ಬೋರ್ಡ್ ಆಫ್ ಹೋಮಿಯೋಪಥಿ ಸಿಸ್ಟಮ್ ಆಫ್ ಮೆಡಿಸಿನ್ನ (ಬಿಎಚ್ಎಸ್ಎಮ್) ಅಧ್ಯಕ್ಷ ಡಾ.ಬಿ.ಟಿ. ರುದ್ರೇಶ್ ನೇತೃತ್ವದ ವೈದ್ಯರ ತಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿಹೋಮಿಯೋಪಥಿ ಔಷಧಿ ಹೇಗೆ ನೆರವಾಗಲಿದೆ ಎಂಬುದನ್ನು ವಿವರಿಸಿತು. ಇದೇ ವೇಳೆ ಬಿ.ಟಿ. ರುದ್ರೇಶ್ ಅವರು ಯಡಿಯೂರಪ್ಪ ಅವರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿ ಮಾತ್ರೆಗಳನ್ನು ವಿತರಿಸಿದರು.