<p><strong>ಬೆಂಗಳೂರು</strong>: ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿರುವ ಬೆನ್ನಲ್ಲೇ, ಫೆಬ್ರುವರಿ 1ರಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯ ಬರೆಯೂ ಬೀಳಲಿದೆ.</p>.<p>ಪ್ರತಿ ಲೀಟರ್ ಹಾಲಿನ ದರವನ್ನು ₹2 ಹೆಚ್ಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೇ, ಹೋಟೆಲ್ ಮಾಲೀಕರು ಕಾಫಿ ಮತ್ತು ಟೀ ದರ ಪರಿಷ್ಕರಿಸಲು ಮುಂದಾಗಿದ್ದಾರೆ.</p>.<p>ಹೆಚ್ಚಳವಾದ ₹2ರಲ್ಲಿ 40 ಪೈಸೆಯನ್ನು ಇಡುಗಂಟನ್ನಾಗಿ ಮಾಡಿ, ರೈತರ ಮನೆಗಳಲ್ಲಿರುವ ಉತ್ತಮ ತಳಿಯ12 ಲಕ್ಷ ಹಸುಗಳು ಮತ್ತು ಎಮ್ಮೆಗಳಿಗೆ ತಲಾ ₹50 ಸಾವಿರ ಮೊತ್ತದ ವಿಮೆ ಮಾಡಿಸಲಾಗುವುದು. ವಿಮಾ ಕಂತಿನ ಶೇ 75ರಷ್ಟು ಪಾಲನ್ನು ಈ ಹಣದಲ್ಲಿ ಭರಿಸಲಾಗುವುದು ಎಂದು ಕೆಎಂಎಫ್ ತಿಳಿಸಿದೆ.</p>.<p>‘ಹಾಲು ಮಾರಾಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಲೀಟರ್ಗೆ 40 ಪೈಸೆ ಕಮಿಷನ್ ಹೆಚ್ಚಿಸಲಾಗುವುದು. ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗೆ ನೀಡುತ್ತಿರುವ ಪ್ರೊತ್ಸಾಹಧನವನ್ನು ಲೀಟರ್ಗೆ 20 ಪೈಸೆ ಹೆಚ್ಚಿಸಲಾಗುವುದು. ಉಳಿದ ₹1 ಅನ್ನು ಜಿಲ್ಲಾ ಹಾಲು ಒಕ್ಕೂಟಗಳ ಆರ್ಥಿಕತೆಗೆ ಅನುಗುಣವಾಗಿ ಹಾಲು ಉತ್ಪಾದಕರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.</p>.<p>‘ಹಳೆಯ ದರದ ಹಾಲಿನ ಪ್ಯಾಕೇಟುಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿವೆ. ಇವು ಖಾಲಿಯಾಗುವ ತನ ಪ್ಯಾಕೇಟ್ ಮೇಲೆ ಹಳೆಯ ದರ ಇರುತ್ತದೆ. ಗ್ರಾಹಕರು ಹೊಸ ದರದಲ್ಲಿ ಖರೀದಿಸಬೇಕು. ಕೇರಳ, ದೆಹಲಿ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿಗೆ ಹೋಲಿಸಿದರೆ ರಾಜ್ಯದಲ್ಲಿ ದರ ಕಡಿಮೆ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿರುವ ಬೆನ್ನಲ್ಲೇ, ಫೆಬ್ರುವರಿ 1ರಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯ ಬರೆಯೂ ಬೀಳಲಿದೆ.</p>.<p>ಪ್ರತಿ ಲೀಟರ್ ಹಾಲಿನ ದರವನ್ನು ₹2 ಹೆಚ್ಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೇ, ಹೋಟೆಲ್ ಮಾಲೀಕರು ಕಾಫಿ ಮತ್ತು ಟೀ ದರ ಪರಿಷ್ಕರಿಸಲು ಮುಂದಾಗಿದ್ದಾರೆ.</p>.<p>ಹೆಚ್ಚಳವಾದ ₹2ರಲ್ಲಿ 40 ಪೈಸೆಯನ್ನು ಇಡುಗಂಟನ್ನಾಗಿ ಮಾಡಿ, ರೈತರ ಮನೆಗಳಲ್ಲಿರುವ ಉತ್ತಮ ತಳಿಯ12 ಲಕ್ಷ ಹಸುಗಳು ಮತ್ತು ಎಮ್ಮೆಗಳಿಗೆ ತಲಾ ₹50 ಸಾವಿರ ಮೊತ್ತದ ವಿಮೆ ಮಾಡಿಸಲಾಗುವುದು. ವಿಮಾ ಕಂತಿನ ಶೇ 75ರಷ್ಟು ಪಾಲನ್ನು ಈ ಹಣದಲ್ಲಿ ಭರಿಸಲಾಗುವುದು ಎಂದು ಕೆಎಂಎಫ್ ತಿಳಿಸಿದೆ.</p>.<p>‘ಹಾಲು ಮಾರಾಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಲೀಟರ್ಗೆ 40 ಪೈಸೆ ಕಮಿಷನ್ ಹೆಚ್ಚಿಸಲಾಗುವುದು. ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗೆ ನೀಡುತ್ತಿರುವ ಪ್ರೊತ್ಸಾಹಧನವನ್ನು ಲೀಟರ್ಗೆ 20 ಪೈಸೆ ಹೆಚ್ಚಿಸಲಾಗುವುದು. ಉಳಿದ ₹1 ಅನ್ನು ಜಿಲ್ಲಾ ಹಾಲು ಒಕ್ಕೂಟಗಳ ಆರ್ಥಿಕತೆಗೆ ಅನುಗುಣವಾಗಿ ಹಾಲು ಉತ್ಪಾದಕರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.</p>.<p>‘ಹಳೆಯ ದರದ ಹಾಲಿನ ಪ್ಯಾಕೇಟುಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿವೆ. ಇವು ಖಾಲಿಯಾಗುವ ತನ ಪ್ಯಾಕೇಟ್ ಮೇಲೆ ಹಳೆಯ ದರ ಇರುತ್ತದೆ. ಗ್ರಾಹಕರು ಹೊಸ ದರದಲ್ಲಿ ಖರೀದಿಸಬೇಕು. ಕೇರಳ, ದೆಹಲಿ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿಗೆ ಹೋಲಿಸಿದರೆ ರಾಜ್ಯದಲ್ಲಿ ದರ ಕಡಿಮೆ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>