ಮುಂಬೈ : ನಗರದ ಜನತೆಗೆ ಬೃಹತ್ ಮುಂಬೈ ನಗರಪಾಲಿಕೆ ವತಿಯಿಂದ₹10ಗೆ ಊಟ ನೀಡುವ ಯೋಜನೆಯನ್ನು ಸದ್ಯದಲ್ಲಿಯೇ ಜಾರಿ ಮಾಡಲಾಗುವುದು ಎಂದು ಮೇಯರ್ ಕಿಶೋರಿ ಪೆಡ್ನೆಕರ್ತಿಳಿಸಿದ್ದಾರೆ.
ಈಗಾಗಲೇ ಮುಂಬೈ ನಗರಪಾಲಿಕೆಯ ನೌಕರರಿಗೆ₹10ಗೆ ಊಟ ನೀಡುವ ವ್ಯವಸ್ಥೆಯನ್ನು ಡಿಸೆಂಬರ್ 19 ರಿಂದ ಜಾರಿ ಮಾಡಲಾಗಿದೆ. ಇದನ್ನು ನಗರದ ನಾಗರಿಕರಿಗೆ ನೀಡುವ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಊಟದಲ್ಲಿ 2 ಚಪಾತಿ, ಅನ್ನ, ದಾಲ್ ಮತ್ತು ತರಕಾರಿಗಳು ಇರಲಿವೆ ಎಂದು ಮೇಯರ್ ತಿಳಿಸಿದ್ದಾರೆ. ಶಿವಸೇನಾದ ಪ್ರಣಾಳಿಕೆಯಲ್ಲಿ ಈ ಕಾರ್ಯಕ್ರಮವನ್ನು ಸೇರಿಸಲಾಗಿತ್ತು. ಈಗ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಮೇಯರ್ ತಿಳಿಸಿದ್ದಾರೆ.
ಈ ಕ್ಯಾಂಟೀನ್ಗಳಿಗೆ ಯಾವ ಹೆಸರಿಡಬೇಕೆಂಬುದು ಇನ್ನೂ ತಿಳಿದುಬಂದಿಲ್ಲ.