‘ಉದ್ಯಮಿ ಸಿದ್ಧಾರ್ಥ ಅವರು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಎಂಬುದು ಒಳ್ಳೆಯ ಸಂಗತಿ. ಆದರೆ ಭ್ರಷ್ಟಾಚಾರ, ಭೂ ಕಬಳಿಕೆ ಮಾಡಿದ್ದು ಕ್ಷಮಿಸಲಾರದ ತಪ್ಪು. ಕೊಲೊಕೇಷನ್, ಡಾರ್ಕ್ ಫೈಬರ್ ಹಗರಣ ಕನಿಷ್ಠ ₹50ಸಾವಿರ ಕೋಟಿ ಮೊತ್ತದ್ದಾಗಿದೆ. ಇವೆಲ್ಲದರ ಸತ್ಯವನ್ನು ಬಯಲಿಗೆ ತರುವ ಅಗತ್ಯವಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.