<p><strong>ಹಾಸನ:</strong> ಕಂದಲಿಯ ಎನ್ಡಿಎಆರ್ಕೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಂಧನ ರಹಿತ ದ್ವಿಚಕ್ರ ವಾಹನ ಆವಿಷ್ಕರಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.</p>.<p>ಮೆಕಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಮುಷಾದಿಕ್ ಪಾಷಾ, ಮಹಮ್ಮದ್ ರೂಹಾನ್, ಜಿ.ಆರ್.ಭವ್ಯ, ಆಯಿಷಾ ಆಫ್ರೇನ್ ಅವರು ಇಂಧನ ರಹಿತ ದ್ವಿಚಕ್ರ ವಾಹನ ವಿನ್ಯಾಸಗೊಳಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.</p>.<p>ಈ ವಾಹನಕ್ಕೆ ಟ್ರೆಡ್ ಮಿಲ್ನ ತಾಂತ್ರಿಕತೆ ಅಳವಡಿಸಲಾಗಿದ್ದು, ವಾಹನವು ಚಲಿಸುತ್ತಿರುವಾಗಲೇ ಸವಾರ ಅದರ ಮೇಲೆ ನಡೆಯುವುದರಿಂದ ವಿದ್ಯುತ್ ಶಕ್ತಿ ಉತ್ಪಾದನೆಯಾಗಿ ಬ್ಯಾಟರಿಯಲ್ಲಿ ಶೇಖರಣೆಗೊಳ್ಳುತ್ತದೆ. ಅದೇ ವಿದ್ಯುತ್ ಶಕ್ತಿಯಿಂದ ವಾಹನವನ್ನು ಪ್ರಾರಂಭಿಸಿ ಚಲಿಸಲು ಸಹಕಾರಿಯಾಗುತ್ತದೆ.</p>.<p>ಇದು ಮನುಷ್ಯನ ದಿನನಿತ್ಯದ ವ್ಯಾಯಾಮಕ್ಕೂ ಉಪಕಾರಿ. ಇದರಿಂದ ವಾಯು ಮಾಲಿನ್ಯ ತಡೆಗಟ್ಟಬಹುದು. ಇದರ ತಯಾರಿಕಾ ವೆಚ್ಚ ಅಗ್ಗವಾಗಿರುವುದರಿಂದ ಜನ ಸಾಮಾನ್ಯರು ಕೈಗೆಟುವಕಂತಹ ಉಪಯುಕ್ತ ಸಲಕರಣೆ ಆಗಿದೆ.</p>.<p>ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ತಾಂತ್ರಿಕ ನಿರ್ದೇಶಕ ಡಾ.ಎಂ.ಜಿ.ವೆಂಕಟೇಶ್ ಮೂರ್ತಿ, ವಿಭಾಗದ ಮುಖ್ಯಸ್ಥ ಆರ್.ಜಿ.ಸಣ್ಣಮನಿ, ಉಪನ್ಯಾಸಕರಾದ ಕೆ.ಎಂ.ರಮೇಶ್, ಕುಲದೀಪಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಕಂದಲಿಯ ಎನ್ಡಿಎಆರ್ಕೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಂಧನ ರಹಿತ ದ್ವಿಚಕ್ರ ವಾಹನ ಆವಿಷ್ಕರಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.</p>.<p>ಮೆಕಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಮುಷಾದಿಕ್ ಪಾಷಾ, ಮಹಮ್ಮದ್ ರೂಹಾನ್, ಜಿ.ಆರ್.ಭವ್ಯ, ಆಯಿಷಾ ಆಫ್ರೇನ್ ಅವರು ಇಂಧನ ರಹಿತ ದ್ವಿಚಕ್ರ ವಾಹನ ವಿನ್ಯಾಸಗೊಳಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.</p>.<p>ಈ ವಾಹನಕ್ಕೆ ಟ್ರೆಡ್ ಮಿಲ್ನ ತಾಂತ್ರಿಕತೆ ಅಳವಡಿಸಲಾಗಿದ್ದು, ವಾಹನವು ಚಲಿಸುತ್ತಿರುವಾಗಲೇ ಸವಾರ ಅದರ ಮೇಲೆ ನಡೆಯುವುದರಿಂದ ವಿದ್ಯುತ್ ಶಕ್ತಿ ಉತ್ಪಾದನೆಯಾಗಿ ಬ್ಯಾಟರಿಯಲ್ಲಿ ಶೇಖರಣೆಗೊಳ್ಳುತ್ತದೆ. ಅದೇ ವಿದ್ಯುತ್ ಶಕ್ತಿಯಿಂದ ವಾಹನವನ್ನು ಪ್ರಾರಂಭಿಸಿ ಚಲಿಸಲು ಸಹಕಾರಿಯಾಗುತ್ತದೆ.</p>.<p>ಇದು ಮನುಷ್ಯನ ದಿನನಿತ್ಯದ ವ್ಯಾಯಾಮಕ್ಕೂ ಉಪಕಾರಿ. ಇದರಿಂದ ವಾಯು ಮಾಲಿನ್ಯ ತಡೆಗಟ್ಟಬಹುದು. ಇದರ ತಯಾರಿಕಾ ವೆಚ್ಚ ಅಗ್ಗವಾಗಿರುವುದರಿಂದ ಜನ ಸಾಮಾನ್ಯರು ಕೈಗೆಟುವಕಂತಹ ಉಪಯುಕ್ತ ಸಲಕರಣೆ ಆಗಿದೆ.</p>.<p>ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ತಾಂತ್ರಿಕ ನಿರ್ದೇಶಕ ಡಾ.ಎಂ.ಜಿ.ವೆಂಕಟೇಶ್ ಮೂರ್ತಿ, ವಿಭಾಗದ ಮುಖ್ಯಸ್ಥ ಆರ್.ಜಿ.ಸಣ್ಣಮನಿ, ಉಪನ್ಯಾಸಕರಾದ ಕೆ.ಎಂ.ರಮೇಶ್, ಕುಲದೀಪಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>