<p><strong>ಬೆಂಗಳೂರು: ‘</strong>ವಿಧಾನಸೌಧದಲ್ಲಿ ಹೆಗ್ಗಣಗಳು ತುಂಬಿವೆ’ಎಂಬ ಮಾತುಇಷ್ಟು ದಿನ ವ್ಯಂಗ್ಯಕ್ಕೆ ಬಳಕೆಯಾಗುತ್ತಿತ್ತು. ಆದರೆ ಇಂದು ಈ ಮಾತು ನಿಜವಾಗಿದ್ದು ವಿಪರ್ಯಾಸ. ಸತ್ತ ಇಲಿಯ ದುರ್ನಾತಕ್ಕೆ ಬೇಸತ್ತ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಯಬೇಕಿದ್ದ ಕೊಠಡಿಯನ್ನೇ ಬದಲಿಸಿದ ಪ್ರಸಂಗವೂ ಇಂದು (ಅ.14) ವಿಧಾನಸೌಧದಲ್ಲಿ ನಡೆದುಹೋಯಿತು.</p>.<p>ವಿಧಾನಸೌಧದ 313ನೇಕೊಠಡಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಯೋಗವೊಂದನ್ನು ಭೇಟಿಯಾಗಿ ಚರ್ಚೆ ನಡೆಸಬೇಕಿತ್ತು. ಈ ಕೊಠಡಿ ಇಲಿಗಳ ದರ್ಬಾರ್ಗೆ ಹೆಸರುವಾಸಿ. ಇದಕ್ಕೆ ಪುಟವಿಟ್ಟಂತೆ ಇಂದು ಸತ್ತ ಇಲಿಯ ದುರ್ನಾತವೂ ಆವರಿಸಿಕೊಂಡಿತ್ತು.</p>.<p>ಕೊಠಡಿಗೆ ಬಂದ ಯಡಿಯೂರಪ್ಪ ಅವರಿಗೆ ದುರ್ನಾತ ಸಹಿಲು ಆಗಲಿಲ್ಲ. ‘ಅದೇನದು ದುರ್ವಾಸನೆ, ಮೊದಲು ಕ್ಲೀನ್ ಮಾಡಿಸ್ರೀ’ ಎಂದು ಮೇಲೆದ್ದರು.‘ಇಲ್ಲಿ ಬೇಡ, ನನ್ನ ಕಚೇರಿಯಲ್ಲೇ ಸಭೆ ಮಾಡೋಣ ಬನ್ನಿ’ ಎಂದು ಹೊರ ನಡೆದರು.</p>.<p>ಬಳಿಕ ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಯಲ್ಲಿಯೇ ಸಭೆ ನಡೆಯಿತು. ಮುಖ್ಯಮಂತ್ರಿ ಸೂಚನೆ ನೀಡುವವರೆಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸತ್ತ ಇಲಿಯಾ ದುರ್ನಾತ ಸಹಿಸಿಕೊಂಡು ಅದೇ ಕೊಠಡಿಯಲ್ಲಿ ಕುಳಿತಿದ್ದರು.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/article/%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%B8%E0%B3%8C%E0%B2%A7-%E0%B2%87%E0%B2%B2%E0%B2%BF-%E0%B2%B9%E0%B2%BF%E0%B2%A1%E0%B2%BF%E0%B2%AF%E0%B2%B2%E0%B3%81-5-%E0%B2%B5%E0%B2%B0%E0%B3%8D%E0%B2%B7%E0%B2%A6%E0%B2%B2%E0%B3%8D%E0%B2%B2%E0%B2%BF-%E2%82%B9-19-%E0%B2%B2%E0%B2%95%E0%B3%8D%E0%B2%B7-%E0%B2%96%E0%B2%B0%E0%B3%8D%E0%B2%9A%E0%B3%81" target="_blank">ವಿಧಾನಸೌಧ: ಇಲಿ ಹಿಡಿಯಲು 5 ವರ್ಷದಲ್ಲಿ ₹ 19 ಲಕ್ಷ ಖರ್ಚು!</a><br /><a href="https://www.prajavani.net/article/%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%B8%E0%B3%8C%E0%B2%A7%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%86%E0%B2%9C%E0%B3%8D%E0%B2%9C%E0%B3%87%E0%B2%A8%E0%B3%81-%E0%B2%A6%E0%B2%BE%E0%B2%B3%E0%B2%BF-%E0%B2%B9%E0%B2%B2%E0%B2%B5%E0%B2%B0%E0%B2%BF%E0%B2%97%E0%B3%86-%E0%B2%97%E0%B2%BE%E0%B2%AF" target="_blank">ವಿಧಾನಸೌಧದಲ್ಲಿ ಹೆಜ್ಜೇನು ದಾಳಿ: ಹಲವರಿಗೆ ಗಾಯ</a><br /><a href="https://www.prajavani.net/article/%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%B8%E0%B3%8C%E0%B2%A7%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%86%E0%B2%9C%E0%B3%8D%E0%B2%9C%E0%B3%87%E0%B2%A8%E0%B3%81-%E0%B2%A6%E0%B2%BE%E0%B2%B3%E0%B2%BF-%E0%B2%B9%E0%B2%B2%E0%B2%B5%E0%B2%B0%E0%B2%BF%E0%B2%97%E0%B3%86-%E0%B2%97%E0%B2%BE%E0%B2%AF" target="_blank">ವಿಧಾನಸೌಧದಲ್ಲಿ</a><a href="https://www.prajavani.net/article/%E0%B2%87%E0%B2%B2%E0%B2%BF%E0%B2%97%E0%B2%B3%E0%B3%81-%E0%B2%B8%E0%B2%BE%E0%B2%B0%E0%B3%8D-%E0%B2%87%E0%B2%B2%E0%B2%BF%E0%B2%97%E0%B2%B3%E0%B3%81" target="_blank">ಇಲಿಗಳುಸಾರ್ ಇಲಿಗಳು..!</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ವಿಧಾನಸೌಧದಲ್ಲಿ ಹೆಗ್ಗಣಗಳು ತುಂಬಿವೆ’ಎಂಬ ಮಾತುಇಷ್ಟು ದಿನ ವ್ಯಂಗ್ಯಕ್ಕೆ ಬಳಕೆಯಾಗುತ್ತಿತ್ತು. ಆದರೆ ಇಂದು ಈ ಮಾತು ನಿಜವಾಗಿದ್ದು ವಿಪರ್ಯಾಸ. ಸತ್ತ ಇಲಿಯ ದುರ್ನಾತಕ್ಕೆ ಬೇಸತ್ತ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಯಬೇಕಿದ್ದ ಕೊಠಡಿಯನ್ನೇ ಬದಲಿಸಿದ ಪ್ರಸಂಗವೂ ಇಂದು (ಅ.14) ವಿಧಾನಸೌಧದಲ್ಲಿ ನಡೆದುಹೋಯಿತು.</p>.<p>ವಿಧಾನಸೌಧದ 313ನೇಕೊಠಡಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಯೋಗವೊಂದನ್ನು ಭೇಟಿಯಾಗಿ ಚರ್ಚೆ ನಡೆಸಬೇಕಿತ್ತು. ಈ ಕೊಠಡಿ ಇಲಿಗಳ ದರ್ಬಾರ್ಗೆ ಹೆಸರುವಾಸಿ. ಇದಕ್ಕೆ ಪುಟವಿಟ್ಟಂತೆ ಇಂದು ಸತ್ತ ಇಲಿಯ ದುರ್ನಾತವೂ ಆವರಿಸಿಕೊಂಡಿತ್ತು.</p>.<p>ಕೊಠಡಿಗೆ ಬಂದ ಯಡಿಯೂರಪ್ಪ ಅವರಿಗೆ ದುರ್ನಾತ ಸಹಿಲು ಆಗಲಿಲ್ಲ. ‘ಅದೇನದು ದುರ್ವಾಸನೆ, ಮೊದಲು ಕ್ಲೀನ್ ಮಾಡಿಸ್ರೀ’ ಎಂದು ಮೇಲೆದ್ದರು.‘ಇಲ್ಲಿ ಬೇಡ, ನನ್ನ ಕಚೇರಿಯಲ್ಲೇ ಸಭೆ ಮಾಡೋಣ ಬನ್ನಿ’ ಎಂದು ಹೊರ ನಡೆದರು.</p>.<p>ಬಳಿಕ ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಯಲ್ಲಿಯೇ ಸಭೆ ನಡೆಯಿತು. ಮುಖ್ಯಮಂತ್ರಿ ಸೂಚನೆ ನೀಡುವವರೆಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸತ್ತ ಇಲಿಯಾ ದುರ್ನಾತ ಸಹಿಸಿಕೊಂಡು ಅದೇ ಕೊಠಡಿಯಲ್ಲಿ ಕುಳಿತಿದ್ದರು.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/article/%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%B8%E0%B3%8C%E0%B2%A7-%E0%B2%87%E0%B2%B2%E0%B2%BF-%E0%B2%B9%E0%B2%BF%E0%B2%A1%E0%B2%BF%E0%B2%AF%E0%B2%B2%E0%B3%81-5-%E0%B2%B5%E0%B2%B0%E0%B3%8D%E0%B2%B7%E0%B2%A6%E0%B2%B2%E0%B3%8D%E0%B2%B2%E0%B2%BF-%E2%82%B9-19-%E0%B2%B2%E0%B2%95%E0%B3%8D%E0%B2%B7-%E0%B2%96%E0%B2%B0%E0%B3%8D%E0%B2%9A%E0%B3%81" target="_blank">ವಿಧಾನಸೌಧ: ಇಲಿ ಹಿಡಿಯಲು 5 ವರ್ಷದಲ್ಲಿ ₹ 19 ಲಕ್ಷ ಖರ್ಚು!</a><br /><a href="https://www.prajavani.net/article/%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%B8%E0%B3%8C%E0%B2%A7%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%86%E0%B2%9C%E0%B3%8D%E0%B2%9C%E0%B3%87%E0%B2%A8%E0%B3%81-%E0%B2%A6%E0%B2%BE%E0%B2%B3%E0%B2%BF-%E0%B2%B9%E0%B2%B2%E0%B2%B5%E0%B2%B0%E0%B2%BF%E0%B2%97%E0%B3%86-%E0%B2%97%E0%B2%BE%E0%B2%AF" target="_blank">ವಿಧಾನಸೌಧದಲ್ಲಿ ಹೆಜ್ಜೇನು ದಾಳಿ: ಹಲವರಿಗೆ ಗಾಯ</a><br /><a href="https://www.prajavani.net/article/%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%B8%E0%B3%8C%E0%B2%A7%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%86%E0%B2%9C%E0%B3%8D%E0%B2%9C%E0%B3%87%E0%B2%A8%E0%B3%81-%E0%B2%A6%E0%B2%BE%E0%B2%B3%E0%B2%BF-%E0%B2%B9%E0%B2%B2%E0%B2%B5%E0%B2%B0%E0%B2%BF%E0%B2%97%E0%B3%86-%E0%B2%97%E0%B2%BE%E0%B2%AF" target="_blank">ವಿಧಾನಸೌಧದಲ್ಲಿ</a><a href="https://www.prajavani.net/article/%E0%B2%87%E0%B2%B2%E0%B2%BF%E0%B2%97%E0%B2%B3%E0%B3%81-%E0%B2%B8%E0%B2%BE%E0%B2%B0%E0%B3%8D-%E0%B2%87%E0%B2%B2%E0%B2%BF%E0%B2%97%E0%B2%B3%E0%B3%81" target="_blank">ಇಲಿಗಳುಸಾರ್ ಇಲಿಗಳು..!</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>