<p><strong>ಬೆಂಗಳೂರು:</strong> ಕೋವಿಡ್ –19 ವಿರುದ್ಧದ ಸಮರಕ್ಕೆ ನೆರವಾಗಲು ಮುಂದಾಗಿರುವ ವಿಪ್ರೊ ಸಂಸ್ಥೆ ಮತ್ತು ಅಜೀಂ ಪ್ರೇಮ್ಜೀ ಫೌಂಡೇಷನ್, ಇದಕ್ಕಾಗಿ ₹1,125 ಕೋಟಿ ತೆಗೆದಿರಿಸಿದೆ.</p>.<p>ವಿಪ್ರೊ ಸಂಸ್ಥೆ ₹100 ಕೋಟಿ, ವಿಪ್ರೊ ಎಂಟರ್ಪ್ರೈಸಸ್ ₹25 ಕೋಟಿ ಮತ್ತು ಅಜೀಂ ಪ್ರೇಮ್ಜೀ ಫೌಂಡೇಶನ್ ₹1,000 ಕೋಟಿ ನೀಡಲಿದೆ. ವಾರ್ಷಿಕ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ಆರ್) ಹೊರತಾಗಿ ಈ ನೆರವು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.</p>.<p>ಈ ಕುರಿತ ಮಾಹಿತಿಯನ್ನು ವಿಪ್ರೊ ಸಂಸ್ಥೆಯ ಮುಖ್ಯಸ್ಥರಶೀದ್ ಪ್ರೇಮ್ಜೀ ಅವರು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.</p>.<p><strong>ಜೆಎಸ್ಎಸ್ನಿಂದ ₹ 50 ಲಕ್ಷ (ಮೈಸೂರು):</strong> ಕೋವಿಡ್ 19 ಪರಿಹಾರ ಕಾರ್ಯಗಳಿಗೆ ಸುತ್ತೂರು ಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಮತ್ತು ಜೆಎಸ್ಎಸ್ ಸಂಸ್ಥೆಯ ನೌಕರರು ನೀಡಿರುವ ಮೊಬಲಗು ಸೇರಿಸಿ ₹ 50 ಲಕ್ಷ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.</p>.<p>ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಬುಧವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಚೆಕ್ ಹಸ್ತಾಂತರಿಸಿದರು.</p>.<p><strong>₹1 ಕೋಟಿ ಪರಿಹಾರ: ನವದೆಹಲಿ(ಪಿಟಿಐ): </strong>ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಸೋಂಕಿನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಘೋಷಿಸಿದ್ದಾರೆ.</p>.<p><strong>ಕೊರೊನಾ: ₹20 ಕೋಟಿ ನೆರವು ನೀಡಿದ ರಾಮೋಜಿ ರಾವ್<br />ಅಮರಾವತಿ (ಪಿಟಿಐ):</strong>ಕೊರೊನಾ ವೈರಸ್ ವಿರುದ್ಧದ ಹೋರಾಟದ ನೆರವಿಗಾಗಿಮಾಧ್ಯಮ ದೊರೆ ರಾಮೋಜಿ ರಾವ್ ಅವರು, ಆಂಧ್ರಪದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ₹10 ಕೋಟಿ ನೆರವು ನೀಡಿದ್ದಾರೆ.</p>.<p>ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಲಿದ್ದಾರೆ. ಜನರೂ ಈ ಸಮಸ್ಯೆಯಿಂದ ಹೊರಬರಲಿದ್ದಾರೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೋವಿಡ್ –19 ವಿರುದ್ಧದ ಸಮರಕ್ಕೆ ನೆರವಾಗಲು ಮುಂದಾಗಿರುವ ವಿಪ್ರೊ ಸಂಸ್ಥೆ ಮತ್ತು ಅಜೀಂ ಪ್ರೇಮ್ಜೀ ಫೌಂಡೇಷನ್, ಇದಕ್ಕಾಗಿ ₹1,125 ಕೋಟಿ ತೆಗೆದಿರಿಸಿದೆ.</p>.<p>ವಿಪ್ರೊ ಸಂಸ್ಥೆ ₹100 ಕೋಟಿ, ವಿಪ್ರೊ ಎಂಟರ್ಪ್ರೈಸಸ್ ₹25 ಕೋಟಿ ಮತ್ತು ಅಜೀಂ ಪ್ರೇಮ್ಜೀ ಫೌಂಡೇಶನ್ ₹1,000 ಕೋಟಿ ನೀಡಲಿದೆ. ವಾರ್ಷಿಕ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ಆರ್) ಹೊರತಾಗಿ ಈ ನೆರವು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.</p>.<p>ಈ ಕುರಿತ ಮಾಹಿತಿಯನ್ನು ವಿಪ್ರೊ ಸಂಸ್ಥೆಯ ಮುಖ್ಯಸ್ಥರಶೀದ್ ಪ್ರೇಮ್ಜೀ ಅವರು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.</p>.<p><strong>ಜೆಎಸ್ಎಸ್ನಿಂದ ₹ 50 ಲಕ್ಷ (ಮೈಸೂರು):</strong> ಕೋವಿಡ್ 19 ಪರಿಹಾರ ಕಾರ್ಯಗಳಿಗೆ ಸುತ್ತೂರು ಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಮತ್ತು ಜೆಎಸ್ಎಸ್ ಸಂಸ್ಥೆಯ ನೌಕರರು ನೀಡಿರುವ ಮೊಬಲಗು ಸೇರಿಸಿ ₹ 50 ಲಕ್ಷ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.</p>.<p>ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಬುಧವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಚೆಕ್ ಹಸ್ತಾಂತರಿಸಿದರು.</p>.<p><strong>₹1 ಕೋಟಿ ಪರಿಹಾರ: ನವದೆಹಲಿ(ಪಿಟಿಐ): </strong>ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಸೋಂಕಿನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಘೋಷಿಸಿದ್ದಾರೆ.</p>.<p><strong>ಕೊರೊನಾ: ₹20 ಕೋಟಿ ನೆರವು ನೀಡಿದ ರಾಮೋಜಿ ರಾವ್<br />ಅಮರಾವತಿ (ಪಿಟಿಐ):</strong>ಕೊರೊನಾ ವೈರಸ್ ವಿರುದ್ಧದ ಹೋರಾಟದ ನೆರವಿಗಾಗಿಮಾಧ್ಯಮ ದೊರೆ ರಾಮೋಜಿ ರಾವ್ ಅವರು, ಆಂಧ್ರಪದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ₹10 ಕೋಟಿ ನೆರವು ನೀಡಿದ್ದಾರೆ.</p>.<p>ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಲಿದ್ದಾರೆ. ಜನರೂ ಈ ಸಮಸ್ಯೆಯಿಂದ ಹೊರಬರಲಿದ್ದಾರೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>