ಘಟನೆ ವಿವರ: ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಳಿ, ಮಳೆಗೆ ಸಮೀಪದ ತೋಟದಿಂದ ಮುರಿದು ಬಿದ್ದ ರೆಂಬೆ ನೌಶದ್ ಅವರ ಮನೆಯ ಮೇಲೆ ಬಿದ್ದಿದ್ದು, ರಹನತ್ ಅವರು ಸ್ಥಳದಲ್ಲಿಯೇ ಸಾವನಪ್ಪಿದರು. ನೌಶದ್ ಅವರ ಬಲಗೈಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಜೊತೆಯಲ್ಲಿದ್ದ ಮಗು ಕೂಡ ಅದೃಷ್ಟವಶಾತ್ ಪಾರಾಗಿದೆ. ಸ್ಥಳೀಯರು ಕುಟುಂಬದ ಸದಸ್ಯರನ್ನು ಸಂತೈಸಿದರು ತೋಟದ ಮಾಲೀಕನ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.