<p><strong>ಬೆಂಗಳೂರು:</strong> ‘ಕೇತಗಾನಹಳ್ಳಿಯಲ್ಲಿ ಗೋಮಾಳ ಹೊಡೆದಿದ್ದೀನಿ ಅಂತಾ ಹಿರೇಮಠ, ರವಿ ಕೃಷ್ಣಾರೆಡ್ಡಿ ಹೇಳುತ್ತಿದ್ದಾರೆ, ನಿಮಗೆ ಯಾವ ದಾಖಲೆ ಬೇಕೋ ನಾನೇ ಕೊಡುತ್ತೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.</p>.<p>ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು,ಭ್ರಷ್ಟ ಅಧಿಕಾರಿ ಸಿದ್ದಪ್ಪ ಮಾಡಿರುವ ಅವ್ಯವಹಾರ ಕೆಲಸದ ವಿರುದ್ಧ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಾರೆಯೇಎಂದು ಪ್ರಶ್ನಿಸಿದರು.</p>.<p>‘ಪಕ್ಷಕ್ಕಾಗಿ ನಾನು ಖಜಾನೆ ಲೂಟಿ ಮಾಡಲಿಲ್ಲ, ಕೇಳಿದಾಗಲೆಲ್ಲ ₹ 50 ಲಕ್ಷ, ₹ 1 ಕೋಟಿ ಕೊಡುವ ಕಾರ್ಯಕರ್ತರು ಇದ್ದಾರೆ. ಅವರಿಂದ ಪಕ್ಷದ ಚಟುವಟಿಕೆಗಳು ನಡೆಯುತ್ತವೆ. ನನ್ನ ಅನುಯಾಯಿಗಳನ್ನು ಸಾಕು ನಾಯಿಗಳು ಎಂದು ಕರೆದಿದ್ದೀರಿ, ಹಾಗೆಯೇ ನಿಮ್ಮನ್ನು ಹುಚ್ಚು ನಾಯಿಗಳು ಎಂದು ಕರೆಯಬೇಕೇ?’ ಎಂದು ಕೇಳಿದರು.</p>.<p><strong>ಸಿದ್ದರಾಮಯ್ಯಗೆ ತಿರುಗೇಟು:</strong> ‘ತಮ್ಮ ಯೋಜನೆಗಳನ್ನು ಮುಂದುವರಿಸಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ನನ್ನ ಬಗ್ಗೆ ಚಿಂತೆ ಮಾಡಬೇಡಿ, ಅದು ಆಗಿ ಹೋಯಿತಲ್ಲ, ನೀವು ಹಣ ಇಡದೇ ಕೇವಲ ಯೋಜನೆಗಳನ್ನು ಘೋಷಣೆ ಮಾಡಿದ್ದಿರಿ, ನಾನು ಅದಕ್ಕೆ ಎಲ್ಲಿಂದ ದುಡ್ಡು ತರಬೇಕಿತ್ತು?’ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.</p>.<p>ಫೆಬ್ರುವರಿ ಮೊದಲ ವಾರ ಇಲ್ಲಿ ಮಹಿಳಾ ಸಮಾವೇಶ ನಡೆಯಲಿದೆ, ಫೆ.10 ಮತ್ತು 11ರಂದು ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.</p>.<p><strong>ಪ್ರತಿಭಟನೆ:</strong> ಸಿಎಎ ವಿರೋಧಿಸಿ ನಗರದ ಪುರಭವನದ ಬಳಿ ಶುಕ್ರವಾರ ಸಂಜೆ 3.30ರಿಂದ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಹೇಳಿದರು.</p>.<p><strong>ಮೂರು ನಿರ್ಣಯಗಳು</strong><br />ಪೌರತ್ವ (ತಿದ್ದುಪಡಿ) ಕಾಯ್ದೆ ಹಿಂಪಡೆಯಬೇಕು, ನೆರೆ ಪರಿಹಾರ ಕಾರ್ಯ ಅಸಮರ್ಪಕವಾಗಿದ್ದು, ತಕ್ಷಣ ₹ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು, ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದು, ಇದರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು ಹಾಗೂ ಈ ಮೂರೂ ವಿಷಯಗಳ ಬಗ್ಗೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕೇತಗಾನಹಳ್ಳಿಯಲ್ಲಿ ಗೋಮಾಳ ಹೊಡೆದಿದ್ದೀನಿ ಅಂತಾ ಹಿರೇಮಠ, ರವಿ ಕೃಷ್ಣಾರೆಡ್ಡಿ ಹೇಳುತ್ತಿದ್ದಾರೆ, ನಿಮಗೆ ಯಾವ ದಾಖಲೆ ಬೇಕೋ ನಾನೇ ಕೊಡುತ್ತೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.</p>.<p>ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು,ಭ್ರಷ್ಟ ಅಧಿಕಾರಿ ಸಿದ್ದಪ್ಪ ಮಾಡಿರುವ ಅವ್ಯವಹಾರ ಕೆಲಸದ ವಿರುದ್ಧ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಾರೆಯೇಎಂದು ಪ್ರಶ್ನಿಸಿದರು.</p>.<p>‘ಪಕ್ಷಕ್ಕಾಗಿ ನಾನು ಖಜಾನೆ ಲೂಟಿ ಮಾಡಲಿಲ್ಲ, ಕೇಳಿದಾಗಲೆಲ್ಲ ₹ 50 ಲಕ್ಷ, ₹ 1 ಕೋಟಿ ಕೊಡುವ ಕಾರ್ಯಕರ್ತರು ಇದ್ದಾರೆ. ಅವರಿಂದ ಪಕ್ಷದ ಚಟುವಟಿಕೆಗಳು ನಡೆಯುತ್ತವೆ. ನನ್ನ ಅನುಯಾಯಿಗಳನ್ನು ಸಾಕು ನಾಯಿಗಳು ಎಂದು ಕರೆದಿದ್ದೀರಿ, ಹಾಗೆಯೇ ನಿಮ್ಮನ್ನು ಹುಚ್ಚು ನಾಯಿಗಳು ಎಂದು ಕರೆಯಬೇಕೇ?’ ಎಂದು ಕೇಳಿದರು.</p>.<p><strong>ಸಿದ್ದರಾಮಯ್ಯಗೆ ತಿರುಗೇಟು:</strong> ‘ತಮ್ಮ ಯೋಜನೆಗಳನ್ನು ಮುಂದುವರಿಸಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ನನ್ನ ಬಗ್ಗೆ ಚಿಂತೆ ಮಾಡಬೇಡಿ, ಅದು ಆಗಿ ಹೋಯಿತಲ್ಲ, ನೀವು ಹಣ ಇಡದೇ ಕೇವಲ ಯೋಜನೆಗಳನ್ನು ಘೋಷಣೆ ಮಾಡಿದ್ದಿರಿ, ನಾನು ಅದಕ್ಕೆ ಎಲ್ಲಿಂದ ದುಡ್ಡು ತರಬೇಕಿತ್ತು?’ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.</p>.<p>ಫೆಬ್ರುವರಿ ಮೊದಲ ವಾರ ಇಲ್ಲಿ ಮಹಿಳಾ ಸಮಾವೇಶ ನಡೆಯಲಿದೆ, ಫೆ.10 ಮತ್ತು 11ರಂದು ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.</p>.<p><strong>ಪ್ರತಿಭಟನೆ:</strong> ಸಿಎಎ ವಿರೋಧಿಸಿ ನಗರದ ಪುರಭವನದ ಬಳಿ ಶುಕ್ರವಾರ ಸಂಜೆ 3.30ರಿಂದ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಹೇಳಿದರು.</p>.<p><strong>ಮೂರು ನಿರ್ಣಯಗಳು</strong><br />ಪೌರತ್ವ (ತಿದ್ದುಪಡಿ) ಕಾಯ್ದೆ ಹಿಂಪಡೆಯಬೇಕು, ನೆರೆ ಪರಿಹಾರ ಕಾರ್ಯ ಅಸಮರ್ಪಕವಾಗಿದ್ದು, ತಕ್ಷಣ ₹ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು, ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದು, ಇದರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು ಹಾಗೂ ಈ ಮೂರೂ ವಿಷಯಗಳ ಬಗ್ಗೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>