ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದ ಮಂಡ್ಯ ಕ್ಷೇತ್ರದಲ್ಲಿ ನಿಜವಾಗಿಯೂ ಚಲಾವಣೆಯಾದ ಮತಕ್ಕಿಂತ 3,459 ಮತಗಳು ಎಣಿಕೆ ವೇಳೆ ಹೆಚ್ಚಾಗಿದ್ದುದು ಕಂಡುಬಂದಿತ್ತು. ರಾಯಚೂರಿನಲ್ಲಿ 5,721 ಮತಗಳು ಹೆಚ್ಚುವರಿಮತಗಳೆಂದು ದಾಖಲಾಗಿತ್ತು. ಬೆಳಗಾವಿ (4,208), ಶಿವಮೊಗ್ಗ (2,286) ಮತ್ತು ಧಾರವಾಡಗಳಲ್ಲಿ (2,242) ಸಹ ಮತಗಳು ತಾಳೆಯಾಗಿರಲಿಲ್ಲ.