<p><strong>ಬೆಳಗಾವಿ:</strong> ನೀರಾವರಿ ಪಂಪ್ಸೆಟ್ಗಳಿಗೆ ದಿನಕ್ಕೆ 10ರಿಂದ 11 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.</p>.<p>ಬಿ.ಎಸ್.ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ, ‘ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಕೊಳವೆಬಾವಿಗಳ ನೀರನ್ನು ಬಳಸಿ ಜನರು ಕೃಷಿ ಮಾಡಲು ಅನುವು ಮಾಡಿಕೊಡಿ’ ಎಂದು ಮನವಿ ಮಾಡಿದರು.</p>.<p>ಕುಮಾರಸ್ವಾಮಿ, ‘ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಿದ್ಧರಿದ್ದೇವೆ. ನಿರಂತರ ವಿದ್ಯುತ್ ಕೊಡಬೇಡಿ ಎಂದು ಜನರೇ ಮನವಿ ಮಾಡಿದ್ದಾರೆ. ನಾಲ್ಕೈದು ಗಂಟೆಯಂತೆ ದಿನಕ್ಕೆ ಎರಡು ಸಲ ಪೂರೈಕೆ ಮಾಡಿದರೆ ಕೊಳವೆಬಾವಿಗಳು ಬತ್ತಿ ಹೋಗಲ್ಲ ಎಂದು ಹೇಳಿದ್ದಾರೆ’ ಎಂದರು.</p>.<p><strong>ಯು.ಟಿ.ಖಾದರ್ ಸಿಎಂ ಕಚೇರಿ ಹುಡುಕಲು ಪ್ರಯಾಸ...</strong></p>.<p>ಬೆಳಗಾವಿ: ಇಲ್ಲಿ ಸುವರ್ಣ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಚೇರಿಯನ್ನು ಹುಡುಕಲು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಪ್ರಯಾಸಪಟ್ಟರು.</p>.<p>ಮೂರನೇ ಮಹಡಿಯಲ್ಲಿರುವ 346 ಸಂಖ್ಯೆಯ ಈ ಕೊಠಡಿಯನ್ನು ಪತ್ತೆ ಹಚ್ಚಲು ಸುಮಾರು 15 ನಿಮಿಷ ತಿರುಗಾಡಿದರು. ‘ಮುಖ್ಯಮಂತ್ರಿ ಕಚೇರಿ ಎಲ್ಲಿ’ ಎಂದು ಹಲವರಲ್ಲಿ ಪ್ರಶ್ನಿಸಿದರು. ‘ಈ ಕಟ್ಟಡದ ವಿನ್ಯಾಸ ದಿಕ್ಕು ತಪ್ಪಿಸುವಂತಿದೆ’ ಎಂದು ಗೊಣಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ನೀರಾವರಿ ಪಂಪ್ಸೆಟ್ಗಳಿಗೆ ದಿನಕ್ಕೆ 10ರಿಂದ 11 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.</p>.<p>ಬಿ.ಎಸ್.ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ, ‘ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಕೊಳವೆಬಾವಿಗಳ ನೀರನ್ನು ಬಳಸಿ ಜನರು ಕೃಷಿ ಮಾಡಲು ಅನುವು ಮಾಡಿಕೊಡಿ’ ಎಂದು ಮನವಿ ಮಾಡಿದರು.</p>.<p>ಕುಮಾರಸ್ವಾಮಿ, ‘ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಿದ್ಧರಿದ್ದೇವೆ. ನಿರಂತರ ವಿದ್ಯುತ್ ಕೊಡಬೇಡಿ ಎಂದು ಜನರೇ ಮನವಿ ಮಾಡಿದ್ದಾರೆ. ನಾಲ್ಕೈದು ಗಂಟೆಯಂತೆ ದಿನಕ್ಕೆ ಎರಡು ಸಲ ಪೂರೈಕೆ ಮಾಡಿದರೆ ಕೊಳವೆಬಾವಿಗಳು ಬತ್ತಿ ಹೋಗಲ್ಲ ಎಂದು ಹೇಳಿದ್ದಾರೆ’ ಎಂದರು.</p>.<p><strong>ಯು.ಟಿ.ಖಾದರ್ ಸಿಎಂ ಕಚೇರಿ ಹುಡುಕಲು ಪ್ರಯಾಸ...</strong></p>.<p>ಬೆಳಗಾವಿ: ಇಲ್ಲಿ ಸುವರ್ಣ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಚೇರಿಯನ್ನು ಹುಡುಕಲು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಪ್ರಯಾಸಪಟ್ಟರು.</p>.<p>ಮೂರನೇ ಮಹಡಿಯಲ್ಲಿರುವ 346 ಸಂಖ್ಯೆಯ ಈ ಕೊಠಡಿಯನ್ನು ಪತ್ತೆ ಹಚ್ಚಲು ಸುಮಾರು 15 ನಿಮಿಷ ತಿರುಗಾಡಿದರು. ‘ಮುಖ್ಯಮಂತ್ರಿ ಕಚೇರಿ ಎಲ್ಲಿ’ ಎಂದು ಹಲವರಲ್ಲಿ ಪ್ರಶ್ನಿಸಿದರು. ‘ಈ ಕಟ್ಟಡದ ವಿನ್ಯಾಸ ದಿಕ್ಕು ತಪ್ಪಿಸುವಂತಿದೆ’ ಎಂದು ಗೊಣಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>