ಕಾಂಗ್ರೆಸ್ನಲ್ಲೂ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ. ಬಿ.ಕೆ.ಹರಿಪ್ರಸಾದ್, ವಿ.ಎಸ್.ಉಗ್ರಪ್ಪ, ರಾಜೀವ್ಗೌಡ ಅವರ ಸಾಲಿಗೆ ಇದೀಗ ಮಲ್ಲಿಕಾರ್ಜುನ ಖರ್ಗೆಯವರ ಹೆಸರೂ ಸೇರಿದೆ. ಉಗ್ರಪ್ಪ ಅವರನ್ನು ರಾಜ್ಯಸಭೆಗೆ ಕಳಿಸಬೇಕು ಎಂಬುದು ಸಿದ್ದರಾಮಯ್ಯ ಅವರ ಇಚ್ಛೆ. ಆದರೆ, ಖರ್ಗೆ ಮುಂದೆ ಬಂದರೆ, ಅವರಿಗೆ ಸಿದ್ದರಾಮಯ್ಯ ಅಡ್ಡಿಪಡಿ ಸುವುದಿಲ್ಲಎಂದು ಹೇಳಲಾಗುತ್ತಿದೆ.