ಅಧಿವೇಶನ ಮೊದಲ ದಿನವಾದ ಸೋಮವಾರ ಬೆಳಿಗ್ಗೆ 10 ಗಂಟೆಯಿಂದಲೇ ಶಾಸಕರು, ಸಚಿವರು ವಿಧಾನಸೌಧಕ್ಕೆ ಬರಲಾರಂಭಿಸಿದ್ದು, ವಿಧಾನಸೌಧದಲ್ಲಿ ಹಬ್ಬದ ಕಳೆ ಕಟ್ಟಿತ್ತು. ವಿಧಾನಸೌಧದ ಪೂರ್ವ ದಿಕ್ಕಿನಿಂದ ಬಹುತೇಕ ವಿರೋಧ ಪಕ್ಷದ ಸದಸ್ಯರು ಬಂದಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜತೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬಂದುದು ಗಮನ ಸೆಳೆಯಿತು.