<figcaption>""</figcaption>.<p>ದೇಶದ ಕಡಲತೀರಗಳಲ್ಲಿನ ಜೀವವೈವಿಧ್ಯವನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 1991ರಲ್ಲಿ ಕಡಲತೀರ ನಿಯಂತ್ರಣ ವಲಯ (ಸಿಆರ್ಝಡ್) ನಿಯಮಗಳನ್ನು ರೂಪಿಸಿತ್ತು. ಆದರೆ, ಈ ನಿಯಮಗಳು ಅತ್ಯಂತ ಕಠಿಣವಾಗಿದ್ದ ಕಾರಣ ರಾಜ್ಯಗಳು ಇವನ್ನು ಜಾರಿಗೆ ತರಲು ನಿರಾಕರಿಸಿದ್ದವು. ಹೀಗಾಗಿ 2011ರಲ್ಲಿ ಮತ್ತು 2018ರಲ್ಲಿ ಈ ನಿಯಮಗಳಿಗೆ ತಿದ್ದುಪಡಿ ತರಲಾಯಿತು.</p>.<p>ಈ ನಿಯಮಗಳ ಪ್ರಕಾರ ಕಡಲತೀರದಿಂದ ನಿಗದಿತ ಅಂತರದಲ್ಲಿ (ಅಭಿವೃದ್ಧಿ ನಿಷೇಧ ವಲಯ) ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸಬಾರದು. ಈ ನಿಯಮಗಳನ್ನು ಅನುಷ್ಠಾನಕ್ಕೆ ತರುವುದು, ಆಯಾ ರಾಜ್ಯಗಳ ಕಡಲತೀರ ನಿರ್ವಹಣಾ ಪ್ರಾಧಿಕಾರಗಳ ಹೊಣೆ. ಈ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಚಟುವಟಿಕೆಗಳನ್ನು ತಡೆಯುವ ಮತ್ತು ತೆರವು ಮಾಡುವ ಅಧಿಕಾರ ಈ ಪ್ರಾಧಿಕಾರಕ್ಕೆ ಇದೆ</p>.<p class="Briefhead"><strong>ಕಡಲತೀರ ವರ್ಗೀಕರಣ ಮತ್ತು ನಿಯಮಗಳು</strong></p>.<p class="Subhead"><strong>ಸಿಆರ್ಜೆಡ್–1: ಪರಿಸರ ಸೂಕ್ಷ್ಮ ವಲಯ</strong></p>.<p>ಕಡಲತೀರ, ರಾಷ್ಟ್ರೀಯ ಉದ್ಯಾನ, ಅರಣ್ಯ ಪ್ರದೇಶ, ಅಳಿವೆ ಪ್ರದೇಶ, ಮ್ಯಾಂಗ್ರೋವ್ ಅರಣ್ಯ ಪ್ರದೇಶ, ಅಭಯಾರಣ್ಯ ಹಾಗೂ ಕಡಲಜೀವಿಗಳ ಸಂತಾನೋತ್ಪತಿ ಪ್ರದೇಶಗಳು ಈ ವಲಯದಲ್ಲಿ ಬರುತ್ತವೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿ, ಚಟುವಟಿಕೆ ನಡೆಸುವಂತಿಲ್ಲ</p>.<p>* ಈ ಪ್ರದೇಶಕ್ಕೂ ಈ ನಿಯಮ ಅನ್ವಯವಾಗುತ್ತದೆ</p>.<p class="Subhead"><strong>ಸಿಆರ್ಜೆಡ್–2: ಕಡಲತೀರದ ನಗರ ಪ್ರದೇಶ</strong></p>.<p>ಕಡಲತೀರದವರೆಗೂ ಅಭಿವೃದ್ಧಿಯಾಗಿರುವ ನಗರ ಪ್ರದೇಶಗಳು ಈ ವರ್ಗದಲ್ಲಿ ಬರುತ್ತವೆ. ಈ ನಗರಗಳಲ್ಲಿಈಗಾಗಲೇ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಯಾಗಿರಬೇಕು ಮತ್ತು ಮೂಲಸೌಕರ್ಯಗಳು ಲಭ್ಯವಿರಬೇಕು</p>.<p>* ಕಡಲತೀರ ನಿರ್ವಹಣಾ ಪ್ರಾಧಿಕಾರವು ರೂಪಿಸುವ ನಿಯಮಗಳ ಅನುಸಾರ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬಹುದು</p>.<p>* ಹೊಸದಾಗಿ ನಿರ್ಮಿಸುವ ಕಟ್ಟಡಗಳು, ಸ್ಥಳೀಯ ವಿನ್ಯಾಸಕ್ಕೆ ಅನುಗುಣವಾಗಿ ಇರಬೇಕು</p>.<p class="Subhead">ಸಿಆರ್ಜೆಡ್–3: ಗ್ರಾಮೀಣ ಮತ್ತು ಪಟ್ಟಣ ಪ್ರದೇಶ</p>.<p>ಹೆಚ್ಚು ಅಭಿವೃದ್ಧಿ ಚಟುವಟಿಕೆಗಳು ನಡೆಯದ ಪಟ್ಟಣ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳು ಈ ವರ್ಗದಲ್ಲಿ ಬರುತ್ತವೆ. ಜನಸಾಂದ್ರತೆಯ ಆಧಾರದಲ್ಲಿ ಇದನ್ನು ಮತ್ತೆ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ</p>.<p class="Subhead"><strong>ಸಿಆರ್ಜೆಡ್–3ಎ</strong></p>.<p>ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ 2,161ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶ.ಉಬ್ಬರದ ಅಲೆಗಳ ಲೇನ್ನಿಂದ 50 ಮೀಟರ್ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ</p>.<p class="Subhead"><strong>ಸಿಆರ್ಜೆಡ್–3ಬಿ</strong></p>.<p>ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ 2,161ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶ. ಉಬ್ಬರದ ಅಲೆಗಳ ಲೇನ್ನಿಂದ 200 ಮೀಟರ್ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ</p>.<p class="Subhead"><strong>ಸಿಆರ್ಜೆಡ್–4: ದ್ವೀಪ ಪ್ರದೇಶಗಳು</strong></p>.<p>ದ್ವೀಪಗಳು ಮತ್ತು ಒಳನಾಡು ದ್ವೀಪ ಪ್ರದೇಶಗಳಿಗೆ ಇದು ಅನ್ವಯವಾಗುತ್ತದೆ.ಉಬ್ಬರದ ಅಲೆಗಳ ಲೇನ್ನಿಂದ 20 ಮೀಟರ್ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ</p>.<p><strong>ಪ್ರವಾಸೋದ್ಯಮ</strong></p>.<p>ಕಡಲತೀರದಅಭಿವೃದ್ಧಿ ನಿಷೇಧ ವಲಯದಲ್ಲೂ ಪ್ರವಾಸೋದ್ಯಮ ಚಟುವಟಿಕೆ ನಡೆಸಲು 2018ರ ತಿದ್ದುಪಡಿ ನಿಯಮಗಳು ಅವಕಾಶ ಕೊಟ್ಟಿವೆ. ಈ ಪ್ರಕಾರ ಕಡಲಿನ ಉಬ್ಬರದ ಅಲೆಗಳ ಲೇನ್ನಿಂದ 10 ಮೀಟರ್ ಅಂತರದ ನಂತರದ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬಹುದು</p>.<p>* ಯಾವುದೇ ಶಾಶ್ವತ ನಿರ್ಮಾಣ ನಡೆಸಬಾರದು</p>.<p>* ಶೌಚಾಲಯಗಳು, ಬಟ್ಟೆ ಬದಲಿಸುವ ಘಟಕ, ಕಿರು ಹೋಟೆಲ್ಗಳ ಕಟ್ಟಡಗಳು ತಾತ್ಕಾಲಿಕ ನಿರ್ಮಾಣವಾಗಿರಬೇಕು</p>.<p><strong>ನಿಷೇಧಗಳು</strong></p>.<p>* ನೂತನ ಕೈಗಾರಿಕೆಗಳ ನಿರ್ಮಾಣ</p>.<p>* ಈಗಾಗಲೇ ಇರುವ ಕೈಗಾರಿಕೆಗಳ ವಿಸ್ತರಣೆ</p>.<p>* ತಂತ್ರಜ್ಞಾನ ಆಧರಿತ ಅತ್ಯಾಧುನಿಕ ಮೀನು ಸಂಸ್ಕರಣ ಘಟಕ</p>.<p>* ತ್ಯಾಜ್ಯ ಸಂಸ್ಕರಣ ಘಟಕ</p>.<p>* ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ</p>.<p>* ಮರಳಿನ ದಿಬ್ಬಗಳ ವಿನ್ಯಾಸ ಬದಲಿಸುವಿಕೆ</p>.<p>* ಕೊಳವೆಬಾವಿ ಕೊರೆಯುವುದು</p>.<p><strong>ಕರ್ನಾಟಕದಲ್ಲೂ ಇದೆ ಪ್ರಾಧಿಕಾರ</strong><br />ಈ ನಿಯಮಗಳ ಅನುಷ್ಠಾನದ ಉದ್ದೇಶದಿಂದ ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರ’ವನ್ನು ರಚಿಸಲಾಗಿದೆ. 2011ರ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ಕಡಲ ತೀರದಲ್ಲಿ ‘ಅಭಿವೃದ್ಧಿ ನಿಷೇಧ ವಲಯ’, ಅಲೆಗಳ ಲೇನ್ ಮತ್ತು ಕಡಲತೀರ ವರ್ಗೀಕರಣದ ವಿಸ್ತೃತ ನಕ್ಷೆಯನ್ನು ₹ 2.34 ಕೋಟಿ ವೆಚ್ಚದಲ್ಲಿ ಈ ಪ್ರಾಧಿಕಾರವು ಸಿದ್ಧಪಡಿಸಿತ್ತು. ಈ ನಕ್ಷೆಗಳು ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯವಿವೆ. ಆದರೆ 2018ರಲ್ಲಿ ನೂತನ ನಿಯಮಗಳು ಜಾರಿಗೆ ಬಂದ ಕಾರಣ, ಹೊಸದಾಗಿ ನಕ್ಷೆಗಳನ್ನು ರೂಪಿಸಬೇಕಿದೆ.</p>.<p>2011ರ ನಿಯಮಗಳ ಪ್ರಕಾರ ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿಈ ಪ್ರಾಧಿಕಾರವು ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಆದರೆ ನಿಯಮಗಳು ಬದಲಾವಣೆ ಆದ ಕಾರಣ ಈ ಪ್ರಕರಣಗಳು ಮಾನ್ಯತೆ ಕಳೆದುಕೊಂಡಿವೆ</p>.<p>70 ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು</p>.<p>40 ದಕ್ಷಿಣ ಕನ್ನಡಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು</p>.<p>60 ಉಡುಪಿಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು</p>.<p><strong>ನೆಲಕಚ್ಚಿದ ಕಟ್ಟಡಗಳು<br />ತಿರುವನಂತಪುರ:</strong>ಕೇರಳದ ಕೊಚ್ಚಿಯಲ್ಲಿ ಕಡಲತೀರ ನಿಯಂತ್ರಣ ವಲಯ (ಸಿಆರ್ಜೆಡ್) ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದ್ದ ಮೂರು ಅಪಾರ್ಟ್ಮೆಂಟ್ ಸಮುಚ್ಚಯಗಳನ್ನು ಶನಿವಾರ ಧ್ವಂಸ ಮಾಡಲಾಗಿದೆ. ಇನ್ನೂ ಎರಡು ಕಟ್ಟಡಗಳು ಭಾನುವಾರ ಧ್ವಂಸಗೊಳ್ಳಲಿವೆ.</p>.<p>ಕೊಚ್ಚಿ ನಗರದಿಂದ ಐದು ಕಿ.ಮೀ. ದೂರದ ಮರಡು ಪ್ರದೇಶದಲ್ಲಿ ಸಿಆರ್ಜೆಡ್ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದ್ದ ಐದು ಬಹುಮಹಡಿ ಕಟ್ಟಡಗಳನ್ನು ಉರುಳಿಸುವಂತೆ ಸುಪ್ರೀಂ ಕೋರ್ಟ್ 2019ರ ಮೇ ತಿಂಗಳಲ್ಲಿ ಆದೇಶಿಸಿತ್ತು.</p>.<p>ಈ ಸಮುಚ್ಚಯವನ್ನು ಕಡಲತೀರದ ಅಭಿವೃದ್ಧಿ ನಿಷೇಧ ವಲಯದಲ್ಲಿ ನಿರ್ಮಿಸಲಾಗಿತ್ತು. ಈ ಕಟ್ಟಡಗಳಲ್ಲಿ ವಾಸವಿದ್ದ 240 ಕುಟುಂಬಗಳನ್ನು ತಿಂಗಳ ಹಿಂದೆಯೇ ತೆರವು ಮಾಡಲಾಗಿತ್ತು. ಆ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಡಲಾಗಿದೆ. ಪ್ರತಿ ಕುಟುಂಬಕ್ಕೂ ₹ 25 ಲಕ್ಷ ಪರಿಹಾರ ನೀಡಲಾಗಿದೆ.</p>.<p><strong>ಕರ್ನಾಟಕದಲ್ಲೂ ಪ್ರಾಧಿಕಾರ</strong><br />ಈ ನಿಯಮಗಳ ಅನುಷ್ಠಾನದ ಉದ್ದೇಶದಿಂದ ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ’ವನ್ನು ರಚಿಸಲಾಗಿದೆ. 2011ರ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ಕಡಲ ತೀರದಲ್ಲಿ ‘ಅಭಿವೃದ್ಧಿ ನಿಷೇಧ ವಲಯ’, ಅಲೆಗಳ ಲೇನ್ ಮತ್ತು ಕಡಲತೀರ ವರ್ಗೀಕರಣದ ವಿಸ್ತೃತ ನಕ್ಷೆಯನ್ನು ₹ 2.34 ಕೋಟಿ ವೆಚ್ಚದಲ್ಲಿ ಈ ಪ್ರಾಧಿಕಾರವು ಸಿದ್ಧಪಡಿಸಿತ್ತು. ಈ ನಕ್ಷೆಗಳು ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯವಿವೆ. ಆದರೆ 2018ರಲ್ಲಿ ನೂತನ ನಿಯಮಗಳು ಜಾರಿಗೆ ಬಂದ ಕಾರಣ, ಹೊಸದಾಗಿ ನಕ್ಷೆಗಳನ್ನು ರೂಪಿಸಬೇಕಿದೆ.</p>.<p>2011ರ ನಿಯಮಗಳ ಪ್ರಕಾರ ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿಈ ಪ್ರಾಧಿಕಾರವು ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಆದರೆ ನಿಯಮಗಳು ಬದಲಾವಣೆ ಆದ ಕಾರಣ ಈ ಪ್ರಕರಣಗಳು ಮಾನ್ಯತೆ ಕಳೆದುಕೊಂಡಿವೆ</p>.<p><strong>ಆಧಾರ: ಕೇಂದ್ರೀಯ ಕಡಲತೀರ ನಿಯಂತ್ರಣ ವಲಯ ನಿಯಮಗಳು, ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p>ದೇಶದ ಕಡಲತೀರಗಳಲ್ಲಿನ ಜೀವವೈವಿಧ್ಯವನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 1991ರಲ್ಲಿ ಕಡಲತೀರ ನಿಯಂತ್ರಣ ವಲಯ (ಸಿಆರ್ಝಡ್) ನಿಯಮಗಳನ್ನು ರೂಪಿಸಿತ್ತು. ಆದರೆ, ಈ ನಿಯಮಗಳು ಅತ್ಯಂತ ಕಠಿಣವಾಗಿದ್ದ ಕಾರಣ ರಾಜ್ಯಗಳು ಇವನ್ನು ಜಾರಿಗೆ ತರಲು ನಿರಾಕರಿಸಿದ್ದವು. ಹೀಗಾಗಿ 2011ರಲ್ಲಿ ಮತ್ತು 2018ರಲ್ಲಿ ಈ ನಿಯಮಗಳಿಗೆ ತಿದ್ದುಪಡಿ ತರಲಾಯಿತು.</p>.<p>ಈ ನಿಯಮಗಳ ಪ್ರಕಾರ ಕಡಲತೀರದಿಂದ ನಿಗದಿತ ಅಂತರದಲ್ಲಿ (ಅಭಿವೃದ್ಧಿ ನಿಷೇಧ ವಲಯ) ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸಬಾರದು. ಈ ನಿಯಮಗಳನ್ನು ಅನುಷ್ಠಾನಕ್ಕೆ ತರುವುದು, ಆಯಾ ರಾಜ್ಯಗಳ ಕಡಲತೀರ ನಿರ್ವಹಣಾ ಪ್ರಾಧಿಕಾರಗಳ ಹೊಣೆ. ಈ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಚಟುವಟಿಕೆಗಳನ್ನು ತಡೆಯುವ ಮತ್ತು ತೆರವು ಮಾಡುವ ಅಧಿಕಾರ ಈ ಪ್ರಾಧಿಕಾರಕ್ಕೆ ಇದೆ</p>.<p class="Briefhead"><strong>ಕಡಲತೀರ ವರ್ಗೀಕರಣ ಮತ್ತು ನಿಯಮಗಳು</strong></p>.<p class="Subhead"><strong>ಸಿಆರ್ಜೆಡ್–1: ಪರಿಸರ ಸೂಕ್ಷ್ಮ ವಲಯ</strong></p>.<p>ಕಡಲತೀರ, ರಾಷ್ಟ್ರೀಯ ಉದ್ಯಾನ, ಅರಣ್ಯ ಪ್ರದೇಶ, ಅಳಿವೆ ಪ್ರದೇಶ, ಮ್ಯಾಂಗ್ರೋವ್ ಅರಣ್ಯ ಪ್ರದೇಶ, ಅಭಯಾರಣ್ಯ ಹಾಗೂ ಕಡಲಜೀವಿಗಳ ಸಂತಾನೋತ್ಪತಿ ಪ್ರದೇಶಗಳು ಈ ವಲಯದಲ್ಲಿ ಬರುತ್ತವೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿ, ಚಟುವಟಿಕೆ ನಡೆಸುವಂತಿಲ್ಲ</p>.<p>* ಈ ಪ್ರದೇಶಕ್ಕೂ ಈ ನಿಯಮ ಅನ್ವಯವಾಗುತ್ತದೆ</p>.<p class="Subhead"><strong>ಸಿಆರ್ಜೆಡ್–2: ಕಡಲತೀರದ ನಗರ ಪ್ರದೇಶ</strong></p>.<p>ಕಡಲತೀರದವರೆಗೂ ಅಭಿವೃದ್ಧಿಯಾಗಿರುವ ನಗರ ಪ್ರದೇಶಗಳು ಈ ವರ್ಗದಲ್ಲಿ ಬರುತ್ತವೆ. ಈ ನಗರಗಳಲ್ಲಿಈಗಾಗಲೇ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಯಾಗಿರಬೇಕು ಮತ್ತು ಮೂಲಸೌಕರ್ಯಗಳು ಲಭ್ಯವಿರಬೇಕು</p>.<p>* ಕಡಲತೀರ ನಿರ್ವಹಣಾ ಪ್ರಾಧಿಕಾರವು ರೂಪಿಸುವ ನಿಯಮಗಳ ಅನುಸಾರ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬಹುದು</p>.<p>* ಹೊಸದಾಗಿ ನಿರ್ಮಿಸುವ ಕಟ್ಟಡಗಳು, ಸ್ಥಳೀಯ ವಿನ್ಯಾಸಕ್ಕೆ ಅನುಗುಣವಾಗಿ ಇರಬೇಕು</p>.<p class="Subhead">ಸಿಆರ್ಜೆಡ್–3: ಗ್ರಾಮೀಣ ಮತ್ತು ಪಟ್ಟಣ ಪ್ರದೇಶ</p>.<p>ಹೆಚ್ಚು ಅಭಿವೃದ್ಧಿ ಚಟುವಟಿಕೆಗಳು ನಡೆಯದ ಪಟ್ಟಣ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳು ಈ ವರ್ಗದಲ್ಲಿ ಬರುತ್ತವೆ. ಜನಸಾಂದ್ರತೆಯ ಆಧಾರದಲ್ಲಿ ಇದನ್ನು ಮತ್ತೆ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ</p>.<p class="Subhead"><strong>ಸಿಆರ್ಜೆಡ್–3ಎ</strong></p>.<p>ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ 2,161ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶ.ಉಬ್ಬರದ ಅಲೆಗಳ ಲೇನ್ನಿಂದ 50 ಮೀಟರ್ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ</p>.<p class="Subhead"><strong>ಸಿಆರ್ಜೆಡ್–3ಬಿ</strong></p>.<p>ಪ್ರತಿ ಚದರ ಕಿ.ಮೀ. ಪ್ರದೇಶದಲ್ಲಿ 2,161ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶ. ಉಬ್ಬರದ ಅಲೆಗಳ ಲೇನ್ನಿಂದ 200 ಮೀಟರ್ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ</p>.<p class="Subhead"><strong>ಸಿಆರ್ಜೆಡ್–4: ದ್ವೀಪ ಪ್ರದೇಶಗಳು</strong></p>.<p>ದ್ವೀಪಗಳು ಮತ್ತು ಒಳನಾಡು ದ್ವೀಪ ಪ್ರದೇಶಗಳಿಗೆ ಇದು ಅನ್ವಯವಾಗುತ್ತದೆ.ಉಬ್ಬರದ ಅಲೆಗಳ ಲೇನ್ನಿಂದ 20 ಮೀಟರ್ ಅಂತರದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ</p>.<p><strong>ಪ್ರವಾಸೋದ್ಯಮ</strong></p>.<p>ಕಡಲತೀರದಅಭಿವೃದ್ಧಿ ನಿಷೇಧ ವಲಯದಲ್ಲೂ ಪ್ರವಾಸೋದ್ಯಮ ಚಟುವಟಿಕೆ ನಡೆಸಲು 2018ರ ತಿದ್ದುಪಡಿ ನಿಯಮಗಳು ಅವಕಾಶ ಕೊಟ್ಟಿವೆ. ಈ ಪ್ರಕಾರ ಕಡಲಿನ ಉಬ್ಬರದ ಅಲೆಗಳ ಲೇನ್ನಿಂದ 10 ಮೀಟರ್ ಅಂತರದ ನಂತರದ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬಹುದು</p>.<p>* ಯಾವುದೇ ಶಾಶ್ವತ ನಿರ್ಮಾಣ ನಡೆಸಬಾರದು</p>.<p>* ಶೌಚಾಲಯಗಳು, ಬಟ್ಟೆ ಬದಲಿಸುವ ಘಟಕ, ಕಿರು ಹೋಟೆಲ್ಗಳ ಕಟ್ಟಡಗಳು ತಾತ್ಕಾಲಿಕ ನಿರ್ಮಾಣವಾಗಿರಬೇಕು</p>.<p><strong>ನಿಷೇಧಗಳು</strong></p>.<p>* ನೂತನ ಕೈಗಾರಿಕೆಗಳ ನಿರ್ಮಾಣ</p>.<p>* ಈಗಾಗಲೇ ಇರುವ ಕೈಗಾರಿಕೆಗಳ ವಿಸ್ತರಣೆ</p>.<p>* ತಂತ್ರಜ್ಞಾನ ಆಧರಿತ ಅತ್ಯಾಧುನಿಕ ಮೀನು ಸಂಸ್ಕರಣ ಘಟಕ</p>.<p>* ತ್ಯಾಜ್ಯ ಸಂಸ್ಕರಣ ಘಟಕ</p>.<p>* ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ</p>.<p>* ಮರಳಿನ ದಿಬ್ಬಗಳ ವಿನ್ಯಾಸ ಬದಲಿಸುವಿಕೆ</p>.<p>* ಕೊಳವೆಬಾವಿ ಕೊರೆಯುವುದು</p>.<p><strong>ಕರ್ನಾಟಕದಲ್ಲೂ ಇದೆ ಪ್ರಾಧಿಕಾರ</strong><br />ಈ ನಿಯಮಗಳ ಅನುಷ್ಠಾನದ ಉದ್ದೇಶದಿಂದ ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರ’ವನ್ನು ರಚಿಸಲಾಗಿದೆ. 2011ರ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ಕಡಲ ತೀರದಲ್ಲಿ ‘ಅಭಿವೃದ್ಧಿ ನಿಷೇಧ ವಲಯ’, ಅಲೆಗಳ ಲೇನ್ ಮತ್ತು ಕಡಲತೀರ ವರ್ಗೀಕರಣದ ವಿಸ್ತೃತ ನಕ್ಷೆಯನ್ನು ₹ 2.34 ಕೋಟಿ ವೆಚ್ಚದಲ್ಲಿ ಈ ಪ್ರಾಧಿಕಾರವು ಸಿದ್ಧಪಡಿಸಿತ್ತು. ಈ ನಕ್ಷೆಗಳು ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯವಿವೆ. ಆದರೆ 2018ರಲ್ಲಿ ನೂತನ ನಿಯಮಗಳು ಜಾರಿಗೆ ಬಂದ ಕಾರಣ, ಹೊಸದಾಗಿ ನಕ್ಷೆಗಳನ್ನು ರೂಪಿಸಬೇಕಿದೆ.</p>.<p>2011ರ ನಿಯಮಗಳ ಪ್ರಕಾರ ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿಈ ಪ್ರಾಧಿಕಾರವು ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಆದರೆ ನಿಯಮಗಳು ಬದಲಾವಣೆ ಆದ ಕಾರಣ ಈ ಪ್ರಕರಣಗಳು ಮಾನ್ಯತೆ ಕಳೆದುಕೊಂಡಿವೆ</p>.<p>70 ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು</p>.<p>40 ದಕ್ಷಿಣ ಕನ್ನಡಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು</p>.<p>60 ಉಡುಪಿಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳು</p>.<p><strong>ನೆಲಕಚ್ಚಿದ ಕಟ್ಟಡಗಳು<br />ತಿರುವನಂತಪುರ:</strong>ಕೇರಳದ ಕೊಚ್ಚಿಯಲ್ಲಿ ಕಡಲತೀರ ನಿಯಂತ್ರಣ ವಲಯ (ಸಿಆರ್ಜೆಡ್) ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದ್ದ ಮೂರು ಅಪಾರ್ಟ್ಮೆಂಟ್ ಸಮುಚ್ಚಯಗಳನ್ನು ಶನಿವಾರ ಧ್ವಂಸ ಮಾಡಲಾಗಿದೆ. ಇನ್ನೂ ಎರಡು ಕಟ್ಟಡಗಳು ಭಾನುವಾರ ಧ್ವಂಸಗೊಳ್ಳಲಿವೆ.</p>.<p>ಕೊಚ್ಚಿ ನಗರದಿಂದ ಐದು ಕಿ.ಮೀ. ದೂರದ ಮರಡು ಪ್ರದೇಶದಲ್ಲಿ ಸಿಆರ್ಜೆಡ್ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದ್ದ ಐದು ಬಹುಮಹಡಿ ಕಟ್ಟಡಗಳನ್ನು ಉರುಳಿಸುವಂತೆ ಸುಪ್ರೀಂ ಕೋರ್ಟ್ 2019ರ ಮೇ ತಿಂಗಳಲ್ಲಿ ಆದೇಶಿಸಿತ್ತು.</p>.<p>ಈ ಸಮುಚ್ಚಯವನ್ನು ಕಡಲತೀರದ ಅಭಿವೃದ್ಧಿ ನಿಷೇಧ ವಲಯದಲ್ಲಿ ನಿರ್ಮಿಸಲಾಗಿತ್ತು. ಈ ಕಟ್ಟಡಗಳಲ್ಲಿ ವಾಸವಿದ್ದ 240 ಕುಟುಂಬಗಳನ್ನು ತಿಂಗಳ ಹಿಂದೆಯೇ ತೆರವು ಮಾಡಲಾಗಿತ್ತು. ಆ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಡಲಾಗಿದೆ. ಪ್ರತಿ ಕುಟುಂಬಕ್ಕೂ ₹ 25 ಲಕ್ಷ ಪರಿಹಾರ ನೀಡಲಾಗಿದೆ.</p>.<p><strong>ಕರ್ನಾಟಕದಲ್ಲೂ ಪ್ರಾಧಿಕಾರ</strong><br />ಈ ನಿಯಮಗಳ ಅನುಷ್ಠಾನದ ಉದ್ದೇಶದಿಂದ ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ’ವನ್ನು ರಚಿಸಲಾಗಿದೆ. 2011ರ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ಕಡಲ ತೀರದಲ್ಲಿ ‘ಅಭಿವೃದ್ಧಿ ನಿಷೇಧ ವಲಯ’, ಅಲೆಗಳ ಲೇನ್ ಮತ್ತು ಕಡಲತೀರ ವರ್ಗೀಕರಣದ ವಿಸ್ತೃತ ನಕ್ಷೆಯನ್ನು ₹ 2.34 ಕೋಟಿ ವೆಚ್ಚದಲ್ಲಿ ಈ ಪ್ರಾಧಿಕಾರವು ಸಿದ್ಧಪಡಿಸಿತ್ತು. ಈ ನಕ್ಷೆಗಳು ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯವಿವೆ. ಆದರೆ 2018ರಲ್ಲಿ ನೂತನ ನಿಯಮಗಳು ಜಾರಿಗೆ ಬಂದ ಕಾರಣ, ಹೊಸದಾಗಿ ನಕ್ಷೆಗಳನ್ನು ರೂಪಿಸಬೇಕಿದೆ.</p>.<p>2011ರ ನಿಯಮಗಳ ಪ್ರಕಾರ ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿಈ ಪ್ರಾಧಿಕಾರವು ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಆದರೆ ನಿಯಮಗಳು ಬದಲಾವಣೆ ಆದ ಕಾರಣ ಈ ಪ್ರಕರಣಗಳು ಮಾನ್ಯತೆ ಕಳೆದುಕೊಂಡಿವೆ</p>.<p><strong>ಆಧಾರ: ಕೇಂದ್ರೀಯ ಕಡಲತೀರ ನಿಯಂತ್ರಣ ವಲಯ ನಿಯಮಗಳು, ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>