ಬೆಂಗಳೂರು: ‘ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಇನ್ನು ಮುಂದೆ ದೂರವಾಣಿ ಅಥವಾ ಮೊಬೈಲ್ ಕರೆ ಸ್ವೀಕರಿಸಿದಾಗ ‘ಹಲೋ’ ಎನ್ನುವ ಬದಲು ‘ಜೈ ಕಿಸಾನ್’ ಎನ್ನಬೇಕು. ಇದು, ಜಗತ್ತಿಗೆ ಅನ್ನದಾತನ ಶಕ್ತಿಯನ್ನು ಸಾರುವ ಸಾಮಾಜಿಕ ಆಂದೋಲನವಾಗಬೇಕು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.