<p><strong>ಭೋಪಾಲ್ </strong>: ಅಗಾಗ ಜನವಸತಿ ಪ್ರದೇಶಕ್ಕೆ ನುಗ್ಗುವ ಚಾಳಿ ಹೊಂದಿರುವ ಹುಲಿಯೊಂದನ್ನು ಈಗ ಇಲ್ಲಿನ ವನ್ವಿಹಾರ್ ರಾಷ್ಟ್ರೀಯ ಉದ್ಯಾನಕ್ಕೆ ಕರೆತಂದು ಪ್ರತ್ಯೇಕವಾಸದಲ್ಲಿಡಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.</p>.<p>‘ಸರನ್‘ ಹೆಸರಿನ ಈ ಹುಲಿಯನ್ನು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ 2018ರ ಡಿಸೆಂಬರ್ನಲ್ಲಿ ಮೊದಲ ಬಾರಿ ಸೆರೆಹಿಡಿದು ಬೋನಿಗೆ ಹಾಕಲಾಗಿತ್ತು.</p>.<p>ಈ ಹುಲಿ ನೆರೆಯ ಮಹಾರಾಷ್ಟ್ರದ ಜನವಸತಿ ಪ್ರದೇಶಕ್ಕೆ ನುಗ್ಗಿತ್ತು. ಗಡಿ ಜಿಲ್ಲೆ ಅಮರಾವತಿಯಲ್ಲಿ ಅಕ್ಟೋಬರ್ನಲ್ಲಿ ಇಬ್ಬರನ್ನು ಕೊಂದುಹಾಕಿತ್ತು, ನಂತರ ಮಧ್ಯಪ್ರದೇಶದ ಅರಣ್ಯದಲ್ಲಿ ಓಡಾಡಿಕೊಂಡಿದ್ದ ಈ ಹುಲಿ, ಗಡಿಗೆ ಹೊಂದಿಕೊಂಡ ಬೇತುಲ್ನ ಸರನಿ ಎಂಬಲ್ಲಿ ಮತ್ತೆ ಜನವಸತಿ ಪ್ರದೇಶದಿಂದ ಕಾಣಿಸಿಕೊಂಡಿತ್ತು. ಅದನ್ನು ಅಲ್ಲಿಂದ ರಕ್ಷಿಸಲಾಗಿತ್ತು ಎಂದು ವನ್ವಿಹಾರ್ ರಾಷ್ಟ್ರೀಯ ಉದ್ಯಾನದ ಅಧಿಕಾರಿ ತಿಳಿಸಿದ್ದಾರೆ.</p>.<p>ಸಹಜ ಪರಿಸರಕ್ಕೆ ಹೊಂದಿಕೊಳ್ಳಲು ಅದಕ್ಕೆ ಅವಕಾಶ ನೀಡಿ, ಸಾತ್ಪುರದ ಹುಲಿಸಂರಕ್ಷಿತ ಪ್ರದೇಶಕ್ಕೆ ಬಿಡಲಾಗಿತ್ತು. ಆದರೆ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ನುಸುಳುವ ಚಾಳಿಯನ್ನು ಈ ಹುಲಿರಾಯ ಬಿಟ್ಟಿರಲಿಲ್ಲ. 2019ರ ಫೆಬ್ರುವರಿ 10ರಂದು ಮತ್ತೊಮ್ಮೆ ಸರನಿ ಗ್ರಾಮದಲ್ಲಿ ಕಾಣಿಸಿಕೊಂಡಾಗ ಅದನ್ನು ಸೆರೆಹಿಡಿದು ಕಾನ್ಹಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಎನ್ಕ್ಲೋಷರ್ನಲ್ಲಿ ಬಿಡಲಾಗಿತ್ತು.</p>.<p>‘ಹುಲಿಯನ್ನು ಪ್ರಕೃತಿಸಹಜ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಯತ್ನಗಳು ವಿಫಲವಾದ ಕಾರಣ ಅದನ್ನು ಶನಿವಾರ ಕಾನ್ಹಾದಿಂದ ವನ್ವಿಹಾರ್ ನ್ಯಾಷನಲ್ ಪಾರ್ಕ್ಗೆ ಕರೆತರಲಾಗಿದ್ದು, ಸದ್ಯ ಪ್ರತ್ಯೇಕವಾಸದಲ್ಲಿ ಇಡಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.</p>.<p>ಇದರೊಡನೆ ವನ್ವಿಹಾರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ 14ಕ್ಕೆ ಏರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ್ </strong>: ಅಗಾಗ ಜನವಸತಿ ಪ್ರದೇಶಕ್ಕೆ ನುಗ್ಗುವ ಚಾಳಿ ಹೊಂದಿರುವ ಹುಲಿಯೊಂದನ್ನು ಈಗ ಇಲ್ಲಿನ ವನ್ವಿಹಾರ್ ರಾಷ್ಟ್ರೀಯ ಉದ್ಯಾನಕ್ಕೆ ಕರೆತಂದು ಪ್ರತ್ಯೇಕವಾಸದಲ್ಲಿಡಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.</p>.<p>‘ಸರನ್‘ ಹೆಸರಿನ ಈ ಹುಲಿಯನ್ನು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ 2018ರ ಡಿಸೆಂಬರ್ನಲ್ಲಿ ಮೊದಲ ಬಾರಿ ಸೆರೆಹಿಡಿದು ಬೋನಿಗೆ ಹಾಕಲಾಗಿತ್ತು.</p>.<p>ಈ ಹುಲಿ ನೆರೆಯ ಮಹಾರಾಷ್ಟ್ರದ ಜನವಸತಿ ಪ್ರದೇಶಕ್ಕೆ ನುಗ್ಗಿತ್ತು. ಗಡಿ ಜಿಲ್ಲೆ ಅಮರಾವತಿಯಲ್ಲಿ ಅಕ್ಟೋಬರ್ನಲ್ಲಿ ಇಬ್ಬರನ್ನು ಕೊಂದುಹಾಕಿತ್ತು, ನಂತರ ಮಧ್ಯಪ್ರದೇಶದ ಅರಣ್ಯದಲ್ಲಿ ಓಡಾಡಿಕೊಂಡಿದ್ದ ಈ ಹುಲಿ, ಗಡಿಗೆ ಹೊಂದಿಕೊಂಡ ಬೇತುಲ್ನ ಸರನಿ ಎಂಬಲ್ಲಿ ಮತ್ತೆ ಜನವಸತಿ ಪ್ರದೇಶದಿಂದ ಕಾಣಿಸಿಕೊಂಡಿತ್ತು. ಅದನ್ನು ಅಲ್ಲಿಂದ ರಕ್ಷಿಸಲಾಗಿತ್ತು ಎಂದು ವನ್ವಿಹಾರ್ ರಾಷ್ಟ್ರೀಯ ಉದ್ಯಾನದ ಅಧಿಕಾರಿ ತಿಳಿಸಿದ್ದಾರೆ.</p>.<p>ಸಹಜ ಪರಿಸರಕ್ಕೆ ಹೊಂದಿಕೊಳ್ಳಲು ಅದಕ್ಕೆ ಅವಕಾಶ ನೀಡಿ, ಸಾತ್ಪುರದ ಹುಲಿಸಂರಕ್ಷಿತ ಪ್ರದೇಶಕ್ಕೆ ಬಿಡಲಾಗಿತ್ತು. ಆದರೆ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ನುಸುಳುವ ಚಾಳಿಯನ್ನು ಈ ಹುಲಿರಾಯ ಬಿಟ್ಟಿರಲಿಲ್ಲ. 2019ರ ಫೆಬ್ರುವರಿ 10ರಂದು ಮತ್ತೊಮ್ಮೆ ಸರನಿ ಗ್ರಾಮದಲ್ಲಿ ಕಾಣಿಸಿಕೊಂಡಾಗ ಅದನ್ನು ಸೆರೆಹಿಡಿದು ಕಾನ್ಹಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಎನ್ಕ್ಲೋಷರ್ನಲ್ಲಿ ಬಿಡಲಾಗಿತ್ತು.</p>.<p>‘ಹುಲಿಯನ್ನು ಪ್ರಕೃತಿಸಹಜ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಯತ್ನಗಳು ವಿಫಲವಾದ ಕಾರಣ ಅದನ್ನು ಶನಿವಾರ ಕಾನ್ಹಾದಿಂದ ವನ್ವಿಹಾರ್ ನ್ಯಾಷನಲ್ ಪಾರ್ಕ್ಗೆ ಕರೆತರಲಾಗಿದ್ದು, ಸದ್ಯ ಪ್ರತ್ಯೇಕವಾಸದಲ್ಲಿ ಇಡಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.</p>.<p>ಇದರೊಡನೆ ವನ್ವಿಹಾರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ 14ಕ್ಕೆ ಏರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>