<p><strong>ಬೆಂಗಳೂರು</strong>: ರಾಜ್ಯದ ಉತ್ತರ ಒಳನಾಡಿನ ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಇದೇ 23 ಮತ್ತು 24ರಂದು ಸುಡುಗಾಳಿ ಬೀಸಲಿದೆ. ಈ ಭಾಗಗಳಲ್ಲಿ ಸರಾಸರಿಗಿಂತ 4 ಅಥವಾ 5 ಡಿಗ್ರಿ ಸೆಲ್ಸಿಯಸ್ವೆರೆಗೆ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.</p>.<p>ಏರಲಿರುವ ತಾಪಮಾನದಿಂದ ದೇಹವನ್ನು ರಕ್ಷಿಸಿಕೊಳ್ಳಲು ಎರಡೂ ದಿನಗಳ ಕಾಲ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 3.30ರವರೆಗೆ ಜನರು ಉರಿಬಿಸಿಲಿಗೆ ಮೈಯೊಡ್ಡದಂತೆ ಇಲಾಖೆ ಎಚ್ಚರಿಸಿದೆ.</p>.<p>‘ಉತ್ತರ ಭಾಗದಿಂದ ಬಿಸಿ ಹಾಗೂ ಒಣ ಹವೆ ಬೀಸುವುದರಿಂದ ರಾಜ್ಯದ ಕೆಲವು ಭಾಗಗಳನ್ನು ಈ ಬಿಸಿಯಾದ ಅಲೆಗಳು ಪ್ರವೇಶಿಸುತ್ತವೆ. ಇದು ಬಲಹೀನರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.</p>.<p>ಕಲಬುರ್ಗಿಯಲ್ಲಿ ಶುಕ್ರವಾರ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 42, ವಿಜಯಪುರ, ಬೀದರ್ 40 ಹಾಗೂ ಮಡಿಕೇರಿಯಲ್ಲಿ 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.</p>.<p>ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಮೇ 25ರಿಂದ ಮಳೆ ಹೆಚ್ಚಾಗಲಿದೆ. ಸುಬ್ರಹ್ಮಣ್ಯ, ಹಾಸನದಲ್ಲಿ 2 ಸೆಂ.ಮೀ, ಬೆಳ್ತಂಗಡಿ, ಭಾಗಮಂಡಲ, ಶ್ರವಣಬೆಳಗೊಳದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದ ಉತ್ತರ ಒಳನಾಡಿನ ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಇದೇ 23 ಮತ್ತು 24ರಂದು ಸುಡುಗಾಳಿ ಬೀಸಲಿದೆ. ಈ ಭಾಗಗಳಲ್ಲಿ ಸರಾಸರಿಗಿಂತ 4 ಅಥವಾ 5 ಡಿಗ್ರಿ ಸೆಲ್ಸಿಯಸ್ವೆರೆಗೆ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.</p>.<p>ಏರಲಿರುವ ತಾಪಮಾನದಿಂದ ದೇಹವನ್ನು ರಕ್ಷಿಸಿಕೊಳ್ಳಲು ಎರಡೂ ದಿನಗಳ ಕಾಲ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 3.30ರವರೆಗೆ ಜನರು ಉರಿಬಿಸಿಲಿಗೆ ಮೈಯೊಡ್ಡದಂತೆ ಇಲಾಖೆ ಎಚ್ಚರಿಸಿದೆ.</p>.<p>‘ಉತ್ತರ ಭಾಗದಿಂದ ಬಿಸಿ ಹಾಗೂ ಒಣ ಹವೆ ಬೀಸುವುದರಿಂದ ರಾಜ್ಯದ ಕೆಲವು ಭಾಗಗಳನ್ನು ಈ ಬಿಸಿಯಾದ ಅಲೆಗಳು ಪ್ರವೇಶಿಸುತ್ತವೆ. ಇದು ಬಲಹೀನರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.</p>.<p>ಕಲಬುರ್ಗಿಯಲ್ಲಿ ಶುಕ್ರವಾರ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 42, ವಿಜಯಪುರ, ಬೀದರ್ 40 ಹಾಗೂ ಮಡಿಕೇರಿಯಲ್ಲಿ 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.</p>.<p>ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಮೇ 25ರಿಂದ ಮಳೆ ಹೆಚ್ಚಾಗಲಿದೆ. ಸುಬ್ರಹ್ಮಣ್ಯ, ಹಾಸನದಲ್ಲಿ 2 ಸೆಂ.ಮೀ, ಬೆಳ್ತಂಗಡಿ, ಭಾಗಮಂಡಲ, ಶ್ರವಣಬೆಳಗೊಳದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>