<p><strong>ಚಿತ್ರದುರ್ಗ:</strong> ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿಯ ರೈತ ಮಹಿಳೆ ವಸಂತಕುಮಾರಿ ಬೆಳೆದ ಈರುಳ್ಳಿ ಬುಧವಾರ ಮಾರಾಟವಾಯಿತು. ಉಡುಪಿ ಜಿಲ್ಲೆಯ ಬ್ರಹ್ಮಾವರದ ವ್ಯಾಪಾರಿಗಳು ಈರುಳ್ಳಿ ಖರೀದಿಸಿ ಮಹಿಳೆ ಸಂಕಷ್ಟವನ್ನು ಪರಿಹರಿಸಿದರು.</p>.<p>ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಈರುಳ್ಳಿ ಬೆಲೆ ನಿಗದಿಪಡಿಸಲಾಯಿತು. ಮಧ್ಯಮ ಗುಣಮಟ್ಟದ ಈರುಳ್ಳಿಯ 60 ಕೆ.ಜಿ ತೂಕದ ಚೀಲಕ್ಕೆ ₹ 600ದರ ನೀಡಲು ವ್ಯಾಪಾರಿಗಳು ಒಪ್ಪಿದರು. ಖರೀದಿದಾರರೇ ಸಾಗಣೆ ವೆಚ್ಚ ಭರಿಸಿದ್ದರಿಂದ ವಸಂತಕುಮಾರಿ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ಐದು ಎಕರೆಯಲ್ಲಿ ಬೆಳೆದ ಈರುಳ್ಳಿ ಕೀಳುವ ಮೊದಲೇ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಮಾರುಕಟ್ಟೆ ಸಮಸ್ಯೆ ಎದುರಾಗಿತ್ತು. ಮಾರುಕಟ್ಟೆಗೆ ಸಾಗಿಸಲು ಹಣವಿಲ್ಲದೇ ಕುಟುಂಬ ಕಂಗಾಲಾಗಿತ್ತು. ಈ ಸಂಕಷ್ಟದ ವಿಡಿಯೊವನ್ನು ಮಹಿಳೆ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುದ್ದು ಕರೆ ಮಾಡಿ ಈರುಳ್ಳಿಗೆ ಮಾರುಕಟ್ಟೆ ಒದಗಿಸುವ ಆಶ್ವಾಸನೆ ನೀಡಿದ್ದರು.</p>.<p>‘ನಿರೀಕ್ಷಿತ ಬೆಲೆ ಸಿಗದೇ ಇದ್ದರೂ ನ್ಯಾಯಯುತ ದರಕ್ಕೆ ಮಾರಾಟವಾಗುತ್ತಿದೆ. ಬೆಳೆಗೆ ತಗುಲಿದ ವೆಚ್ಚವಾದರೂ ಸಿಕ್ಕರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಮಾರಾಟಕ್ಕೆ ಒಪ್ಪಿಕೊಂಡಿದ್ದೇವೆ’ ಎಂದರು ವಸಂತಕುಮಾರಿ.</p>.<p>180 ಚೀಲ ಈರುಳ್ಳಿಗೆ ₹ 1.08 ಲಕ್ಷ ಆದಾಯ ಸಿಕ್ಕಿತು. ಬ್ರಹ್ಮಾವರದ ಸುರೇಶ ನಾಯ್ಕ ಹಾಗೂ ಚೈತನ್ಯ ಎಂಬುವರು ಈರುಳ್ಳಿ ಖರೀದಿಸಿದರು. ಇದೇ ಗ್ರಾಮದಲ್ಲಿರುವ 50ಕ್ಕೂ ಹೆಚ್ಚು ರೈತರ 2,500 ಚೀಲ ಈರುಳ್ಳಿಯನ್ನು ಖರೀದಿಸಲು ಕೋಲಾರದ ವ್ಯಾಪಾರಿಗಳು ಮುಂದೆ ಬಂದಿದ್ದಾರೆ.</p>.<p><strong>ಇದನ್ನೂ ಓದಿ...<a href="https://cms.prajavani.net/technology/viral/viral-video-of-onion-grower-hiriyuru-723333.html" target="_blank">ವೈರಲ್ ವಿಡಿಯೊ | ರೈತ ಮಹಿಳೆ ಅಳಲಿಗೆ ಸ್ಪಂದಿಸಿದ ಸಿ.ಎಂ</a></strong></p>.<p><strong>ಕೊಳೆಯುತ್ತಿದೆ ಈರುಳ್ಳಿ</strong><br />ಮುಂಗಾರು ಹಂಗಾಮು ಈರುಳ್ಳಿಗೆ ಬಂಪರ್ ಬೆಲೆ ಸಿಕ್ಕಿದ್ದರಿಂದ ಬೇಸಿಗೆ ಹಂಗಾಮಿನಲ್ಲಿ ಅತಿ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದಾರೆ. ರೈತರ ಕೈಸೇರುವ ಮೊದಲೇ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಬಹುಪಾಲು ಈರುಳ್ಳಿ ರೈತರ ಜಮೀನು ಹಾಗೂ ಮನೆಯಲ್ಲಿ ಕೊಳೆಯುತ್ತಿದೆ.</p>.<p>ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಡಾ. ಸವಿತಾ ಅವರ ಪ್ರಕಾರ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 3,202 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. 64 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿಯ ರೈತ ಮಹಿಳೆ ವಸಂತಕುಮಾರಿ ಬೆಳೆದ ಈರುಳ್ಳಿ ಬುಧವಾರ ಮಾರಾಟವಾಯಿತು. ಉಡುಪಿ ಜಿಲ್ಲೆಯ ಬ್ರಹ್ಮಾವರದ ವ್ಯಾಪಾರಿಗಳು ಈರುಳ್ಳಿ ಖರೀದಿಸಿ ಮಹಿಳೆ ಸಂಕಷ್ಟವನ್ನು ಪರಿಹರಿಸಿದರು.</p>.<p>ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಈರುಳ್ಳಿ ಬೆಲೆ ನಿಗದಿಪಡಿಸಲಾಯಿತು. ಮಧ್ಯಮ ಗುಣಮಟ್ಟದ ಈರುಳ್ಳಿಯ 60 ಕೆ.ಜಿ ತೂಕದ ಚೀಲಕ್ಕೆ ₹ 600ದರ ನೀಡಲು ವ್ಯಾಪಾರಿಗಳು ಒಪ್ಪಿದರು. ಖರೀದಿದಾರರೇ ಸಾಗಣೆ ವೆಚ್ಚ ಭರಿಸಿದ್ದರಿಂದ ವಸಂತಕುಮಾರಿ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ಐದು ಎಕರೆಯಲ್ಲಿ ಬೆಳೆದ ಈರುಳ್ಳಿ ಕೀಳುವ ಮೊದಲೇ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಮಾರುಕಟ್ಟೆ ಸಮಸ್ಯೆ ಎದುರಾಗಿತ್ತು. ಮಾರುಕಟ್ಟೆಗೆ ಸಾಗಿಸಲು ಹಣವಿಲ್ಲದೇ ಕುಟುಂಬ ಕಂಗಾಲಾಗಿತ್ತು. ಈ ಸಂಕಷ್ಟದ ವಿಡಿಯೊವನ್ನು ಮಹಿಳೆ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುದ್ದು ಕರೆ ಮಾಡಿ ಈರುಳ್ಳಿಗೆ ಮಾರುಕಟ್ಟೆ ಒದಗಿಸುವ ಆಶ್ವಾಸನೆ ನೀಡಿದ್ದರು.</p>.<p>‘ನಿರೀಕ್ಷಿತ ಬೆಲೆ ಸಿಗದೇ ಇದ್ದರೂ ನ್ಯಾಯಯುತ ದರಕ್ಕೆ ಮಾರಾಟವಾಗುತ್ತಿದೆ. ಬೆಳೆಗೆ ತಗುಲಿದ ವೆಚ್ಚವಾದರೂ ಸಿಕ್ಕರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಮಾರಾಟಕ್ಕೆ ಒಪ್ಪಿಕೊಂಡಿದ್ದೇವೆ’ ಎಂದರು ವಸಂತಕುಮಾರಿ.</p>.<p>180 ಚೀಲ ಈರುಳ್ಳಿಗೆ ₹ 1.08 ಲಕ್ಷ ಆದಾಯ ಸಿಕ್ಕಿತು. ಬ್ರಹ್ಮಾವರದ ಸುರೇಶ ನಾಯ್ಕ ಹಾಗೂ ಚೈತನ್ಯ ಎಂಬುವರು ಈರುಳ್ಳಿ ಖರೀದಿಸಿದರು. ಇದೇ ಗ್ರಾಮದಲ್ಲಿರುವ 50ಕ್ಕೂ ಹೆಚ್ಚು ರೈತರ 2,500 ಚೀಲ ಈರುಳ್ಳಿಯನ್ನು ಖರೀದಿಸಲು ಕೋಲಾರದ ವ್ಯಾಪಾರಿಗಳು ಮುಂದೆ ಬಂದಿದ್ದಾರೆ.</p>.<p><strong>ಇದನ್ನೂ ಓದಿ...<a href="https://cms.prajavani.net/technology/viral/viral-video-of-onion-grower-hiriyuru-723333.html" target="_blank">ವೈರಲ್ ವಿಡಿಯೊ | ರೈತ ಮಹಿಳೆ ಅಳಲಿಗೆ ಸ್ಪಂದಿಸಿದ ಸಿ.ಎಂ</a></strong></p>.<p><strong>ಕೊಳೆಯುತ್ತಿದೆ ಈರುಳ್ಳಿ</strong><br />ಮುಂಗಾರು ಹಂಗಾಮು ಈರುಳ್ಳಿಗೆ ಬಂಪರ್ ಬೆಲೆ ಸಿಕ್ಕಿದ್ದರಿಂದ ಬೇಸಿಗೆ ಹಂಗಾಮಿನಲ್ಲಿ ಅತಿ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದಾರೆ. ರೈತರ ಕೈಸೇರುವ ಮೊದಲೇ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಬಹುಪಾಲು ಈರುಳ್ಳಿ ರೈತರ ಜಮೀನು ಹಾಗೂ ಮನೆಯಲ್ಲಿ ಕೊಳೆಯುತ್ತಿದೆ.</p>.<p>ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಡಾ. ಸವಿತಾ ಅವರ ಪ್ರಕಾರ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 3,202 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. 64 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>