<p><strong>ಬೆಂಗಳೂರು:</strong> ಯಾವುದೇ ಪೂರ್ವತಯಾರಿ ನಡೆಸದೆ ಇಕೊ ಟೂರಿಸಂ (ಪರಿಸರ ಪ್ರವಾಸೋದ್ಯಮ) ಯೋಜನೆಗಳನ್ನು ಘೋಷಿಸಿದ್ದರಿಂದ ₹11.90 ಕೋಟಿ ಅನುದಾನ ಹಾಗೆಯೇ ಉಳಿದಿದೆ.</p>.<p>ಇದರಲ್ಲಿ ರಾಜ್ಯ ಸರ್ಕಾರದಿಂದ ಹಣಕಾಸು ಒದಗಿಸಿದ್ದ ನಾಲ್ಕು ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ಹಣಕಾಸು ಒದಗಿಸಿದ್ದ ಎರಡು ಯೋಜನೆಗಳು ಸೇರಿವೆ. ಅನುದಾನ ಸಮರ್ಪಕ ಬಳಕೆ ಮಾಡದೇ ಇರುವುದಕ್ಕೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ.</p>.<p><span class="Bullet">*</span> ಬನ್ನೇರುಘಟ್ಟದಲ್ಲಿ ರಾತ್ರಿ ಸಫಾರಿ ಯೋಜನೆಗಾಗಿ 2009–11ರಲ್ಲಿ ₹9.50 ಕೋಟಿ ಬಿಡುಗಡೆ ಮಾಡಲಾಯಿತು. ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಈ ಯೋಜನೆ ಕೈಬಿಡಲಾಯಿತು. ಬಳಕೆಯಾಗದೆಉಳಿದಿದ್ದ ₹8.70 ಕೋಟಿಯನ್ನು ಅರಣ್ಯ ಕ್ಯಾಂಪ್ ಹಾಗೂ ಹಾದಿ ನಿರ್ಮಾಣಕ್ಕೆ ಬಳಸಲು ತೀರ್ಮಾನಿಸಲಾಯಿತು. ನಾಲ್ಕು ಕಡೆಗಳಲ್ಲಿ ಅರಣ್ಯ ಕ್ಯಾಂಪ್ ನಿರ್ಮಾಣಕ್ಕೆ ₹2.75 ಕೋಟಿ ಹಂಚಿಕೆ ಮಾಡಲಾಗಿತ್ತು. 2018ರ ಸೆಪ್ಟೆಂಬರ್ ವರೆಗೆ ₹61.50 ಲಕ್ಷ ಮಾತ್ರ ಖರ್ಚು ಮಾಡಲಾಗಿತ್ತು.</p>.<p><span class="Bullet">*</span> ಬಂಡೀಪುರ ಸಫಾರಿ ರೆಸಾರ್ಟಿನಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ₹2.35 ಕೋಟಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ₹46.31 ಲಕ್ಷವಷ್ಟೇ ಖರ್ಚಾಗಿದೆ. ಯಾವ ಕಾರಣಕ್ಕೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ಬಗ್ಗೆಯೂ ಉಲ್ಲೇಖ ಇಲ್ಲ.</p>.<p><span class="Bullet">*</span> ಸಾಹಸ ಕ್ರೀಡೆ ಪ್ರವಾಸೋದ್ಯಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ₹2.75 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿತು. ಕ್ರೀಡಾ ಸ್ಥಳಗಳು ಅರಣ್ಯದಲ್ಲಿ ಇದ್ದ ಕಾರಣ ಇದಕ್ಕೆ ಅನುಮತಿ ಸಿಗಲಿಲ್ಲ. ಹೀಗಾಗಿ, ಅನುದಾನವನ್ನು ನಿಶ್ಚಿತ ಠೇವಣಿಯಲ್ಲಿ ಇಡಲಾಯಿತು. ಅನುದಾನ ಹಾಗೂ ಬಡ್ಡಿಯ ₹3.40 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಲು ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್ಸ್ 2017ರಲ್ಲಿ ತೀರ್ಮಾನಿಸಿತು. ಆದರೆ, ಈವರೆಗೆ ಹಣ ಮರುಪಾವತಿ ಆಗಿಲ್ಲ.</p>.<p><span class="Bullet">*</span> ಬೆಂಗಳೂರಿನ ತುರಹಳ್ಳಿ ಅರಣ್ಯದಲ್ಲಿ ಇಕೊ ಟೂರಿಸಂ ಅಭಿವೃದ್ಧಿಗಾಗಿ 3 ಕಿ.ಮೀ. ಉದ್ದದ ಕಾಂಪೌಂಡ್ ನಿರ್ಮಾಣಕ್ಕಾಗಿ 2015ರಲ್ಲಿ ₹1 ಕೋಟಿ ಬಿಡುಗಡೆಗೊಳಿಸಲಾಗಿತ್ತು. ಭೂವಿವಾದದ ಕಾರಣ ಈ ಯೋಜನೆ ಅನುಷ್ಠಾನವಾಗಲಿಲ್ಲ. ಇಕೊ ಟೂರಿಸಂ ಅಭಿವೃದ್ಧಿ ಮಂಡಳಿಯು ₹3.03 ಲಕ್ಷವನ್ನು ಕಂಪನಿಗೆ ಮರುಪಾವತಿಸಿತು. ಆದರೆ, ಕಂಪನಿಯು ಈ ಮೊತ್ತವನ್ನು ಸರ್ಕಾರಕ್ಕೆ ನೀಡಿಲ್ಲ.</p>.<p><span class="Bullet">*</span> ಭದ್ರಾ ಎರಡನೇ ಹಂತದಲ್ಲಿ ಇಕೊ ಟೂರಿಸಂ ಅಭಿವೃದ್ಧಿ ಯೋಜನೆಯಡಿ ನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ₹1 ಕೋಟಿಯನ್ನು ಬಿಡುಗಡೆ ಮಾಡಲಾಗಿತ್ತು. ಎರಡು ಸ್ಥಳಗಳಲ್ಲಿ ಮಾತ್ರ ಸೌರ ಸ್ಥಾವರಗಳ ಸ್ಥಾಪನೆಗೆ ₹15 ಲಕ್ಷ ಖರ್ಚು ಮಾಡಲಾಗಿತ್ತು. ಉಳಿದ ಮೊತ್ತ ಇಲ್ಲಿಯವರೆಗೆ ಸರ್ಕಾರಕ್ಕೆ ಮರುಪಾವತಿ ಆಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಯಾವುದೇ ಪೂರ್ವತಯಾರಿ ನಡೆಸದೆ ಇಕೊ ಟೂರಿಸಂ (ಪರಿಸರ ಪ್ರವಾಸೋದ್ಯಮ) ಯೋಜನೆಗಳನ್ನು ಘೋಷಿಸಿದ್ದರಿಂದ ₹11.90 ಕೋಟಿ ಅನುದಾನ ಹಾಗೆಯೇ ಉಳಿದಿದೆ.</p>.<p>ಇದರಲ್ಲಿ ರಾಜ್ಯ ಸರ್ಕಾರದಿಂದ ಹಣಕಾಸು ಒದಗಿಸಿದ್ದ ನಾಲ್ಕು ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ಹಣಕಾಸು ಒದಗಿಸಿದ್ದ ಎರಡು ಯೋಜನೆಗಳು ಸೇರಿವೆ. ಅನುದಾನ ಸಮರ್ಪಕ ಬಳಕೆ ಮಾಡದೇ ಇರುವುದಕ್ಕೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ.</p>.<p><span class="Bullet">*</span> ಬನ್ನೇರುಘಟ್ಟದಲ್ಲಿ ರಾತ್ರಿ ಸಫಾರಿ ಯೋಜನೆಗಾಗಿ 2009–11ರಲ್ಲಿ ₹9.50 ಕೋಟಿ ಬಿಡುಗಡೆ ಮಾಡಲಾಯಿತು. ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಈ ಯೋಜನೆ ಕೈಬಿಡಲಾಯಿತು. ಬಳಕೆಯಾಗದೆಉಳಿದಿದ್ದ ₹8.70 ಕೋಟಿಯನ್ನು ಅರಣ್ಯ ಕ್ಯಾಂಪ್ ಹಾಗೂ ಹಾದಿ ನಿರ್ಮಾಣಕ್ಕೆ ಬಳಸಲು ತೀರ್ಮಾನಿಸಲಾಯಿತು. ನಾಲ್ಕು ಕಡೆಗಳಲ್ಲಿ ಅರಣ್ಯ ಕ್ಯಾಂಪ್ ನಿರ್ಮಾಣಕ್ಕೆ ₹2.75 ಕೋಟಿ ಹಂಚಿಕೆ ಮಾಡಲಾಗಿತ್ತು. 2018ರ ಸೆಪ್ಟೆಂಬರ್ ವರೆಗೆ ₹61.50 ಲಕ್ಷ ಮಾತ್ರ ಖರ್ಚು ಮಾಡಲಾಗಿತ್ತು.</p>.<p><span class="Bullet">*</span> ಬಂಡೀಪುರ ಸಫಾರಿ ರೆಸಾರ್ಟಿನಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ₹2.35 ಕೋಟಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ₹46.31 ಲಕ್ಷವಷ್ಟೇ ಖರ್ಚಾಗಿದೆ. ಯಾವ ಕಾರಣಕ್ಕೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ಬಗ್ಗೆಯೂ ಉಲ್ಲೇಖ ಇಲ್ಲ.</p>.<p><span class="Bullet">*</span> ಸಾಹಸ ಕ್ರೀಡೆ ಪ್ರವಾಸೋದ್ಯಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ₹2.75 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿತು. ಕ್ರೀಡಾ ಸ್ಥಳಗಳು ಅರಣ್ಯದಲ್ಲಿ ಇದ್ದ ಕಾರಣ ಇದಕ್ಕೆ ಅನುಮತಿ ಸಿಗಲಿಲ್ಲ. ಹೀಗಾಗಿ, ಅನುದಾನವನ್ನು ನಿಶ್ಚಿತ ಠೇವಣಿಯಲ್ಲಿ ಇಡಲಾಯಿತು. ಅನುದಾನ ಹಾಗೂ ಬಡ್ಡಿಯ ₹3.40 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಲು ಜಂಗಲ್ ಲಾಡ್ಜಸ್ ಹಾಗೂ ರೆಸಾರ್ಟ್ಸ್ 2017ರಲ್ಲಿ ತೀರ್ಮಾನಿಸಿತು. ಆದರೆ, ಈವರೆಗೆ ಹಣ ಮರುಪಾವತಿ ಆಗಿಲ್ಲ.</p>.<p><span class="Bullet">*</span> ಬೆಂಗಳೂರಿನ ತುರಹಳ್ಳಿ ಅರಣ್ಯದಲ್ಲಿ ಇಕೊ ಟೂರಿಸಂ ಅಭಿವೃದ್ಧಿಗಾಗಿ 3 ಕಿ.ಮೀ. ಉದ್ದದ ಕಾಂಪೌಂಡ್ ನಿರ್ಮಾಣಕ್ಕಾಗಿ 2015ರಲ್ಲಿ ₹1 ಕೋಟಿ ಬಿಡುಗಡೆಗೊಳಿಸಲಾಗಿತ್ತು. ಭೂವಿವಾದದ ಕಾರಣ ಈ ಯೋಜನೆ ಅನುಷ್ಠಾನವಾಗಲಿಲ್ಲ. ಇಕೊ ಟೂರಿಸಂ ಅಭಿವೃದ್ಧಿ ಮಂಡಳಿಯು ₹3.03 ಲಕ್ಷವನ್ನು ಕಂಪನಿಗೆ ಮರುಪಾವತಿಸಿತು. ಆದರೆ, ಕಂಪನಿಯು ಈ ಮೊತ್ತವನ್ನು ಸರ್ಕಾರಕ್ಕೆ ನೀಡಿಲ್ಲ.</p>.<p><span class="Bullet">*</span> ಭದ್ರಾ ಎರಡನೇ ಹಂತದಲ್ಲಿ ಇಕೊ ಟೂರಿಸಂ ಅಭಿವೃದ್ಧಿ ಯೋಜನೆಯಡಿ ನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ₹1 ಕೋಟಿಯನ್ನು ಬಿಡುಗಡೆ ಮಾಡಲಾಗಿತ್ತು. ಎರಡು ಸ್ಥಳಗಳಲ್ಲಿ ಮಾತ್ರ ಸೌರ ಸ್ಥಾವರಗಳ ಸ್ಥಾಪನೆಗೆ ₹15 ಲಕ್ಷ ಖರ್ಚು ಮಾಡಲಾಗಿತ್ತು. ಉಳಿದ ಮೊತ್ತ ಇಲ್ಲಿಯವರೆಗೆ ಸರ್ಕಾರಕ್ಕೆ ಮರುಪಾವತಿ ಆಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>