಗಿನ ಪುಲ್ವಾಮಾ ದಾಳಿಗಳೂ ಸ್ಥಿರ ಸರ್ಕಾರದ ಅವಧಿಯಲ್ಲೇ ನಡೆದಿವೆ’ಎಂದು ಬಿಜೆಪಿಯನ್ನು ಸೇನೆ ತರಾಟೆಗೆ ತೆಗೆದುಕೊಂಡಿದೆ.</p>.<p>‘70 ವರ್ಷಗಳಲ್ಲೇ ಕಾಶ್ಮೀರದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿದೆ. ಕಾಶ್ಮೀರಿ ಪಂಡಿತರ ‘ಘರ್ ವಾಪಸಿ’ ಇರಲಿ, ಕಾಶ್ಮೀರದ ಮುಸ್ಲಿಂ ಯುವಕರೂ ಉದ್ಯೋಗಕ್ಕಾಗಿ ರಾಜ್ಯ ತೊರೆಯುವ ಪರಿಸ್ಥಿತಿ ಇದೆ. ಕೆಲವರು ಬಂದೂಕು ಹಿಡಿಯುತ್ತಿರುವುದು ದುರದೃಷ್ಟಕರ’ ಎಂದು ಸೇನಾ ಹೇಳಿದೆ.</p>.<p>ಆದರೆ, ಭವಿಷ್ಯದಲ್ಲಿ ಪುಲ್ವಾಮಾದಂತಹ ದಾಳಿಯನ್ನು ತಡೆಯಲು ಸ್ಥಿರ ಸರ್ಕಾರದ ಅಗತ್ಯವಿದೆ ಎಂಬುದನ್ನೂ ಸೇನಾ ಸ್ವತಃ ಒಪ್ಪಿಕೊಂಡಿದೆ.</p>.<p>‘ಮಂದಿರ ಮೊದಲು, ಸರ್ಕಾರ ನಂತರ’ ಎಂಬ ತನ್ನ ಘೋಷಣೆಯಿಂದ ಶಿವಸೇನಾ ಕೂಡಾ ಹಿಂದೆ ಸರಿದಿದೆ. ‘ದೇವರಿಗಿಂತ ದೇಶ ಮುಖ್ಯ’ ಎಂದು ಹೇಳಿದೆ.</p>.<p><strong>ಕೇಂದ್ರದ ನಿರಂಕುಶ ಆಡಳಿತ: ಅಖಿಲೇಶ್</strong><br /><strong>ಅಲಹಾಬಾದ್:</strong> ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರಂಕುಶ ಆಡಳಿತಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಕರೆ ನೀಡಿದರು. ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿಯು ರಾಜಕೀಯ ಯುದ್ಧ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.</p>.<p><strong>ಪ್ರಾದೇಶಿಕ ಭದ್ರತೆಗೆ ಅಪಾಯ: ಪಾಕ್ ಪತ್ರ</strong><br /><strong>ಇಸ್ಲಾಮಾಬಾದ್ (ಪಿಟಿಐ):</strong> ‘ಪ್ರಾದೇಶಿಕ ಭದ್ರತೆಗೆ ಭಾರತ ಬೆದರಿಕೆ ಒಡ್ಡುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಆರೋಪಿಸಿದ್ದಾರೆ.</p>.<p>ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅವರು ಪತ್ರ ಬರೆದಿದ್ದಾರೆ. ’ಪಾಕಿಸ್ತಾನದ ವಿರುದ್ಧ ಸೇನಾಬಲವನ್ನು ಪ್ರಯೋಗಿಸುವ ಕುರಿತು ಭಾರತ ಬೆದರಿಕೆವೊಡ್ಡುತ್ತಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿದೆ’ ಎಂದು ಪತ್ರದಲ್ಲಿ ದೂರಿದ್ದಾರೆ.</p>.<p>‘ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಭಾರತವು ಪುಲ್ವಾಮಾ ದಾಳಿಗೆ ಪಾಕಿಸ್ತಾನವನ್ನು ದೂರುತ್ತಿದೆ. ತನ್ನ ನೀತಿಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನದ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಟೀಕಿಸಿದ್ದಾರೆ.</p>.<p>ಮಾನವ ಹಕ್ಕುಗಳ ಉಲ್ಲಂಘನೆ: ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಖುರೇಷಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರಿಗೂ ಪತ್ರ ಬರೆದಿದ್ದಾರೆ.</p>.<p>ಇದೇ ವಿಷಯವಾಗಿ 2018ರ ಡಿಸೆಂಬರ್ 16ರಂದು ಸಹ ಖುರೇಷಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಬಷೆಲೆಟ್ ಅವರಿಗೆ ಪತ್ರ ಬರೆದಿದ್ದರು.</p>.<p><strong>‘ನಿರುದ್ಯೋಗ: ಒಪ್ಪದ ಪ್ರಧಾನಿ’</strong><br /><strong>ನವದೆಹಲಿ:</strong> ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧರಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.</p>.<p>ಉದ್ಯೋಗಾವಕಾಶ ವಿಷಯ ಕುರಿತು ಯುವಜನತೆಯ ಜೊತೆ ಮೋದಿ ಸಂವಾದ ನಡೆಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.</p>.<p>‘120 ಕೋಟಿ ಜನಸಂಖ್ಯೆಯ ಭಾರತದಲ್ಲಿ 24 ಗಂಟೆಗೆ 450 ಉದ್ಯೋಗ ಸೃಷ್ಟಿಯಾಗುತ್ತಿವೆ. ಇದೇ ಅವಧಿಯಲ್ಲಿ ಚೀನಾದಲ್ಲಿ 50 ಸಾವಿರ ಮಂದಿಗೆ ಕೆಲಸ ಸಿಗುತ್ತಿದೆ. ಇವು ನಾನು ಹೇಳಿದ ಅಂಕಿ–ಅಂಶಗಳಲ್ಲ. ಸಂಸತ್ ಅಧಿವೇಶನದಲ್ಲಿ ಹಣಕಾಸು ಸಚಿವಾಲಯವೇ ಈ ಮಾಹಿತಿ ನೀಡಿದೆ’ ಎಂದರು.ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ರಾಹುಲ್, ‘ಪ್ರಧಾನಿ ನಿಮ್ಮ ಜೊತೆ ಈ ರೀತಿ ಎಂದಾದರೂ ಸಂವಾದ ನಡೆಸಿದ್ದಾರೆಯೇ? ನಿಮ್ಮ ಅಭಿಪ್ರಾಯ ಕೇಳಿದ್ದಾರೆಯೇ’ ಎಂದು ವಿದ್ಯಾರ್ಥಿ ಸಮೂಹವನ್ನು ಪ್ರಶ್ನಿಸಿದರು.</p>.<p><strong>ಪುಲ್ವಾಮಾ ಪ್ರಶ್ನೆಗೆ ಯೋಗಿ ಕಣ್ಣೀರು!</strong><br />ಲಖನೌ: ಪುಲ್ವಾಮಾ ಉಗ್ರರ ದಾಳಿಯ ಕುರಿತು ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾವುಕರಾಗಿ ಕಣ್ಣೀರಾದರು.</p>.<p>ಪುಲ್ವಾಮಾ ಘಟನೆಯ ನಂತರ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನೆ ಹಾಕಿದ. ದೀಪ ಆರುವ ಮುಂಚೆ ಹೆಚ್ಚು ಬೆಳಗುತ್ತದೆ. ಅದೇ ರೀತಿ ಕಾಶ್ಮೀರದಲ್ಲಿ ಕೂಡ ಅದೇ ಪರಿಸ್ಥಿತಿ ಇದೆ. ಭಯೋತ್ಪಾದನೆ ವಿನಾಶದ ಅಂಚಿಗೆ ತಲುಪಿದೆ ಎಂದರು.</p>.<p>ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಎಸೆಯಲಿದೆ ಎಂದು ಭಾವುಕರಾದರು. ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡರು.</p>.<p><strong>ಇಸ್ಲಾಮಿಕ್ ರಾಷ್ಟ್ರಗಳ ಸಚಿವರ ಸಭೆ: ಸುಷ್ಮಾಗೆ ಆಹ್ವಾನ</strong><br />ಇಸ್ಲಾಮಿಕ್ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರ ಸಹಕಾರ ಮಂಡಳಿ 46ನೇ ಅಧಿವೇಶನದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸುವಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಆಹ್ವಾನಿಸಲಾಗಿದೆ.</p>.<p>ಇಸ್ಲಾಮಿಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವರೊಬ್ಬರು ಗೌರವ ಅತಿಥಿಯಾಗಿ ಭಾಗವಹಿಸುತ್ತಿರುವುದು ಇದೇ ಮೊದಲು.</p>.<p>ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್ ಅಬ್ಹುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ನೀಡಿರುವ ಆಹ್ವಾನವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ವೀಕರಿಸಿದೆ.</p>.<p><br />*<br /><strong>ಉಗ್ರರನ್ನು ಹತ್ತಿಕ್ಕುವುದು ಗೊತ್ತು</strong><br />ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಈಗಾಗಲೇ ಕ್ರಮ ಜರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾವು ಕೈಕಟ್ಟಿ ಸುಮ್ಮನೆ ಕೂರುವುದಿಲ್ಲ. ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಹೇಗೆ ಹತ್ತಿಕ್ಕಬೇಕು ಎಂಬುವುದು ನಮಗೆ ಚೆನ್ನಾಗಿ ಗೊತ್ತು.<br /><em><strong>–ನರೇಂದ್ರ ಮೋದಿ, ಪ್ರಧಾನಿ</strong></em></p>.<p>***<br /><strong>ಸ್ವೇಚ್ಛಾಚಾರದ ಕ್ರಮ</strong><br />ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರು ಮತ್ತು ಜಮಾತ್–ಎ–ಇಸ್ಲಾಮಿ ನಾಯಕರ ಬಂಧನ ಸರ್ಕಾರದ ಸ್ವೇಚ್ಛಾಚಾರದ ಕ್ರಮ. ಕಾನೂನಾತ್ಮಕವಾಗಿ ಯಾವ ನೆಲೆಯಲ್ಲಿ ಸರ್ಕಾರ ಬಂಧನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತದೆ? ಒಬ್ಬ ವ್ಯಕ್ತಿಯನ್ನು ಬಂಧಿಸಿ ಇಡಬಹುದೇ ಹೊರತು ಆತನ ವಿಚಾರಗಳನ್ನಲ್ಲ.<br /><em><strong>–ಮೆಹಬೂಬಾ ಮುಫ್ತಿ, ಪಿಡಿಪಿ ನಾಯಕಿ</strong></em></p>.<p><em><strong>***</strong></em><br /><strong>ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ</strong><br />ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಮತ್ತು ಜಮಾತ್–ಎ– ಇಸ್ಲಾಮಿ ನಾಯಕರನ್ನು ಬಂಧಿಸುವ ಮೂಲಕ ಸರ್ಕಾರ ಬಲಪ್ರಯೋಗ ಮತ್ತು ಬೆದರಿಸುವ ತಂತ್ರ ಅನುಸರಿಸುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ.<br /><em><strong>–ಮಿರ್ವೈಜ್ ಉಮರ್ ಫಾರೂಕ್, ಹುರಿಯತ್ ನಾಯಕ</strong></em></p>.<p>***</p>.<p><strong>ಮೋದಿ ಹೇಳಿಕೆಗೆ ಸ್ವಾಗತ</strong><br />‘ಯುದ್ಧ ಕಾಶ್ಮೀರಿಗಳ ಮೇಲಲ್ಲ’ ಎಂದು ಪ್ರಧಾನಿ ಅಭಯ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇದು ಕಣಿವೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ವಿಶ್ವಾಸವಿದೆ. ಸಾಂವಿಧಾನಿಕ ಹುದ್ದೆಗಳಲ್ಲಿರುವವರೂ ಸೇರಿದಂತೆ ಹಲವರು ‘ಕಾಶ್ಮೀರ ವಿರೋಧಿ ಹೇಳಿಕೆ’ಗಳನ್ನು ನೀಡುತ್ತಿದ್ದು, ಪ್ರಧಾನಿ ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು.<br /><em><strong>–ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಪುಲ್ವಾಮಾ ಘಟನೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್ಎಸ್ಎಸ್) ಹೊಸ ರಾಜಕೀಯ ಅಸ್ತ್ರ ದೊರೆತಂತಾಗಿದೆ. ತನ್ನ ಎಂದಿನ ಅಯೋಧ್ಯೆ ರಾಮ ಮಂದಿರ ವಿವಾದವನ್ನು ಪಕ್ಕಕ್ಕಿಟ್ಟು, ಕಾಶ್ಮೀರ ಸಮಸ್ಯೆಯನ್ನು ಕೈಗೆತ್ತಿಕೊಂಡಿದೆ ಎಂದು ಶಿವಸೇನಾ ಶನಿವಾರ ಆರೋಪ ಮಾಡಿದೆ.</p>.<p>ಉಗ್ರರ ದಾಳಿ ನಂತರ ಆರ್ಎಸ್ಎಸ್ ತನ್ನ ಸಾಂಪ್ರದಾಯಿಕ ನಿಲುವನ್ನು ತಾತ್ಕಾಲಿಕವಾಗಿ ಬದಲಿಸಿಕೊಂಡಿದ್ದು, ಪುಲ್ವಾಮಾ ಘಟನೆ ಮತ್ತು ಭಯೋತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದೆ.</p>.<p>ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬದಲಾಗಿ, ಪುಲ್ವಾಮಾ ಉಗ್ರರ ದಾಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂಬುದು ಸಂಘದ ಬಯಕೆಯಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಶಿವಸೇನಾ ಮುಖವಾಣಿ ‘ಸಾಮ್ನಾ’ ಪ್ರಸ್ತಾಪಿಸಿದೆ.</p>.<p>‘ಸ್ಥಿರ ಸರ್ಕಾರ ಹಾಗೂ ಪ್ರಬಲ ಪ್ರಧಾನಿ ಆಯ್ಕೆಯಾಗದ ಹೊರತು ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕಾಶ್ಮೀರದಂತಹ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಾಧ್ಯವಿಲ್ಲ ಎಂಬುದು ಸಂಘದ ನಿಲುವಾಗಿದೆ’ ಎಂದು ಸಾಮ್ನಾ ಉಲ್ಲೇಖಿಸಿದೆ.</p>.<p>2014ರ ಲೋಕಸಭಾ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿದ್ದ ‘ಸ್ಥಿರ ಸರ್ಕಾರ, ಪ್ರಬಲ ಪ್ರಧಾನಮಂತ್ರಿ’ ಎಂಬ ಘೋಷಣೆಯನ್ನು ಈ ಬಾರಿಯೂ ಮತ್ತೆ ಏಕೆ ಚಲಾವಣೆಗೆ ತರಲಾಗುತ್ತಿದೆ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.</p>.<p>‘ದೇಶದಲ್ಲಿ ಐದು ವರ್ಷಗಳಿಂದ ಸ್ಥಿರ ಸರ್ಕಾರವಿದೆ. ಹೀಗಿದ್ದೂ ಪಾಕಿಸ್ತಾನಕ್ಕೆ ಯಾವ ರೀತಿಯ ಹಾನಿ ಮಾಡಲೂ ಆಗಿಲ್ಲ. ಉರಿ, ಪಠಾಣ್ಕೋಟ್ ಹಾಗೂ ಈಗಿನ ಪುಲ್ವಾಮಾ ದಾಳಿಗಳೂ ಸ್ಥಿರ ಸರ್ಕಾರದ ಅವಧಿಯಲ್ಲೇ ನಡೆದಿವೆ’ಎಂದು ಬಿಜೆಪಿಯನ್ನು ಸೇನೆ ತರಾಟೆಗೆ ತೆಗೆದುಕೊಂಡಿದೆ.</p>.<p>‘70 ವರ್ಷಗಳಲ್ಲೇ ಕಾಶ್ಮೀರದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿದೆ. ಕಾಶ್ಮೀರಿ ಪಂಡಿತರ ‘ಘರ್ ವಾಪಸಿ’ ಇರಲಿ, ಕಾಶ್ಮೀರದ ಮುಸ್ಲಿಂ ಯುವಕರೂ ಉದ್ಯೋಗಕ್ಕಾಗಿ ರಾಜ್ಯ ತೊರೆಯುವ ಪರಿಸ್ಥಿತಿ ಇದೆ. ಕೆಲವರು ಬಂದೂಕು ಹಿಡಿಯುತ್ತಿರುವುದು ದುರದೃಷ್ಟಕರ’ ಎಂದು ಸೇನಾ ಹೇಳಿದೆ.</p>.<p>ಆದರೆ, ಭವಿಷ್ಯದಲ್ಲಿ ಪುಲ್ವಾಮಾದಂತಹ ದಾಳಿಯನ್ನು ತಡೆಯಲು ಸ್ಥಿರ ಸರ್ಕಾರದ ಅಗತ್ಯವಿದೆ ಎಂಬುದನ್ನೂ ಸೇನಾ ಸ್ವತಃ ಒಪ್ಪಿಕೊಂಡಿದೆ.</p>.<p>‘ಮಂದಿರ ಮೊದಲು, ಸರ್ಕಾರ ನಂತರ’ ಎಂಬ ತನ್ನ ಘೋಷಣೆಯಿಂದ ಶಿವಸೇನಾ ಕೂಡಾ ಹಿಂದೆ ಸರಿದಿದೆ. ‘ದೇವರಿಗಿಂತ ದೇಶ ಮುಖ್ಯ’ ಎಂದು ಹೇಳಿದೆ.</p>.<p><strong>ಕೇಂದ್ರದ ನಿರಂಕುಶ ಆಡಳಿತ: ಅಖಿಲೇಶ್</strong><br /><strong>ಅಲಹಾಬಾದ್:</strong> ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರಂಕುಶ ಆಡಳಿತಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಕರೆ ನೀಡಿದರು. ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿಯು ರಾಜಕೀಯ ಯುದ್ಧ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.</p>.<p><strong>ಪ್ರಾದೇಶಿಕ ಭದ್ರತೆಗೆ ಅಪಾಯ: ಪಾಕ್ ಪತ್ರ</strong><br /><strong>ಇಸ್ಲಾಮಾಬಾದ್ (ಪಿಟಿಐ):</strong> ‘ಪ್ರಾದೇಶಿಕ ಭದ್ರತೆಗೆ ಭಾರತ ಬೆದರಿಕೆ ಒಡ್ಡುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಆರೋಪಿಸಿದ್ದಾರೆ.</p>.<p>ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅವರು ಪತ್ರ ಬರೆದಿದ್ದಾರೆ. ’ಪಾಕಿಸ್ತಾನದ ವಿರುದ್ಧ ಸೇನಾಬಲವನ್ನು ಪ್ರಯೋಗಿಸುವ ಕುರಿತು ಭಾರತ ಬೆದರಿಕೆವೊಡ್ಡುತ್ತಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿದೆ’ ಎಂದು ಪತ್ರದಲ್ಲಿ ದೂರಿದ್ದಾರೆ.</p>.<p>‘ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಭಾರತವು ಪುಲ್ವಾಮಾ ದಾಳಿಗೆ ಪಾಕಿಸ್ತಾನವನ್ನು ದೂರುತ್ತಿದೆ. ತನ್ನ ನೀತಿಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನದ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಟೀಕಿಸಿದ್ದಾರೆ.</p>.<p>ಮಾನವ ಹಕ್ಕುಗಳ ಉಲ್ಲಂಘನೆ: ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಖುರೇಷಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರಿಗೂ ಪತ್ರ ಬರೆದಿದ್ದಾರೆ.</p>.<p>ಇದೇ ವಿಷಯವಾಗಿ 2018ರ ಡಿಸೆಂಬರ್ 16ರಂದು ಸಹ ಖುರೇಷಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಬಷೆಲೆಟ್ ಅವರಿಗೆ ಪತ್ರ ಬರೆದಿದ್ದರು.</p>.<p><strong>‘ನಿರುದ್ಯೋಗ: ಒಪ್ಪದ ಪ್ರಧಾನಿ’</strong><br /><strong>ನವದೆಹಲಿ:</strong> ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧರಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.</p>.<p>ಉದ್ಯೋಗಾವಕಾಶ ವಿಷಯ ಕುರಿತು ಯುವಜನತೆಯ ಜೊತೆ ಮೋದಿ ಸಂವಾದ ನಡೆಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.</p>.<p>‘120 ಕೋಟಿ ಜನಸಂಖ್ಯೆಯ ಭಾರತದಲ್ಲಿ 24 ಗಂಟೆಗೆ 450 ಉದ್ಯೋಗ ಸೃಷ್ಟಿಯಾಗುತ್ತಿವೆ. ಇದೇ ಅವಧಿಯಲ್ಲಿ ಚೀನಾದಲ್ಲಿ 50 ಸಾವಿರ ಮಂದಿಗೆ ಕೆಲಸ ಸಿಗುತ್ತಿದೆ. ಇವು ನಾನು ಹೇಳಿದ ಅಂಕಿ–ಅಂಶಗಳಲ್ಲ. ಸಂಸತ್ ಅಧಿವೇಶನದಲ್ಲಿ ಹಣಕಾಸು ಸಚಿವಾಲಯವೇ ಈ ಮಾಹಿತಿ ನೀಡಿದೆ’ ಎಂದರು.ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ರಾಹುಲ್, ‘ಪ್ರಧಾನಿ ನಿಮ್ಮ ಜೊತೆ ಈ ರೀತಿ ಎಂದಾದರೂ ಸಂವಾದ ನಡೆಸಿದ್ದಾರೆಯೇ? ನಿಮ್ಮ ಅಭಿಪ್ರಾಯ ಕೇಳಿದ್ದಾರೆಯೇ’ ಎಂದು ವಿದ್ಯಾರ್ಥಿ ಸಮೂಹವನ್ನು ಪ್ರಶ್ನಿಸಿದರು.</p>.<p><strong>ಪುಲ್ವಾಮಾ ಪ್ರಶ್ನೆಗೆ ಯೋಗಿ ಕಣ್ಣೀರು!</strong><br />ಲಖನೌ: ಪುಲ್ವಾಮಾ ಉಗ್ರರ ದಾಳಿಯ ಕುರಿತು ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾವುಕರಾಗಿ ಕಣ್ಣೀರಾದರು.</p>.<p>ಪುಲ್ವಾಮಾ ಘಟನೆಯ ನಂತರ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನೆ ಹಾಕಿದ. ದೀಪ ಆರುವ ಮುಂಚೆ ಹೆಚ್ಚು ಬೆಳಗುತ್ತದೆ. ಅದೇ ರೀತಿ ಕಾಶ್ಮೀರದಲ್ಲಿ ಕೂಡ ಅದೇ ಪರಿಸ್ಥಿತಿ ಇದೆ. ಭಯೋತ್ಪಾದನೆ ವಿನಾಶದ ಅಂಚಿಗೆ ತಲುಪಿದೆ ಎಂದರು.</p>.<p>ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಎಸೆಯಲಿದೆ ಎಂದು ಭಾವುಕರಾದರು. ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡರು.</p>.<p><strong>ಇಸ್ಲಾಮಿಕ್ ರಾಷ್ಟ್ರಗಳ ಸಚಿವರ ಸಭೆ: ಸುಷ್ಮಾಗೆ ಆಹ್ವಾನ</strong><br />ಇಸ್ಲಾಮಿಕ್ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರ ಸಹಕಾರ ಮಂಡಳಿ 46ನೇ ಅಧಿವೇಶನದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸುವಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಆಹ್ವಾನಿಸಲಾಗಿದೆ.</p>.<p>ಇಸ್ಲಾಮಿಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವರೊಬ್ಬರು ಗೌರವ ಅತಿಥಿಯಾಗಿ ಭಾಗವಹಿಸುತ್ತಿರುವುದು ಇದೇ ಮೊದಲು.</p>.<p>ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್ ಅಬ್ಹುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ನೀಡಿರುವ ಆಹ್ವಾನವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ವೀಕರಿಸಿದೆ.</p>.<p><br />*<br /><strong>ಉಗ್ರರನ್ನು ಹತ್ತಿಕ್ಕುವುದು ಗೊತ್ತು</strong><br />ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಈಗಾಗಲೇ ಕ್ರಮ ಜರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾವು ಕೈಕಟ್ಟಿ ಸುಮ್ಮನೆ ಕೂರುವುದಿಲ್ಲ. ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಹೇಗೆ ಹತ್ತಿಕ್ಕಬೇಕು ಎಂಬುವುದು ನಮಗೆ ಚೆನ್ನಾಗಿ ಗೊತ್ತು.<br /><em><strong>–ನರೇಂದ್ರ ಮೋದಿ, ಪ್ರಧಾನಿ</strong></em></p>.<p>***<br /><strong>ಸ್ವೇಚ್ಛಾಚಾರದ ಕ್ರಮ</strong><br />ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರು ಮತ್ತು ಜಮಾತ್–ಎ–ಇಸ್ಲಾಮಿ ನಾಯಕರ ಬಂಧನ ಸರ್ಕಾರದ ಸ್ವೇಚ್ಛಾಚಾರದ ಕ್ರಮ. ಕಾನೂನಾತ್ಮಕವಾಗಿ ಯಾವ ನೆಲೆಯಲ್ಲಿ ಸರ್ಕಾರ ಬಂಧನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತದೆ? ಒಬ್ಬ ವ್ಯಕ್ತಿಯನ್ನು ಬಂಧಿಸಿ ಇಡಬಹುದೇ ಹೊರತು ಆತನ ವಿಚಾರಗಳನ್ನಲ್ಲ.<br /><em><strong>–ಮೆಹಬೂಬಾ ಮುಫ್ತಿ, ಪಿಡಿಪಿ ನಾಯಕಿ</strong></em></p>.<p><em><strong>***</strong></em><br /><strong>ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ</strong><br />ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಮತ್ತು ಜಮಾತ್–ಎ– ಇಸ್ಲಾಮಿ ನಾಯಕರನ್ನು ಬಂಧಿಸುವ ಮೂಲಕ ಸರ್ಕಾರ ಬಲಪ್ರಯೋಗ ಮತ್ತು ಬೆದರಿಸುವ ತಂತ್ರ ಅನುಸರಿಸುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ.<br /><em><strong>–ಮಿರ್ವೈಜ್ ಉಮರ್ ಫಾರೂಕ್, ಹುರಿಯತ್ ನಾಯಕ</strong></em></p>.<p>***</p>.<p><strong>ಮೋದಿ ಹೇಳಿಕೆಗೆ ಸ್ವಾಗತ</strong><br />‘ಯುದ್ಧ ಕಾಶ್ಮೀರಿಗಳ ಮೇಲಲ್ಲ’ ಎಂದು ಪ್ರಧಾನಿ ಅಭಯ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇದು ಕಣಿವೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ವಿಶ್ವಾಸವಿದೆ. ಸಾಂವಿಧಾನಿಕ ಹುದ್ದೆಗಳಲ್ಲಿರುವವರೂ ಸೇರಿದಂತೆ ಹಲವರು ‘ಕಾಶ್ಮೀರ ವಿರೋಧಿ ಹೇಳಿಕೆ’ಗಳನ್ನು ನೀಡುತ್ತಿದ್ದು, ಪ್ರಧಾನಿ ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು.<br /><em><strong>–ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>