<p><strong>ಮಂಗಳೂರು:</strong> ನಕಲಿ ಸರಕುಪಟ್ಟಿ ಸಲ್ಲಿಸಿದ ಸುಮಾರು ₹83 ಕೋಟಿ ಜಿಎಸ್ಟಿ ವಂಚನೆ ಮಾಡಿರುವ ಆರೋಪದಲ್ಲಿ ಎರಡು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರಿನ ಕೇಂದ್ರ ಜಿಎಸ್ಟಿ ಆಯುಕ್ತಾಲಯದ ಅಧಿಕಾರಿಗಳು, ಎರಡೂ ಕಂಪನಿಗಳ ಮಾಲೀಕರನ್ನು ಬಂಧಿಸಿದ್ದಾರೆ.</p>.<p>ತೌಹೀದ್ ಸ್ಕ್ರ್ಯಾಪ್ ಡೀಲರ್ ಕಂಪನಿಯ ಮಾಲೀಕ ಪಿ.ಕೆ. ಅಬ್ದುಲ್ ರಹೀಮ್ ಹಾಗೂ ಎಂ.ಕೆ. ಟ್ರೇಡರ್ಸ್ ಮಾಲೀಕ ಅಬ್ದುಲ್ ಖಾದರ್ ಕೂಳೂರು ಬಂಧಿತರು.</p>.<p>ತೌಹೀದ್ ಸ್ಕ್ರ್ಯಾಪ್ ಡೀಲರ್ ಕಂಪನಿ ಹಾಗೂ ಎಂ.ಕೆ. ಟ್ರೇಡರ್ಸ್ ಕಂಪನಿಗಳು, ಸರಕು ಖರೀದಿಸಿರುವ ಬಗ್ಗೆ ವಿವಿಧ ಸಂಸ್ಥೆಗಳಿಂದ ನಕಲಿ ಸರಕುಪಟ್ಟಿ ಪಡೆದಿವೆ.</p>.<p>ಅವುಗಳನ್ನು ಸಲ್ಲಿಸಿ ತೆರಿಗೆ ಸಹಾಯಧನ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್) ಪಡೆದುಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.</p>.<p>‘ಐಟಿಸಿ ಕ್ರೆಡಿಟ್ ವರ್ಗಾವಣೆಗಾಗಿ ನಕಲಿ ಸರಕುಪಟ್ಟಿಯನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಕೇಂದ್ರ ಜಿಎಸ್ಟಿ ಕಾಯ್ದೆಯ 132 ನೇ ಕಲಂ ಪ್ರಕಾರ ಇದು ಗಂಭೀರ ಹಾಗೂ ಜಾಮೀನುರಹಿತ ಪ್ರಕರಣವಾಗಿದೆ’ ಎಂದು ಕೇಂದ್ರ ಜಿಎಸ್ಟಿ ಮಂಗಳೂರು ಆಯುಕ್ತ ಧರ್ಮಸಿಂಗ್ ತಿಳಿಸಿದ್ದಾರೆ.</p>.<p>‘ಉಭಯ ಕಂಪನಿಗಳು ₹83 ಕೋಟಿ ಮೌಲ್ಯದ ಸರಕು ಖರೀದಿ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿವೆ.</p>.<p>₹15 ಕೋಟಿ ಮೊತ್ತದ ಸಹಾಯಧನ ಪಡೆದು ವಂಚನೆ ಮಾಡಲಾಗಿದೆ.</p>.<p>ಈ ಜಾಲದಲ್ಲಿ ಮತ್ತಷ್ಟು ಕಂಪನಿಗಳು ಶಾಮೀಲಾಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಕಲಿ ಸರಕುಪಟ್ಟಿ ಸಲ್ಲಿಸಿದ ಸುಮಾರು ₹83 ಕೋಟಿ ಜಿಎಸ್ಟಿ ವಂಚನೆ ಮಾಡಿರುವ ಆರೋಪದಲ್ಲಿ ಎರಡು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರಿನ ಕೇಂದ್ರ ಜಿಎಸ್ಟಿ ಆಯುಕ್ತಾಲಯದ ಅಧಿಕಾರಿಗಳು, ಎರಡೂ ಕಂಪನಿಗಳ ಮಾಲೀಕರನ್ನು ಬಂಧಿಸಿದ್ದಾರೆ.</p>.<p>ತೌಹೀದ್ ಸ್ಕ್ರ್ಯಾಪ್ ಡೀಲರ್ ಕಂಪನಿಯ ಮಾಲೀಕ ಪಿ.ಕೆ. ಅಬ್ದುಲ್ ರಹೀಮ್ ಹಾಗೂ ಎಂ.ಕೆ. ಟ್ರೇಡರ್ಸ್ ಮಾಲೀಕ ಅಬ್ದುಲ್ ಖಾದರ್ ಕೂಳೂರು ಬಂಧಿತರು.</p>.<p>ತೌಹೀದ್ ಸ್ಕ್ರ್ಯಾಪ್ ಡೀಲರ್ ಕಂಪನಿ ಹಾಗೂ ಎಂ.ಕೆ. ಟ್ರೇಡರ್ಸ್ ಕಂಪನಿಗಳು, ಸರಕು ಖರೀದಿಸಿರುವ ಬಗ್ಗೆ ವಿವಿಧ ಸಂಸ್ಥೆಗಳಿಂದ ನಕಲಿ ಸರಕುಪಟ್ಟಿ ಪಡೆದಿವೆ.</p>.<p>ಅವುಗಳನ್ನು ಸಲ್ಲಿಸಿ ತೆರಿಗೆ ಸಹಾಯಧನ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್) ಪಡೆದುಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.</p>.<p>‘ಐಟಿಸಿ ಕ್ರೆಡಿಟ್ ವರ್ಗಾವಣೆಗಾಗಿ ನಕಲಿ ಸರಕುಪಟ್ಟಿಯನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಕೇಂದ್ರ ಜಿಎಸ್ಟಿ ಕಾಯ್ದೆಯ 132 ನೇ ಕಲಂ ಪ್ರಕಾರ ಇದು ಗಂಭೀರ ಹಾಗೂ ಜಾಮೀನುರಹಿತ ಪ್ರಕರಣವಾಗಿದೆ’ ಎಂದು ಕೇಂದ್ರ ಜಿಎಸ್ಟಿ ಮಂಗಳೂರು ಆಯುಕ್ತ ಧರ್ಮಸಿಂಗ್ ತಿಳಿಸಿದ್ದಾರೆ.</p>.<p>‘ಉಭಯ ಕಂಪನಿಗಳು ₹83 ಕೋಟಿ ಮೌಲ್ಯದ ಸರಕು ಖರೀದಿ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿವೆ.</p>.<p>₹15 ಕೋಟಿ ಮೊತ್ತದ ಸಹಾಯಧನ ಪಡೆದು ವಂಚನೆ ಮಾಡಲಾಗಿದೆ.</p>.<p>ಈ ಜಾಲದಲ್ಲಿ ಮತ್ತಷ್ಟು ಕಂಪನಿಗಳು ಶಾಮೀಲಾಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>