<p><strong>ಕಲಬುರ್ಗಿ</strong>: ಕೂಲಿ ಅರಸಿ ಹೊರ ರಾಜ್ಯಗಳಿಗೆ ಗುಳೇ ಹೋಗಿದ್ದ ಈ ಭಾಗದ ಸಾವಿರಾರು ಜನ ಈಗ ಗಡಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಅಂತರರಾಜ್ಯ ಜನ ಸಂಚಾರ ನಿರ್ಬಂಧಿಸಿದ ಕಾರಣ ಈ ಜನರೀಗ ಜಿಲ್ಲೆಯ ಗಡಿ ಭಾಗದಲ್ಲಿ ನಿರಾಶ್ರಿತರಾಗಿ ಕಾಲ ಕಳೆಯಬೇಕಾಗಿದೆ.</p>.<p>ಈ ಬಗ್ಗೆ ಸ್ವತಃ ಗುಳೇ ಹೋಗಿದ್ದ ನೂರಾರು ಜನ, ಸಂಸದ ಡಾ.ಉಮೇಶ ಜಾಧವ ಅವರಿಗೆ ಫೋನ್ ಕರೆಯ ಮೂಲಕ ಅಳಲು ತೋಡಿಕೊಂಡಿದ್ದಾರೆ. ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.</p>.<p>ಅತ್ತ ವಲಸೆ ಜಾಗದಲ್ಲಿ ಉದ್ಯೋಗವೂ ಇಲ್ಲ, ಇತ್ತ ತಮ್ಮ ಸ್ವಂತ ಊರಿಗೂ ಹೋಗಲು ಬಿಡಿತ್ತಿಲ್ಲ. ಮಕ್ಕಳು, ಮಹಿಳೆಯರು, ವಯಸ್ಸಾದವರನ್ನು ಕಟ್ಟಿಕೊಂಡು ಈ ಕುಟುಂಬಗಳು ದಯನೀಯ ಸ್ಥಿತಿ ತಲುಪಿವೆ.</p>.<p>ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಬಡವರು ಉದ್ಯೋಗ ಅರಸಿ ಆರು ತಿಂಗಳ ಹಿಂದೆಯೇ ವಲಸೆ ಹೋಗಿದ್ದಾರೆ. ಮಹಾರಾಷ್ಟ್ರದ ಪುಣೆ, ಮುಂಬೈ, ಸೊಲ್ಲಾಪುರ, ಕೊಲ್ಲಾಪುರ, ತಾಂಡೂರು ಹಾಗೂ ಹೈದರಾಬಾದ್, ಗೋವಾ ರಾಜ್ಯದ ವಿವಿಧ ನಗರಗಳಿಗೆ ಹೋಗಿದ್ದರು. ಅವರಲ್ಲೀಗ ಸುಮಾರು 70 ಸಾವಿರಕ್ಕೂ ಹೆಚ್ಚು ಜನ ತಮ್ಮ ತವರಿಗೆ ಮರಳಲು ಹವಣಿಸುತ್ತಿದ್ದಾರೆ. ಆದರೆ, ಅಂತರರಾಜ್ಯ ಜನ ಸಂಚಾರ ನಿರ್ಬಂಧದ ಹಿನ್ನೆಲೆಯಲ್ಲಿ ಎಲ್ಲರೂ ಬೇರೆಬೇರೆ ಭಾಗದ ಗಡಿಗಳಲ್ಲೇ ಸಿಲುಕಿಕೊಂಡಿದ್ದಾರೆ. ಆದರೆ, ಕೊರೊನಾ ವೈರಾಣು ಭೀತಿಯ ಹಿನ್ನೆಲೆಯಲ್ಲಿ ವಲಸಿಗರೇ ಆ ಊರುಗಳನ್ನು ತೊರೆದಿದ್ದಾರೋ ಅಥವಾ ಅಲ್ಲಿನ ಆಡಳಿತಗಳು ಹೊರ ಹಾಕಿವೆಯೋ ಇನ್ನೂ ಸ್ಪಷ್ಟವಾಗಿಲ್ಲ.</p>.<p class="Subhead"><strong>ಜಿಲ್ಲಾಧಿಕಾರಿಯೊಂದಿಗೆ ಸಂಸದ ಚರ್ಚೆ</strong></p>.<p class="Subhead">ನಿರಾಶ್ರಿತರ ಕರೆಗೆ ಸ್ಪಂದಿಸಿದ ಸಂಸದ ಡಾ.ಜಾಧವ, ಜಿಲ್ಲಾಧಿಕಾರಿ ಬಿ.ಶರತ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ತಮ್ಮ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಜನರನ್ನು ಮರಳಿ ಒಳಗೆ ಬಿಟ್ಟುಕೊಳ್ಳಲು ಕಂಡುಕೊಳ್ಳಬೇಕಾದ ಕಾರ್ಗೋಪಾಯಗಳ ಬಗ್ಗೆಯೂ ವಿವರಿಸಿದರು. ನೆರೆ ರಾಜ್ಯದ ಜಿಲ್ಲಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ದಾರಿ ಕಂಡುಕೊಳ್ಳುವಂತೆಯೂ ನಿರ್ದೇಶನ ನೀಡಿದರು.</p>.<p>‘ಗಡಿಯಲ್ಲಿ ಸಿಲುಕಿಕೊಂಡ ಜನ ಆತಂಕ ಪಡುವ ಅಗತ್ಯವಿಲ್ಲ. ಅವರ ನೆರವಿಗೆ ತಕ್ಷಣ ಧಾವಿಸುತ್ತೇನೆ. ಆದಷ್ಟು ಬೇಗ ಅವರು ತವರನ್ನು ತವರಿಗೆ ಸೇರಿಸಲು ಯತ್ನಿಸುತ್ತೇನೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ; ಅವರೀಗ ಇರುವ ಜಾಗದಲ್ಲೇ ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತೇನೆ. ಜನ ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ’ ಎಂದು ಸಂಸದರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>*</p>.<p>ಸಹಾಯಕ್ಕಾಗಿ ಸಂಪರ್ಕಿಸಿ</p>.<p>ಗಡಿಯಲ್ಲಿ ಸಿಲುಕಿಕೊಂಡ ಜನರ ಸಹಾಯ ಹಾಗೂ ರಕ್ಷಣೆಗಾಗಿ ಕಲಬುರ್ಗಿಯ ಸಂಸದ ಕಚೇರಿಯಲ್ಲಿ ಒಂದು ‘ವಾರ್ ರೂಮ್’ ತೆರೆಯಲಾಗಿದೆ. ಮಾರ್ಚ್ 28ರಿಂದಲೇ ಇದು 24X7 ಕಾರ್ಯನಿರ್ವಹಿಸಲಿದೆ. ನಾಲ್ವರು ಸಿಬ್ಬಂದಿಯನ್ನೂ ನಿಯೋಜಿಸಿದ್ದು, ಗಡಿಗಳಲ್ಲಿ ತೊಂದರೆಗೆ ಸಿಕ್ಕಿಕೊಂಡವರು ತಮ್ಮ ಸಹಾಯಕ್ಕಾಗಿ ಇವರನ್ನು ಸಂಪರ್ಕಿಸಬಹುದು.</p>.<p>ಸಂಸದರ ಕಚೇರಿ: 08472–279999</p>.<p>ಸಂಪರ್ಕಕ್ಕೆ: ರಮೇಶ ಆರ್. ದುತ್ತರಗಿ: 9739976311</p>.<p>ಪ್ರಹ್ಲಾದ್: 9535569103</p>.<p>ರೋಷನ್: 9611006601</p>.<p>ದಾಷ್ಟಯ್ಯ: 990169998</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ಕೂಲಿ ಅರಸಿ ಹೊರ ರಾಜ್ಯಗಳಿಗೆ ಗುಳೇ ಹೋಗಿದ್ದ ಈ ಭಾಗದ ಸಾವಿರಾರು ಜನ ಈಗ ಗಡಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಅಂತರರಾಜ್ಯ ಜನ ಸಂಚಾರ ನಿರ್ಬಂಧಿಸಿದ ಕಾರಣ ಈ ಜನರೀಗ ಜಿಲ್ಲೆಯ ಗಡಿ ಭಾಗದಲ್ಲಿ ನಿರಾಶ್ರಿತರಾಗಿ ಕಾಲ ಕಳೆಯಬೇಕಾಗಿದೆ.</p>.<p>ಈ ಬಗ್ಗೆ ಸ್ವತಃ ಗುಳೇ ಹೋಗಿದ್ದ ನೂರಾರು ಜನ, ಸಂಸದ ಡಾ.ಉಮೇಶ ಜಾಧವ ಅವರಿಗೆ ಫೋನ್ ಕರೆಯ ಮೂಲಕ ಅಳಲು ತೋಡಿಕೊಂಡಿದ್ದಾರೆ. ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.</p>.<p>ಅತ್ತ ವಲಸೆ ಜಾಗದಲ್ಲಿ ಉದ್ಯೋಗವೂ ಇಲ್ಲ, ಇತ್ತ ತಮ್ಮ ಸ್ವಂತ ಊರಿಗೂ ಹೋಗಲು ಬಿಡಿತ್ತಿಲ್ಲ. ಮಕ್ಕಳು, ಮಹಿಳೆಯರು, ವಯಸ್ಸಾದವರನ್ನು ಕಟ್ಟಿಕೊಂಡು ಈ ಕುಟುಂಬಗಳು ದಯನೀಯ ಸ್ಥಿತಿ ತಲುಪಿವೆ.</p>.<p>ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಬಡವರು ಉದ್ಯೋಗ ಅರಸಿ ಆರು ತಿಂಗಳ ಹಿಂದೆಯೇ ವಲಸೆ ಹೋಗಿದ್ದಾರೆ. ಮಹಾರಾಷ್ಟ್ರದ ಪುಣೆ, ಮುಂಬೈ, ಸೊಲ್ಲಾಪುರ, ಕೊಲ್ಲಾಪುರ, ತಾಂಡೂರು ಹಾಗೂ ಹೈದರಾಬಾದ್, ಗೋವಾ ರಾಜ್ಯದ ವಿವಿಧ ನಗರಗಳಿಗೆ ಹೋಗಿದ್ದರು. ಅವರಲ್ಲೀಗ ಸುಮಾರು 70 ಸಾವಿರಕ್ಕೂ ಹೆಚ್ಚು ಜನ ತಮ್ಮ ತವರಿಗೆ ಮರಳಲು ಹವಣಿಸುತ್ತಿದ್ದಾರೆ. ಆದರೆ, ಅಂತರರಾಜ್ಯ ಜನ ಸಂಚಾರ ನಿರ್ಬಂಧದ ಹಿನ್ನೆಲೆಯಲ್ಲಿ ಎಲ್ಲರೂ ಬೇರೆಬೇರೆ ಭಾಗದ ಗಡಿಗಳಲ್ಲೇ ಸಿಲುಕಿಕೊಂಡಿದ್ದಾರೆ. ಆದರೆ, ಕೊರೊನಾ ವೈರಾಣು ಭೀತಿಯ ಹಿನ್ನೆಲೆಯಲ್ಲಿ ವಲಸಿಗರೇ ಆ ಊರುಗಳನ್ನು ತೊರೆದಿದ್ದಾರೋ ಅಥವಾ ಅಲ್ಲಿನ ಆಡಳಿತಗಳು ಹೊರ ಹಾಕಿವೆಯೋ ಇನ್ನೂ ಸ್ಪಷ್ಟವಾಗಿಲ್ಲ.</p>.<p class="Subhead"><strong>ಜಿಲ್ಲಾಧಿಕಾರಿಯೊಂದಿಗೆ ಸಂಸದ ಚರ್ಚೆ</strong></p>.<p class="Subhead">ನಿರಾಶ್ರಿತರ ಕರೆಗೆ ಸ್ಪಂದಿಸಿದ ಸಂಸದ ಡಾ.ಜಾಧವ, ಜಿಲ್ಲಾಧಿಕಾರಿ ಬಿ.ಶರತ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ತಮ್ಮ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಜನರನ್ನು ಮರಳಿ ಒಳಗೆ ಬಿಟ್ಟುಕೊಳ್ಳಲು ಕಂಡುಕೊಳ್ಳಬೇಕಾದ ಕಾರ್ಗೋಪಾಯಗಳ ಬಗ್ಗೆಯೂ ವಿವರಿಸಿದರು. ನೆರೆ ರಾಜ್ಯದ ಜಿಲ್ಲಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ದಾರಿ ಕಂಡುಕೊಳ್ಳುವಂತೆಯೂ ನಿರ್ದೇಶನ ನೀಡಿದರು.</p>.<p>‘ಗಡಿಯಲ್ಲಿ ಸಿಲುಕಿಕೊಂಡ ಜನ ಆತಂಕ ಪಡುವ ಅಗತ್ಯವಿಲ್ಲ. ಅವರ ನೆರವಿಗೆ ತಕ್ಷಣ ಧಾವಿಸುತ್ತೇನೆ. ಆದಷ್ಟು ಬೇಗ ಅವರು ತವರನ್ನು ತವರಿಗೆ ಸೇರಿಸಲು ಯತ್ನಿಸುತ್ತೇನೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ; ಅವರೀಗ ಇರುವ ಜಾಗದಲ್ಲೇ ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತೇನೆ. ಜನ ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ’ ಎಂದು ಸಂಸದರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>*</p>.<p>ಸಹಾಯಕ್ಕಾಗಿ ಸಂಪರ್ಕಿಸಿ</p>.<p>ಗಡಿಯಲ್ಲಿ ಸಿಲುಕಿಕೊಂಡ ಜನರ ಸಹಾಯ ಹಾಗೂ ರಕ್ಷಣೆಗಾಗಿ ಕಲಬುರ್ಗಿಯ ಸಂಸದ ಕಚೇರಿಯಲ್ಲಿ ಒಂದು ‘ವಾರ್ ರೂಮ್’ ತೆರೆಯಲಾಗಿದೆ. ಮಾರ್ಚ್ 28ರಿಂದಲೇ ಇದು 24X7 ಕಾರ್ಯನಿರ್ವಹಿಸಲಿದೆ. ನಾಲ್ವರು ಸಿಬ್ಬಂದಿಯನ್ನೂ ನಿಯೋಜಿಸಿದ್ದು, ಗಡಿಗಳಲ್ಲಿ ತೊಂದರೆಗೆ ಸಿಕ್ಕಿಕೊಂಡವರು ತಮ್ಮ ಸಹಾಯಕ್ಕಾಗಿ ಇವರನ್ನು ಸಂಪರ್ಕಿಸಬಹುದು.</p>.<p>ಸಂಸದರ ಕಚೇರಿ: 08472–279999</p>.<p>ಸಂಪರ್ಕಕ್ಕೆ: ರಮೇಶ ಆರ್. ದುತ್ತರಗಿ: 9739976311</p>.<p>ಪ್ರಹ್ಲಾದ್: 9535569103</p>.<p>ರೋಷನ್: 9611006601</p>.<p>ದಾಷ್ಟಯ್ಯ: 990169998</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>