<p><strong>ಬೆಂಗಳೂರು:</strong> ಇನ್ನು ಮುಂದೆ 100 ಡಿಗ್ರಿ ಜ್ವರ ಇದ್ದವರನ್ನು ಕ್ವಾರಂಟೈನ್ ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿದೆ ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.</p>.<p>ಹಲವರು ಈ ಸುದ್ದಿಯ ಲಿಂಕ್ ಮತ್ತು ಸ್ಕ್ರೀನ್ ಶಾಟ್ಗಳನ್ನು ಸಾಮಾಜಿಕ ತಾಣದ ಎಲ್ಲ ಪ್ರಕಾರಗಳಲ್ಲಿ ಹಂಚಿಕೊಂಡಿದ್ದಾರೆ. </p>.<p><strong>ವೈರಲ್ ಆಗಿರುವ ಸುದ್ದಿಯಲ್ಲಿ ಏನಿದೆ?</strong></p>.<p>‘ಇನ್ನು ಮುಂದೆ 100 ಡಿಗ್ರಿ ಜ್ವರ ಇದ್ದವರಿಗೂ ಕ್ವಾರಂಟೈನ್ ಮಾಡುವ ಹಾಗೂ ಅವರ ಗಂಟಲು ದ್ರವವನ್ನು ಪರಿಶೀಲನೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಿ.16ರಂದು ವೆಬ್ಸೈಟ್ವೊಂದರಲ್ಲಿ ಈ ವರದಿ ಪ್ರಕಟವಾಗಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.</p>.<p><strong>ಸರ್ಕಾರದಿಂದ ಸ್ಪಷ್ಟನೆ</strong></p>.<p>ಆದರೆ, ಈ ವರದಿಗೆ ಸಂಬಂಧಿಸಿದಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದೆ. ‘ಇಂಥ ಯಾವುದೇ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ. ಇದು ಸುಳ್ಳು ಸುದ್ದಿ,’ ಎಂದು ಸರ್ಕಾರ ತಿಳಿಸಿದೆ. </p>.<p><strong>ಈ ಬಗ್ಗೆ ಸರ್ಕಾರ ಟ್ವೀಟ್ ಮಾಡಿದೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇನ್ನು ಮುಂದೆ 100 ಡಿಗ್ರಿ ಜ್ವರ ಇದ್ದವರನ್ನು ಕ್ವಾರಂಟೈನ್ ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿದೆ ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.</p>.<p>ಹಲವರು ಈ ಸುದ್ದಿಯ ಲಿಂಕ್ ಮತ್ತು ಸ್ಕ್ರೀನ್ ಶಾಟ್ಗಳನ್ನು ಸಾಮಾಜಿಕ ತಾಣದ ಎಲ್ಲ ಪ್ರಕಾರಗಳಲ್ಲಿ ಹಂಚಿಕೊಂಡಿದ್ದಾರೆ. </p>.<p><strong>ವೈರಲ್ ಆಗಿರುವ ಸುದ್ದಿಯಲ್ಲಿ ಏನಿದೆ?</strong></p>.<p>‘ಇನ್ನು ಮುಂದೆ 100 ಡಿಗ್ರಿ ಜ್ವರ ಇದ್ದವರಿಗೂ ಕ್ವಾರಂಟೈನ್ ಮಾಡುವ ಹಾಗೂ ಅವರ ಗಂಟಲು ದ್ರವವನ್ನು ಪರಿಶೀಲನೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಿ.16ರಂದು ವೆಬ್ಸೈಟ್ವೊಂದರಲ್ಲಿ ಈ ವರದಿ ಪ್ರಕಟವಾಗಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.</p>.<p><strong>ಸರ್ಕಾರದಿಂದ ಸ್ಪಷ್ಟನೆ</strong></p>.<p>ಆದರೆ, ಈ ವರದಿಗೆ ಸಂಬಂಧಿಸಿದಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದೆ. ‘ಇಂಥ ಯಾವುದೇ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ. ಇದು ಸುಳ್ಳು ಸುದ್ದಿ,’ ಎಂದು ಸರ್ಕಾರ ತಿಳಿಸಿದೆ. </p>.<p><strong>ಈ ಬಗ್ಗೆ ಸರ್ಕಾರ ಟ್ವೀಟ್ ಮಾಡಿದೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>