<p><strong>ಕೊಪ್ಪಳ: </strong>ಸಮಾಜದಲ್ಲಿಸೌಹಾರ್ದ ಬೆಸೆಯಲು ನಗರದ ಜಮಾತೆ-ಎ- ಇಸ್ಲಾಮಿಯಾ ಹಿಂದ್ಸಂಘಟನೆಯು ಎಲ್ಲ ಧರ್ಮೀಯರಿಗೂ ‘ಮಸೀದಿ ಸಂದರ್ಶನ’ ಮತ್ತು ‘ಪ್ರವಾದಿ ಮಹಮ್ಮದ್ (ಸ) ಎಲ್ಲರಿಗಾಗಿ’ ಎಂಬ ವಿನೂತನ ಕಾರ್ಯಕ್ರಮವನ್ನು ಡಿ.8ರಂದು ಹಮ್ಮಿಕೊಂಡಿದೆ.</p>.<p>ನಗರದ ರೈಲು ನಿಲ್ದಾಣ ರಸ್ತೆಯ ‘ಮಸ್ಜೀದ್-ಎ- ಅಲಾ’ ದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅನ್ಯ ಧರ್ಮೀಯರು ಮಧ್ಯಾಹ್ನದ ‘ಜೋಹರ್’, ಸಂಜೆಯ ‘ಆಸರ್’ ನಮಾಜ್ ವೀಕ್ಷಿಸಬಹುದು. ವಿಶೇಷವೆಂದರೆ ಈ ಮಸೀದಿಯಲ್ಲಿ ಮಹಿಳೆಯರಿಗೂ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ನೇರ ಪ್ರಾರ್ಥನೆ, ಇಸ್ಲಾಂ ಬಗ್ಗೆ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ.</p>.<p>ಮಸೀದಿಯಲ್ಲಿ 20 ನಿಮಿಷ ಪ್ರಾರ್ಥನೆ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು, ಉಜು (ಸ್ವಚ್ಛ ಮಾಡಿಕೊಳ್ಳುವುದು), ಪ್ರಾರ್ಥನೆಯ ವಿಧಿ, ವಿಧಾನ ಅರಿಯಬಹುದು. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಎಲ್ಲ ಧರ್ಮೀಯರು ಭೇಟಿ ನೀಡಬಹುದು.</p>.<p>ಮಸೀದಿ ಒಳಭಾಗದ ವೀಕ್ಷಣೆಗೆ ಅವಕಾಶ ಕಲ್ಪಿಸುವ ಮೂಲಕ ಪರಸ್ಪರರ ನಡುವೆ ಇರುವ ಅಪನಂಬಿಕೆ ದೂರ ಮಾಡುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮಕ್ಕೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡುವರು.</p>.<p>ಇಸ್ಲಾಂ ಧರ್ಮ ಕುರಿತು ತಿಳಿವಳಿಕೆ ಹೆಚ್ಚಿಸಲು ಮಕ್ಕಳಿಗಾಗಿ‘ಎಲ್ಲರಿಗಾಗಿ ಮಹಮ್ಮದ್’ ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.</p>.<p>‘ಪ್ರಸ್ತುತದಲ್ಲಿ ಸಮಾಜ ಒಡೆಯುವ ಮನಸ್ಸುಗಳು ಹೆಚ್ಚಾಗಿವೆ. ಪರಸ್ಪರರನ್ನು ಅರಿಯಲು, ಸೌಹಾರ್ದ ಸಮಾಜ ಕಟ್ಟಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟನೆಯ ಅಧ್ಯಕ್ಷ ಸುಕೂರ್ ಸಾಬ್ ಹೇಳಿದರು.</p>.<p>‘ಸಮಾನಮನಸ್ಕ ಪ್ರಗತಿಪರ ಕೆಲ ಗೆಳೆಯರು ಜೊತೆಗೂಡಿ ಇಂಥಕಾರ್ಯಕ್ರಮವನ್ನು ಮಸೀದಿಯಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದೇವೆ. ಎಲ್ಲ ಮಸೀದಿಗಳಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು ಎಂಬುವುದು ನಮ್ಮ ಒತ್ತಾಸೆ’ ಎಂದು ತಿಳಿಸಿದರು.</p>.<p>ಇಳಕಲ್ನ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಅವರು ಬಹಿರಂಗಸಭೆಯ ಅಧ್ಯಕ್ಷತೆ ವಹಿಸಿ, ‘ಸೌಹಾರ್ದ’ ಕುರಿತು ಉಪನ್ಯಾಸ ನೀಡುವರು. ಶಾಂತಿ ಪ್ರಕಾಶನದ ಮಹಮ್ಮದ್ ಕುಂಞ ಪಾಲ್ಗೊಳ್ಳುವರು.</p>.<p><strong>***</strong></p>.<p>ಪರಸ್ಪರರು ಅಪನಂಬಿಕೆಯಿಂದ ಹೊರಬಂದು ಸೌಹಾರ್ದದಿಂದ ಬಾಳಬೇಕು. ಈ ಹಿನ್ನೆಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ</p>.<p><strong>– ಎಂ.ಎ.ಸುಕೂರ್ ಸಾಬ್, ಅಧ್ಯಕ್ಷ, ಜಮಾತೆ-ಎ-ಇಸ್ಲಾಮಿಯಾ ಹಿಂದ್ ಸಂಘಟನೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಸಮಾಜದಲ್ಲಿಸೌಹಾರ್ದ ಬೆಸೆಯಲು ನಗರದ ಜಮಾತೆ-ಎ- ಇಸ್ಲಾಮಿಯಾ ಹಿಂದ್ಸಂಘಟನೆಯು ಎಲ್ಲ ಧರ್ಮೀಯರಿಗೂ ‘ಮಸೀದಿ ಸಂದರ್ಶನ’ ಮತ್ತು ‘ಪ್ರವಾದಿ ಮಹಮ್ಮದ್ (ಸ) ಎಲ್ಲರಿಗಾಗಿ’ ಎಂಬ ವಿನೂತನ ಕಾರ್ಯಕ್ರಮವನ್ನು ಡಿ.8ರಂದು ಹಮ್ಮಿಕೊಂಡಿದೆ.</p>.<p>ನಗರದ ರೈಲು ನಿಲ್ದಾಣ ರಸ್ತೆಯ ‘ಮಸ್ಜೀದ್-ಎ- ಅಲಾ’ ದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅನ್ಯ ಧರ್ಮೀಯರು ಮಧ್ಯಾಹ್ನದ ‘ಜೋಹರ್’, ಸಂಜೆಯ ‘ಆಸರ್’ ನಮಾಜ್ ವೀಕ್ಷಿಸಬಹುದು. ವಿಶೇಷವೆಂದರೆ ಈ ಮಸೀದಿಯಲ್ಲಿ ಮಹಿಳೆಯರಿಗೂ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ನೇರ ಪ್ರಾರ್ಥನೆ, ಇಸ್ಲಾಂ ಬಗ್ಗೆ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ.</p>.<p>ಮಸೀದಿಯಲ್ಲಿ 20 ನಿಮಿಷ ಪ್ರಾರ್ಥನೆ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು, ಉಜು (ಸ್ವಚ್ಛ ಮಾಡಿಕೊಳ್ಳುವುದು), ಪ್ರಾರ್ಥನೆಯ ವಿಧಿ, ವಿಧಾನ ಅರಿಯಬಹುದು. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಎಲ್ಲ ಧರ್ಮೀಯರು ಭೇಟಿ ನೀಡಬಹುದು.</p>.<p>ಮಸೀದಿ ಒಳಭಾಗದ ವೀಕ್ಷಣೆಗೆ ಅವಕಾಶ ಕಲ್ಪಿಸುವ ಮೂಲಕ ಪರಸ್ಪರರ ನಡುವೆ ಇರುವ ಅಪನಂಬಿಕೆ ದೂರ ಮಾಡುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮಕ್ಕೆ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡುವರು.</p>.<p>ಇಸ್ಲಾಂ ಧರ್ಮ ಕುರಿತು ತಿಳಿವಳಿಕೆ ಹೆಚ್ಚಿಸಲು ಮಕ್ಕಳಿಗಾಗಿ‘ಎಲ್ಲರಿಗಾಗಿ ಮಹಮ್ಮದ್’ ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.</p>.<p>‘ಪ್ರಸ್ತುತದಲ್ಲಿ ಸಮಾಜ ಒಡೆಯುವ ಮನಸ್ಸುಗಳು ಹೆಚ್ಚಾಗಿವೆ. ಪರಸ್ಪರರನ್ನು ಅರಿಯಲು, ಸೌಹಾರ್ದ ಸಮಾಜ ಕಟ್ಟಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟನೆಯ ಅಧ್ಯಕ್ಷ ಸುಕೂರ್ ಸಾಬ್ ಹೇಳಿದರು.</p>.<p>‘ಸಮಾನಮನಸ್ಕ ಪ್ರಗತಿಪರ ಕೆಲ ಗೆಳೆಯರು ಜೊತೆಗೂಡಿ ಇಂಥಕಾರ್ಯಕ್ರಮವನ್ನು ಮಸೀದಿಯಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದೇವೆ. ಎಲ್ಲ ಮಸೀದಿಗಳಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು ಎಂಬುವುದು ನಮ್ಮ ಒತ್ತಾಸೆ’ ಎಂದು ತಿಳಿಸಿದರು.</p>.<p>ಇಳಕಲ್ನ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಅವರು ಬಹಿರಂಗಸಭೆಯ ಅಧ್ಯಕ್ಷತೆ ವಹಿಸಿ, ‘ಸೌಹಾರ್ದ’ ಕುರಿತು ಉಪನ್ಯಾಸ ನೀಡುವರು. ಶಾಂತಿ ಪ್ರಕಾಶನದ ಮಹಮ್ಮದ್ ಕುಂಞ ಪಾಲ್ಗೊಳ್ಳುವರು.</p>.<p><strong>***</strong></p>.<p>ಪರಸ್ಪರರು ಅಪನಂಬಿಕೆಯಿಂದ ಹೊರಬಂದು ಸೌಹಾರ್ದದಿಂದ ಬಾಳಬೇಕು. ಈ ಹಿನ್ನೆಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ</p>.<p><strong>– ಎಂ.ಎ.ಸುಕೂರ್ ಸಾಬ್, ಅಧ್ಯಕ್ಷ, ಜಮಾತೆ-ಎ-ಇಸ್ಲಾಮಿಯಾ ಹಿಂದ್ ಸಂಘಟನೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>