<p><strong>ಬೆಂಗಳೂರು: </strong>ಇಂದಿರಾ ಕ್ಯಾಂಟೀನ್ ರಾಜ್ಯ ಸರ್ಕಾರದ ಯೋಜನೆ, ಒಂದೊಂದು ಕ್ಯಾಂಟೀನ್ ಕಟ್ಟಡಕ್ಕೆ ₹ 1 ಕೋಟಿ ವೆಚ್ಚ ಮಾಡಲಾಗಿದೆ, ಇಲ್ಲೇ ದೊಡ್ಡ ಭ್ರಷ್ಟಾಚಾರ ನಡೆದಿದೆ. ಅದರ ತನಿಖೆ ನಡೆಯಲಿದ್ದು, ಎಲ್ಲರ ಬಣ್ಣ ಬಯಲಿಗೆ ಬರಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.</p>.<p>ಇಂದಿರಾ ಕ್ಯಾಂಟೀನಿಗೆ ಕಾಂಗ್ರೆಸ್ ದುಡ್ಡು ಕೊಡುವುದಾದರೆ ಅದಕ್ಕೆ ನೆಹರೂ ಹೆಸರು ಇಡಲಿ, ರಾಜೀವ್ ಹೆಸರು ಇಡಲಿ ಅಥವಾ ಮಾಂಸಾಹಾರ ಆರಂಭಿಸಿ ಸೋನಿಯಾ ಹೆಸರನ್ನೂ ಇಡಲಿ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಹಣ ಈ ಮೂಲಕ ಬಡವರ ಹೊಟ್ಟೆ ತುಂಬಿಸುವ ಮೂಲಕ ಪಾಪ ಒಂದಿಷ್ಟು ಕಡಿಮೆಯಾಗಲಿ, ಆದರೆ ಸರ್ಕಾರದ ದುಡ್ಡಿನಲ್ಲಿ ಇನ್ನು ಮುಂದೆ ಹಣ ನುಂಗುವ ಯೋಜನೆಯನ್ನು ಅದೇ ಹೆಸರಲ್ಲಿ ಮುಂದುದುವರಿಸುವುದು ಸರಿಯಲ್ಲ, ಈ ಯೋಜನೆಗೆ ಅನ್ನಪೂರ್ಣೇಶ್ವರಿಯ ಹೆಸರು ಇಡಬಹುದು ಎಂದರು.</p>.<p>ವಾಲ್ಮೀಕಿ ಅನ್ನ ಕುಟೀರ ಎಂಬ ಹೆಸರು ಇಡುವ ನಿರ್ಧಾರಕ್ಕೆ ಬಂದಿಲ್ಲ, ಇಂತಹ ಸಲಹೆಯೊಂದು ಕಂದಾಯ ಸಚಿವರಿಗೆ ಬಂದಿದೆಯಷ್ಟೇ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇಂದಿರಾ ಕ್ಯಾಂಟೀನ್ ರಾಜ್ಯ ಸರ್ಕಾರದ ಯೋಜನೆ, ಒಂದೊಂದು ಕ್ಯಾಂಟೀನ್ ಕಟ್ಟಡಕ್ಕೆ ₹ 1 ಕೋಟಿ ವೆಚ್ಚ ಮಾಡಲಾಗಿದೆ, ಇಲ್ಲೇ ದೊಡ್ಡ ಭ್ರಷ್ಟಾಚಾರ ನಡೆದಿದೆ. ಅದರ ತನಿಖೆ ನಡೆಯಲಿದ್ದು, ಎಲ್ಲರ ಬಣ್ಣ ಬಯಲಿಗೆ ಬರಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.</p>.<p>ಇಂದಿರಾ ಕ್ಯಾಂಟೀನಿಗೆ ಕಾಂಗ್ರೆಸ್ ದುಡ್ಡು ಕೊಡುವುದಾದರೆ ಅದಕ್ಕೆ ನೆಹರೂ ಹೆಸರು ಇಡಲಿ, ರಾಜೀವ್ ಹೆಸರು ಇಡಲಿ ಅಥವಾ ಮಾಂಸಾಹಾರ ಆರಂಭಿಸಿ ಸೋನಿಯಾ ಹೆಸರನ್ನೂ ಇಡಲಿ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಹಣ ಈ ಮೂಲಕ ಬಡವರ ಹೊಟ್ಟೆ ತುಂಬಿಸುವ ಮೂಲಕ ಪಾಪ ಒಂದಿಷ್ಟು ಕಡಿಮೆಯಾಗಲಿ, ಆದರೆ ಸರ್ಕಾರದ ದುಡ್ಡಿನಲ್ಲಿ ಇನ್ನು ಮುಂದೆ ಹಣ ನುಂಗುವ ಯೋಜನೆಯನ್ನು ಅದೇ ಹೆಸರಲ್ಲಿ ಮುಂದುದುವರಿಸುವುದು ಸರಿಯಲ್ಲ, ಈ ಯೋಜನೆಗೆ ಅನ್ನಪೂರ್ಣೇಶ್ವರಿಯ ಹೆಸರು ಇಡಬಹುದು ಎಂದರು.</p>.<p>ವಾಲ್ಮೀಕಿ ಅನ್ನ ಕುಟೀರ ಎಂಬ ಹೆಸರು ಇಡುವ ನಿರ್ಧಾರಕ್ಕೆ ಬಂದಿಲ್ಲ, ಇಂತಹ ಸಲಹೆಯೊಂದು ಕಂದಾಯ ಸಚಿವರಿಗೆ ಬಂದಿದೆಯಷ್ಟೇ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>