ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಡಿಕ್ಕಿ: ಒಂದು ಜಿಂಕೆ ಮೃತಪಟ್ಟಿದ್ದನ್ನು ಕಂಡು ಮತ್ತೊಂದಕ್ಕೆ ಹೃದಯಾಘಾತ

Last Updated 4 ಅಕ್ಟೋಬರ್ 2019, 13:24 IST
ಅಕ್ಷರ ಗಾತ್ರ

ಕಾರವಾರ: ದಾಂಡೇಲಿಯ ಅಂಬೇವಾಡಿರೈಲ್ವೆ ಗೇಟ್ ಬಳಿ ಶುಕ್ರವಾರ ಬೆನ್ನತ್ತಿ ಬಂದ ನಾಯಿಗಳಿಂದ ತಪ್ಪಿಸಿಕೊಂಡ ಎರಡು ಜಿಂಕೆಗಳು ಕಾರು ಡಿಕ್ಕಿಯಾಗಿ ಮೃತಪಟ್ಟಿವೆ.

ಒಂದು ಜಿಂಕೆ ಕಾರಿನ ಕೆಳಗೆ ಬಿದ್ದು ಸತ್ತರೆ, ಮತ್ತೊಂದು ಅದನ್ನು ನೋಡಿ ಹೃದಯಾಘಾತವಾಗಿ ಪ್ರಾಣಬಿಟ್ಟಿತು.ಈ ಸಂಬಂಧ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಸಮೀರ್ ಮುಲ್ಲಾ ಪ್ರಯಾಣಿಸುತ್ತಿದ್ದ ಬಾಡಿಗೆಕಾರಿನಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

‘ಅಂಬೇವಾಡಿ ಸಮೀಪಇಳಿಜಾರಿನಲ್ಲಿಜಿಂಕೆಗಳನ್ನು ನಾಯಿಗಳ ಹಿಂಡು ಅಟ್ಟಿಸಿಕೊಂಡು ಬಂದಿತ್ತು. ಅವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಜಿಂಕೆಗಳು ಏಕಾಏಕಿ ರಸ್ತೆಗೆ ಧಾವಿಸಿದವು. ಆಗ ಒಂದು ಜಿಂಕೆಗೆ ಕಾರು ಡಿಕ್ಕಿಯಾಯಿತು. ಜಿಂಕೆಯ ಹೃದಯ ಅತ್ಯಂತ ಸೂಕ್ಷ್ಮವಾಗಿರುತ್ತದೆ. ತನ್ನ ಜೊತೆಗಿದ್ದ ಜಿಂಕೆ ಮೃತಪಟ್ಟಿದ್ದನ್ನು ನೋಡಿದ ಮತ್ತೊಂದಕ್ಕೆ ಹೃದಯಾಘಾತವಾಯಿತು’ ಎಂದು ದಾಂಡೇಲಿಯ ವಲಯ ಅರಣ್ಯಾಧಿಕಾರಿ ಅಶೋಕ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಂಕೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕಾರು ಚಾಲಕ ಸಂಜೀವಕುಮಾರ್‌ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT