ಕೊರೊನಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಕೇರಳದ ಪಾನತ್ತೂರಿನಲ್ಲಿದ್ದು, ಬಳಿಕ ಸುಳ್ಯ ತಾಲ್ಲೂಕು ಕಲ್ಲಪಲ್ಲಿ ಬಡ್ಡಡ್ಕ ಮಾರ್ಗವಾಗಿ ಅಲೆಟ್ಟಿ ಹಾಗೂ ಮಂಡೆಕೋಲು ಗ್ರಾಮಕ್ಕೆ ಬಂದ ಗದಗ ಹಾಗೂ ಕೊಪ್ಪಳ ಮೂಲದ 13 ಮಂದಿಯನ್ನು ಆರೋಗ್ಯ ತಪಾಸಣೆ ನಡೆಸಿ ಒಂದು ದಿನದ ಮಟ್ಟಿಗೆ ವ್ಯಾಸ್ತವ್ಯ ಮಾಡಿಸಿ, ಬಳಿಕ ಪುತ್ತೂರು ಎಸಿ ಅವರ ಆದೇಶದಂತೆ ತಹಶೀಲ್ದಾರರ ಸೂಚನೆಯಂತೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇವರನ್ನು ಸುಬ್ರಹ್ಮಣ್ಯದಲ್ಲಿ 14 ದಿನ ಕ್ವಾರಂಟೈನ್ನಲ್ಲಿ ಇರಲು ಸೂಚನೆ ನೀಡಲಾಗಿದೆ.