<p><strong>ಬೆಳಗಾವಿ:</strong> ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ದೇಹಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪರಿಸುವ ಪ್ಲಾಸ್ಟಿಕ್ ಚೇಂಬರ್ವೊಂದನ್ನು ತಯಾರಿಸುವ ಮೂಲಕ ಬೆಳಗಾವಿಯ ಯಶವಂತ ಕಾಸ್ಟಿಂಗ್ಸ್ ಕಂಪನಿಯು ಗಮನ ಸೆಳೆದಿದೆ.</p>.<p>ಸ್ಯಾನಿಟೈಸರ್ ಬಳಸಿದರೆ ಕೇವಲ ಕೈ ಸ್ವಚ್ಛಗೊಳಿಸಬಹುದು. ಆದರೆ, ವೈರಾಣು ಬಟ್ಟೆ, ತಲೆಗೂದಲು ಅಥವಾ ಪಾದರಕ್ಷೆಗಳಿಗೆ ಅಂಟಿಕೊಂಡಿದ್ದರೆ ಅವುಗಳಿಂದ ರಕ್ಷಣೆ ಪಡೆಯಲು ಇಡೀ ದೇಹಕ್ಕೆ ಆಗಾಗ ಸೋಂಕು ನಿವಾರಕ ಸಿಂಪರಿಸುತ್ತಿರಬೇಕು. ಈ ಪರಿಕಲ್ಪನೆ ಆಧಾರದ ಮೇಲೆ ಕಂಪನಿಯ ಮಾಲೀಕ ವೀರ ಧವಲ್ ಚೇಂಬರ್ ನಿರ್ಮಿಸಿದ್ದಾರೆ.</p>.<p>ಮೂಲತಃ ಇವರೊಬ್ಬ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಬೆಳಗಾವಿಯ ಉದ್ಯಮಬಾಗ್ದಲ್ಲಿ ಕಾಸ್ಟಿಂಗ್ ತಯಾರಿಕಾ ಘಟಕ ಹೊಂದಿದ್ದಾರೆ. ವಿದೇಶಿ ಕಂಪನಿಗಳ ಜೊತೆ ಸಹಭಾಗಿತ್ವದಲ್ಲಿ ಗ್ರೀನ್ ಹೌಸ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರು ಮಾಡುತ್ತಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಚೇಂಬರ್ ತಯಾರಿಸಿದ್ದಾರೆ.</p>.<p>ಹೇಗೆ ಕಾರ್ಯನಿರ್ವಹಿಸುತ್ತದೆ?:</p>.<p>ಚಿಕ್ಕ ಕುಟೀರ ಮಾದರಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ನು ತಯಾರಿಸಿದ್ದಾರೆ. ಪಕ್ಕದಲ್ಲಿ ಸೋಂಕು ನಿವಾರಕ ದ್ರಾವಣ ಇರುವ ಟ್ಯಾಂಕ್ ನಿರ್ಮಿಸಿದ್ದಾರೆ. ಈ ಟ್ಯಾಂಕ್ನಿಂದ ಪೈಪ್ ಮೂಲಕ ಹೊದಿಕೆಯ ಮೇಲೆ ಸಿಂಪರಿಸಲಾಗುತ್ತದೆ. ಚೇಂಬರ್ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಡಲಾಗಿದ್ದು, ಒಳಪ್ರವೇಶಿಸುವ ವ್ಯಕ್ತಿ ಇದನ್ನು ಹಚ್ಚಿಕೊಂಡು ಒಳಹೋಗಬೇಕು.</p>.<p>ಒಳಗೆ ಸೆನ್ಸರ್ ಅಳವಡಿಸಲಾಗಿದ್ದು, ವ್ಯಕ್ತಿಯು ಪ್ರವೇಶಿಸುತ್ತಿದ್ದಂತೆ ಸ್ವಯಂಚಾಲಿತವಾಗಿ ಮೇಲಿನಿಂದ ಸ್ಪ್ರೇ ಮಾದರಿಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪರಣೆಯಾಗುತ್ತದೆ. ವ್ಯಕ್ತಿ ಚೇಂಬರ್ ದಾಟಿ ಹೋಗುತ್ತಿದ್ದಂತೆ ಸ್ಪ್ರೇ ಸ್ವಯಂ ಚಾಲಿತವಾಗಿ ಸ್ಥಗಿತಗೊಳ್ಳುತ್ತದೆ.</p>.<p>ಜಿಲ್ಲಾಸ್ಪತ್ರೆಯಲ್ಲಿ ಅಳವಡಿಕೆ:</p>.<p>‘ಇದೇ ಮೊದಲ ಬಾರಿಗೆ ಇಂತಹದೊಂದು ಚೇಂಬರ್ ತಯಾರಿಸಿದ್ದೇನೆ. ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಜೇಂದ್ರ ಕೆ.ವಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಮಾದರಿಯನ್ನು ವೀಕ್ಷಿಸಿದರು. ಜಿಲ್ಲಾಸ್ಪತ್ರೆಯಲ್ಲಿ 2 ಹಾಗೂ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಒಂದು ಅಳವಡಿಸಲು ಸೂಚಿಸಿದ್ದಾರೆ. 2–3 ದಿನಗಳಲ್ಲಿ ಅಳವಡಿಸಲಾಗುವುದು’ ಎಂದು ಕಂಪನಿಯ ಮಾಲೀಕ ವೀರ ಧವಲ್ ‘ಪ್ರಜಾವಾಣಿ’ಗೆ ಹೇಳಿದರು.</p>.<p>‘ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಂದ ಅಥವಾ ದೊಡ್ಡ ದೊಡ್ಡ ಕಂಪನಿಗಳಿಂದ ಬೇಡಿಕೆ ಬಂದರೆ, ತಯಾರಿಸಿ ಮಾರಾಟ ಮಾಡಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ದೇಹಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪರಿಸುವ ಪ್ಲಾಸ್ಟಿಕ್ ಚೇಂಬರ್ವೊಂದನ್ನು ತಯಾರಿಸುವ ಮೂಲಕ ಬೆಳಗಾವಿಯ ಯಶವಂತ ಕಾಸ್ಟಿಂಗ್ಸ್ ಕಂಪನಿಯು ಗಮನ ಸೆಳೆದಿದೆ.</p>.<p>ಸ್ಯಾನಿಟೈಸರ್ ಬಳಸಿದರೆ ಕೇವಲ ಕೈ ಸ್ವಚ್ಛಗೊಳಿಸಬಹುದು. ಆದರೆ, ವೈರಾಣು ಬಟ್ಟೆ, ತಲೆಗೂದಲು ಅಥವಾ ಪಾದರಕ್ಷೆಗಳಿಗೆ ಅಂಟಿಕೊಂಡಿದ್ದರೆ ಅವುಗಳಿಂದ ರಕ್ಷಣೆ ಪಡೆಯಲು ಇಡೀ ದೇಹಕ್ಕೆ ಆಗಾಗ ಸೋಂಕು ನಿವಾರಕ ಸಿಂಪರಿಸುತ್ತಿರಬೇಕು. ಈ ಪರಿಕಲ್ಪನೆ ಆಧಾರದ ಮೇಲೆ ಕಂಪನಿಯ ಮಾಲೀಕ ವೀರ ಧವಲ್ ಚೇಂಬರ್ ನಿರ್ಮಿಸಿದ್ದಾರೆ.</p>.<p>ಮೂಲತಃ ಇವರೊಬ್ಬ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಬೆಳಗಾವಿಯ ಉದ್ಯಮಬಾಗ್ದಲ್ಲಿ ಕಾಸ್ಟಿಂಗ್ ತಯಾರಿಕಾ ಘಟಕ ಹೊಂದಿದ್ದಾರೆ. ವಿದೇಶಿ ಕಂಪನಿಗಳ ಜೊತೆ ಸಹಭಾಗಿತ್ವದಲ್ಲಿ ಗ್ರೀನ್ ಹೌಸ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರು ಮಾಡುತ್ತಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಚೇಂಬರ್ ತಯಾರಿಸಿದ್ದಾರೆ.</p>.<p>ಹೇಗೆ ಕಾರ್ಯನಿರ್ವಹಿಸುತ್ತದೆ?:</p>.<p>ಚಿಕ್ಕ ಕುಟೀರ ಮಾದರಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ನು ತಯಾರಿಸಿದ್ದಾರೆ. ಪಕ್ಕದಲ್ಲಿ ಸೋಂಕು ನಿವಾರಕ ದ್ರಾವಣ ಇರುವ ಟ್ಯಾಂಕ್ ನಿರ್ಮಿಸಿದ್ದಾರೆ. ಈ ಟ್ಯಾಂಕ್ನಿಂದ ಪೈಪ್ ಮೂಲಕ ಹೊದಿಕೆಯ ಮೇಲೆ ಸಿಂಪರಿಸಲಾಗುತ್ತದೆ. ಚೇಂಬರ್ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಡಲಾಗಿದ್ದು, ಒಳಪ್ರವೇಶಿಸುವ ವ್ಯಕ್ತಿ ಇದನ್ನು ಹಚ್ಚಿಕೊಂಡು ಒಳಹೋಗಬೇಕು.</p>.<p>ಒಳಗೆ ಸೆನ್ಸರ್ ಅಳವಡಿಸಲಾಗಿದ್ದು, ವ್ಯಕ್ತಿಯು ಪ್ರವೇಶಿಸುತ್ತಿದ್ದಂತೆ ಸ್ವಯಂಚಾಲಿತವಾಗಿ ಮೇಲಿನಿಂದ ಸ್ಪ್ರೇ ಮಾದರಿಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪರಣೆಯಾಗುತ್ತದೆ. ವ್ಯಕ್ತಿ ಚೇಂಬರ್ ದಾಟಿ ಹೋಗುತ್ತಿದ್ದಂತೆ ಸ್ಪ್ರೇ ಸ್ವಯಂ ಚಾಲಿತವಾಗಿ ಸ್ಥಗಿತಗೊಳ್ಳುತ್ತದೆ.</p>.<p>ಜಿಲ್ಲಾಸ್ಪತ್ರೆಯಲ್ಲಿ ಅಳವಡಿಕೆ:</p>.<p>‘ಇದೇ ಮೊದಲ ಬಾರಿಗೆ ಇಂತಹದೊಂದು ಚೇಂಬರ್ ತಯಾರಿಸಿದ್ದೇನೆ. ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಜೇಂದ್ರ ಕೆ.ವಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಮಾದರಿಯನ್ನು ವೀಕ್ಷಿಸಿದರು. ಜಿಲ್ಲಾಸ್ಪತ್ರೆಯಲ್ಲಿ 2 ಹಾಗೂ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಒಂದು ಅಳವಡಿಸಲು ಸೂಚಿಸಿದ್ದಾರೆ. 2–3 ದಿನಗಳಲ್ಲಿ ಅಳವಡಿಸಲಾಗುವುದು’ ಎಂದು ಕಂಪನಿಯ ಮಾಲೀಕ ವೀರ ಧವಲ್ ‘ಪ್ರಜಾವಾಣಿ’ಗೆ ಹೇಳಿದರು.</p>.<p>‘ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಂದ ಅಥವಾ ದೊಡ್ಡ ದೊಡ್ಡ ಕಂಪನಿಗಳಿಂದ ಬೇಡಿಕೆ ಬಂದರೆ, ತಯಾರಿಸಿ ಮಾರಾಟ ಮಾಡಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>