ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಹಾಯಧನ ನಿರೀಕ್ಷೆಯಲ್ಲಿ ಅಡಿಕೆ ಬೆಳೆಗಾರ

Published : 25 ಸೆಪ್ಟೆಂಬರ್ 2023, 6:32 IST
Last Updated : 25 ಸೆಪ್ಟೆಂಬರ್ 2023, 6:32 IST
ಫಾಲೋ ಮಾಡಿ
Comments
ಚಳ್ಳಕೆರೆ ತಾಲ್ಲೂಕಿನಲ್ಲಿ ವಿಸ್ತರಣೆಗೊಂಡಿರುವ ಅಡಿಕೆ
ಚಳ್ಳಕೆರೆ ತಾಲ್ಲೂಕಿನಲ್ಲಿ ವಿಸ್ತರಣೆಗೊಂಡಿರುವ ಅಡಿಕೆ
ಚಿತ್ರದುರ್ಗ ತಾಲ್ಲೂಕಿನಲ್ಲಿ ವಿಸ್ತರಣೆಗೊಂಡ ಅಡಿಕೆ
ಚಿತ್ರದುರ್ಗ ತಾಲ್ಲೂಕಿನಲ್ಲಿ ವಿಸ್ತರಣೆಗೊಂಡ ಅಡಿಕೆ
ಜಿಲ್ಲೆಯ ಸಾಂಪ್ರದಾಯಿಕ ಬೆಳೆಯ ವ್ಯಾಪ್ತಿಯಲ್ಲಿ ಅಡಿಕೆ ಇಲ್ಲ. ರೈತರ ಸಹಾಯಧನ ಬೇಡಿಕೆಯನ್ನು ಸಚಿವರ ಗಮನಕ್ಕೆ ತರಲಾಗಿದೆ
– ಸವಿತಾ, ಉಪ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಅಡಿಕೆಗಷ್ಟೇ ಸಹಾಯಧನ ನೀಡುವುದಿಲ್ಲವೆಂದು ತೋಟಗಾರಿಕೆ ಇಲಾಖೆ ಹೇಳಿದೆ. ಎಲೆಬಳ್ಳಿ ಬಾಳೆ ಮೆಣಸನ್ನು ಮಿಶ್ರ ಬೆಳೆಯಾಗಿ ಬೆಳೆಯುವಂತೆ ಸಲಹೆ ನೀಡುತ್ತಿದ್ದಾರೆ
– ಧನ್ಯಪ್ರಸಾದ್‌ ಭರಮಸಾಗರ, ಚಳ್ಳಕೆರೆ ತಾಲ್ಲೂಕು
ಸಲಿಕೆ ಹಿಡಿದು ಶ್ರಮವಹಿಸಿ ಬೆಳೆಗೆ ನೀರುಣಿಸುವ ಅಗತ್ಯವಿಲ್ಲ. ಹನಿ ನೀರಾವರಿಯಿಂದ ಸುಲಭವಾಗಿ ಬೆಳೆ ಬೆಳೆಯಬಹುದು. ಸಹಾಯಧನ ನೀಡಿದರೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ
– ಶ್ರೀನಿವಾಸರೆಡ್ಡಿ ರಂಗವ್ವನಹಳ್ಳಿ ಚಳ್ಳಕೆರೆ ತಾಲ್ಲೂಕು
ಅಂತರ್ಜಲ ಆಶ್ರಯಿಸಿದ ಬೆಳೆಗಾರ
ಹೊಳಲ್ಕೆರೆ: ಅಡಿಕೆಯು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಇಲ್ಲಿನ ರೈತರ ಬೆನ್ನೆಲುಬಾಗಿದೆ. ಅರೆಮಲೆನಾಡು ಭಾಗವಾಗಿರುವ ಹೊಳಲ್ಕೆರೆಯು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ತಾಲ್ಲೂಕು. ಇಲ್ಲಿನ ಮಣ್ಣು ಹವಾಮಾನ ಸಮೃದ್ಧ ಮಳೆಯು ಅಡಿಕೆ ಬೆಳೆಗೆ ಹೇಳಿ ಮಾಡಿಸಿದಂತೆ ಇದ್ದು ಹೆಚ್ಚು ಇಳುವರಿ ಕೊಡುತ್ತದೆ. ಅಡಿಕೆ ಬೆಲೆ ಕ್ವಿಂಟಲ್‌ಗೆ ₹ 40000ದಿಂದ ₹ 45000ದ ಆಸುಪಾಸಿನಲ್ಲಿ ಇರುವುದರಿಂದ ಇದಕ್ಕಿಂತ ಹೆಚ್ಚು ಲಾಭ ತಂದುಕೊಡುವ ಬೆಳೆ ಮತ್ತೊಂದಿಲ್ಲ ಎಂದು ನಂಬಿರುವ ರೈತರು ಅಡಿಕೆಗೆ ಮಾರು ಹೋಗಿದ್ದಾರೆ. ಕಳೆದ ವರ್ಷ 18785 ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಿಕೆ ಬೆಳೆ ಈ ವರ್ಷ ಇನ್ನೂ 5000 ಹೆಕ್ಟೇರ್ ಹೆಚ್ಚುವರಿ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಅಡಿಕೆ ಪ್ರದೇಶ ಇನ್ನೂ ವಿಸ್ತಾರಗೊಳ್ಳುತ್ತಲೇ ಇದ್ದು ಮುಂದೊಂದು ದಿನ ಮೆಕ್ಕೆಜೋಳ ಹತ್ತಿ ಸಿರಿಧಾನ್ಯ ತರಕಾರಿ ಪ್ರದೇಶಗಳು ಅಡಿಕೆ ಬೆಳೆಯಲ್ಲಿ ಲೀನವಾಗುವ ಸಂಭವ ಹೆಚ್ಚಾಗಿದೆ. ತಾಲ್ಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಕೆರೆ ತುಂಬಿಸುವ ಯೋಜನೆ ಇದೆಯಾದರೂ ಇನ್ನೂ ಕಾರ್ಯಗತ ಆಗಿಲ್ಲ. ಇಲ್ಲಿನ ಅಡಿಕೆ ಬೆಳೆಗಾರರು ಅಂತರ್ಜಲವನ್ನೇ ನಂಬಿದ್ದು ಕೊಳವೆ ಬಾವಿಗಳನ್ನು ಆಶ್ರಯಿಸಿದ್ದಾರೆ. ಕಳೆದ ವರ್ಷ ಹೆಚ್ಚು ಮಳೆ ಸುರಿದಿದ್ದರಿಂದ ಭವಿಷ್ಯದಲ್ಲೂ ಹೀಗೆಯೇ ಮಳೆ ಬರುತ್ತದೆ ಎಂದು ನಂಬಿ ಹೆಚ್ಚು ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ಮಳೆ ಇಲ್ಲದೆ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಆಗ ಕೆಲವು ರೈತರು ಲಕ್ಷಗಟ್ಟಲೆ ಸಾಲ ಮಾಡಿ ಟ್ಯಾಂಕರ್ ಮೂಲಕ ನೀರು ಹಾಕಿಸಿ ತೋಟಗಳನ್ನು ಉಳಿಸಿಕೊಂಡಿದ್ದರು. ಹಣವಿಲ್ಲದವರು ಕೈಚೆಲ್ಲಿ ಕುಳಿತು ತೋಟ ಒಣಗಿಸಿಕೊಂಡಿದ್ದರು. ಆದರೆ ಆಗ ಅಡಿಕೆ ಪ್ರದೇಶ ಕಡಿಮೆ ಇತ್ತು. ಈಗ ಅದಕ್ಕಿಂದ ತೋಟಗಳ ವ್ಯಾಪ್ತಿ ಹಲವು ಪಟ್ಟು ಹೆಚ್ಚಾಗಿದ್ದು ಟ್ಯಾಂಕರ್ ನೀರು ಹಾಕಿಸಿ ತೋಟ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಈ ವರ್ಷ ಮಳೆಗಾಲ ಮುಗಿಯುತ್ತಾ ಬಂದರೂ ಹಳ್ಳಗಳಲ್ಲಿ ನೀರು ಹರಿಯುವಷ್ಟು ಮಳೆ ಬಂದಿಲ್ಲ. ಕಳೆದ ವರ್ಷ ಹೆಚ್ಚು ಮಳೆ ಬಂದು ಕೆರೆಗಳು ತುಂಬಿದ್ದರಿಂದ ಇಲ್ಲಿಯವರೆಗೆ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಆದರೂ ಕೆಲವು ಭಾಗಗಳ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅಡಿಕೆ ಬೆಳೆಗಾರ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.
ಹನಿ ನೀರಾವರಿ ಅನಿವಾರ್ಯ
ಚಳ್ಳಕೆರೆ: ವೇದಾವತಿ ನದಿಯಲ್ಲಿ ಆಗಾಗ ನೀರು ಹರಿಯುತ್ತಿದೆ. ನದಿಗೆ ಅಡ್ಡ ನಿರ್ಮಿಸಿದ ಚೆಕ್‌ ಡ್ಯಾಮ್‌ಗಳು ಭರ್ತಿಯಾಗುತ್ತಿವೆ. ಚೆಕ್‌ಡ್ಯಾಮ್‌ ಹಾಗೂ ನದಿ ಆಸುಪಾಸಿನ ಜಮೀನುಗಳಲ್ಲಿ ಈಗ ಅಡಿಕೆ ಬೆಳೆ ನಳನಳಿಸುತ್ತಿದೆ. ತಾಲ್ಲೂಕಿನ ಕಲಮರಹಳ್ಳಿ ಗೊರ್ಲತ್ತು ತೋರೆಬೀರನಹಳ್ಳಿ ಕೊನಿಗರಹಳ್ಳಿ ಬೆಳಗೆರೆ ಟಿ.ಎನ್. ಕೋಟೆ ಬೀರನಹಳ್ಳಿ ಗೋಸಿಕೆರೆ ವಡೇರಹಳ್ಳಿ ಸೂರನಹಳ್ಳಿ ಚೌಳೂರು ಪರಶುರಾಂಪುರ ಜುಂಜರಗುಂಟೆ ನಾಗಗೊಂಡನಹಳ್ಳಿ ಜಾಜೂರು ಹಾಲಗೊಂಡನಹಳ್ಳಿ ಮುಂತಾದ ಗ್ರಾಮದ ನೂರಾರು ಎಕರೆ ಪ್ರದೇಶದಲ್ಲಿ ಅಡಿಕೆ ಸಸಿ ನಾಟಿ ಮಾಡಲಾಗಿದೆ. ಈ ಮೊದಲು ಹತ್ತಿ ಈರುಳ್ಳಿ ಮೆಕ್ಕೆಜೋಳ ಮುಂತಾದ ಅಲ್ಪಾವಧಿ ಬೆಳೆ ಬೆಳೆದು ನಷ್ಟ ಅನುಭವಿಸಿದ್ದ ರೈತರು ವೇದಾವತಿ ನದಿ ನೀರಿನ ಫಲವಾಗಿ ಇದೀಗ ದೀರ್ಘಾವಧಿ ಅಡಿಕೆ ಕೃಷಿಯತ್ತ ಮುಖ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡರೆ ಕೆರೆಗಳಿಗೆ ನೀರು ಬರುತ್ತದೆ ಎಂಬ ಆಶಾಭಾವನೆ ರೈತರದಲ್ಲಿದೆ. ಅಡಿಕೆಗೆ ಹೆಚ್ಚು ಬೇಡಿಕೆ ಹಾಗೂ ಉತ್ತಮ ಬೆಲೆ ಇರುವ ಕಾರಣ ರೈತರು ಆಕರ್ಷಿತರಾಗುತ್ತಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ತೋಟ ಕಟ್ಟುತ್ತಿದ್ದಾರೆ. ನಾಟಿ ಮಾಡಿದ ಆರಂಭದ ಒಂದೆರಡು ವರ್ಷ ಅಡಿಕೆ ಬೆಳೆಗೆ ನೆರಳು ಬೇಕು. ಹಾಗಾಗಿ ನರೇಗಾ ಯೋಜನೆ ಸೌಲಭ್ಯ ಬಳಕೆ ಮಾಡಿಕೊಂಡು ಅಡಿಕೆ ಜತೆಗೆ ನುಗ್ಗೆ ಬಾಳೆ ಪಪ್ಪಾಯಿ ಅಂತರ ಬೆಳೆಯಾಗಿ ಪ್ರಯೋಗ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT