‘ಉಡಾನ್’ ಯೋಜನೆಯಡಿ ಹುಬ್ಬಳ್ಳಿಗೆ ಆಯ್ಕೆಯಾದಾಗ, ಸ್ಪೈಸ್ ಜೆಟ್ ಕಂಪನಿಯು ಇಲ್ಲಿಂದ ಹಾರಾಟ ನಿಲ್ಲಿಸಿ ಹುಬ್ಬಳ್ಳಿಯಿಂದ ಕಾರ್ಯಾರಂಭಿಸಿತ್ತು. ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈಗೆ ಇಲ್ಲಿನ ವಿಮಾನಗಳು ಇರಲಿಲ್ಲ. ಇದರ ವಿರುದ್ಧ ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಬೆಳಗಾವಿಯಿಂದ ವಿಮಾನಗಳನ್ನು ಹಾರಾಡಿಸಬೇಕು ಎಂದು ಒತ್ತಾಯಿಸಿದ್ದರು. ನಂತರ ಏರ್ಇಂಡಿಯಾ ಕಂಪನಿಯು ಬೆಳಗಾವಿಯಿಂದ ಬೆಂಗಳೂರುಗೆ ವಿಮಾನ ಕಾರ್ಯಾಚರಣೆ ಆರಂಭಿಸಿತು. ಈಗ, ಸ್ಪೈಸ್ಜೆಟ್ ಕಂಪನಿಯು ಬೆಳಗಾವಿ–ಹೈದರಾಬಾದ್ ನಡುವೆ ವಿಮಾನ ಕಾರ್ಯಾಚರಣೆ ಆರಂಭಿಸಿದೆ.